ಓದಿನಿಂದ ಪ್ರಶ್ನೆಗಳು ಹುಟ್ಟುತ್ತವೆ : ಡಾ| ಕೆ.ವಿ. ತಿರುಮಲೇಶ್
Team Udayavani, Apr 11, 2017, 3:43 PM IST
ಕಾಸರಗೋಡು: ಓದುಗರ ಸಂಖ್ಯೆಯನ್ನು ಲೆಕ್ಕಹಾಕಿ ಕವಿ ಬರೆಯುವುದಿಲ್ಲ. ಒಳಗಿನ ಒತ್ತಡಕ್ಕೆ ಹೊರದಾರಿ ಕಂಡುಕೊಳ್ಳಲು ಬರೆಯುತ್ತಾನೆ. ಕಾಲ ಅನಂತವಾಗಿದೆ. ಯಾವಾಗಲೋ ಯಾರೋ ಒಬ್ಬ ಓದಿದರೆ ಸಾಕು. ಅದು ಕವಿಗೆ ಸಿಕ್ಕುವ ದೊಡ್ಡ ಗೌರವ. ಓದು ಬೇಕಾಗಿರೋದು ಓದುಗನಿಗೇ ಹೊರತು ಲೇಖಕನಿಗಲ್ಲ ಎಂದು ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ| ಕೆ.ವಿ. ತಿರುಮಲೇಶ್ ಹೇಳಿದರು.
ಕಾಸರಗೋಡಿನ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ದಶಮಾನೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹ ಯೋಗದೊಂದಿಗೆ ಏರ್ಪಡಿಸಿದ “ಓದಿನ ಸುತ್ತ ಮುತ್ತ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮನುಷ್ಯ ತಾಳ್ಮೆಯಿಂದಿದ್ದಾಗ, ಉಲ್ಲಸಿತ ವಾಗಿದ್ದಾಗ ಯೋಚಿಸುತ್ತಾ, ಅನುಭವಿಸುತ್ತಾ ಓದುವುದೇ ನಿಜವಾದ ಓದು. ಓದಿನಿಂದ ಪ್ರಶ್ನೆಗಳು ಹುಟ್ಟುತ್ತವೆ ಮತ್ತು ಆ ಮೂಲಕ ಮನುಷ್ಯನ ಚಿಂತನೆಯ ಮಟ್ಟದಲ್ಲಿ ಬೆಳವಣಿಗೆ ಯುಂಟಾಗುತ್ತದೆ. ಓದು ಮೇಲು ನೆಲೆಯ ಓದಾಗಿ ರೂಪುಗೊಳ್ಳಬೇಕಾದ್ದು ಇಂದಿನ ಅನಿವಾರ್ಯತೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀಕೃಷ್ಣಯ್ಯ ಅನಂತಪುರ, ಜಯಶ್ರೀ ಅನಂತಪುರ ದಂಪತಿಗಳು ಜೊತೆಯಾಗಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಡಾ| ಕೆ.ವಿ. ತಿರುಮಲೇಶ್ ಅವರನ್ನು ರಂಗಚಿನ್ನಾರಿ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅನಂತರ ನಡೆದ ಸಂವಾದದಲ್ಲಿ ಹಲವು ಸಾಹಿತಿ ಗಳು, ಗಣ್ಯರು ಭಾಗವಹಿಸಿದರು. ರಮ್ಯಾ ಅಂಬಿಕಾನ, ಶ್ರದ್ಧಾ ಪೈವಳಿಕೆ ಮತ್ತು ಜಯಶ್ರೀ ಅನಂತಪುರ ಭಾವಗೀತೆಗಳನ್ನು ಹಾಡಿದರು. ರಂಗ ಚಿನ್ನಾರಿ ನಿರ್ದೇಶಕ ಕೆ. ಸತೀಶ್ಚಂದ್ರ ಭಂಡಾರಿ ವೇದಿಕೆಯಲ್ಲಿದ್ದರು. ಡಾ| ಯು. ಮಹೇಶ್ವರಿ, ಡಾ| ಶ್ರೀಪತಿ ಕಜಂಪಾಡಿ, ಶಶಿಕಲಾ ಬಾಯಾರು, ಶಂಕರನಾರಾಯಣ ಭಟ್ ಟಿ. ಮುಂತಾದವರು ಉಪಸ್ಥಿತರಿದ್ದರು.
ನಿರ್ದೇಶಕ ಕಾಸರಗೋಡು ಚಿನ್ನಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ| ರಾಧಾಕೃಷ್ಣ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಕೆ. ಸತ್ಯನಾರಾಯಣ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಬೋಟ್ ಮುಳುಗಡೆ; ನಾಪತ್ತೆಯಾಗಿದ್ದ ಮುಜೀಬ್ ಮೃತದೇಹ ಪತ್ತೆ
Kumbla: ಕುಸಿದು ಬೀಳುವ ಅಪಾಯದಲ್ಲಿದೆ ಉರ್ಮಿ-ಪಲ್ಲೆಕೂಡೆಲು ಕಿರು ಸೇತುವೆ
Kodagu: ತಲಕಾವೇರಿಯಲ್ಲಿ ನಿಗಧಿತ ಸಮಯಕ್ಕೆ ತೀಥ೯ರೂಪಿಣಿಯಾದ ಕಾವೇರಿ ಮಾತೆ
Kasaragod: ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಸರಕಾರ
Kasaragod: ಕೊಲೆ ಪ್ರಕರಣ: 8 ವರ್ಷ ಕಠಿಣ ಸಜೆ, ದಂಡ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.