Fraud Case ಅಮಾನ್ಯ ನೋಟು ಬದಲಾಯಿಸಿ ನೀಡುವುದಾಗಿ 57 ಲ.ರೂ. ವಂಚನೆ
Team Udayavani, Aug 8, 2024, 12:22 AM IST
ಕಾಸರಗೋಡು: ವರ್ಷಗಳ ಹಿಂದೆ ಕೇಂದ್ರ ಸರಕಾರ ಅಮಾನ್ಯಗೊಳಿಸಿದ್ದ 1,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಬದಲಾಯಿಸಿ ಕೊಡುವ ಕಂಪೆನಿ ಹೆಸರಲ್ಲಿ 57 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಐವರ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಳ್ಳಿಕೆರೆ ಮುಕ್ಕೂಟು ಕಾರಕುನ್ನಿನ ಬಿ.ಎಸ್. ವಿಲ್ಲಾದ ಇಬ್ರಾಹಿಂ ಬಾದುಶಾ (33) ನೀಡಿದ ದೂರಿನಂತೆ ಪಳ್ಳಿಕೆರೆ ಹದ್ದಾದ್ ನಗರದ ಸಮೀರ್ (ಟೈಗರ್ ಸಮೀರ್), ಕೋಟಪ್ಪಾರದ ಶರೀಫ್, ಗಿರಿ ಕೈಲಾಸ್ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2023ರ ಜ. 15ರಿಂದ 2023ರ ಆ. 30ರ ಮಧ್ಯಾವಧಿಯಲ್ಲಿ ಲಾಭದ ಭರವಸೆ ನೀಡಿ ಹಣ ಪಡೆದು ವಂಚಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಆ ಕಂಪೆನಿಗೆ ಹಣ ನೀಡಿದರೆ ಅವರು ಹೆಚ್ಚು ಲಾಭ ನೀಡುತ್ತಾರೆ ಎಂದು ನಂಬಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶರೀಫ್ ಅವರಲ್ಲಿ 125 ಕೋಟಿ ರೂ. ಮೌಲ್ಯದ ಅಮಾನ್ಯಗೊಂಡ 1,000 ರೂ. ನೋಟುಗಳಿವೆ ಎಂದು ನಂಬಿಸಿ ಸಮೀರ್ ತನ್ನನ್ನು ಸಂಪರ್ಕಿಸಿ ಅಮಾನ್ಯಗೊಂಡ ನೋಟುಗಳನ್ನು ಬದಲಾಯಿಸಿ ನೀಡುವ ಪ್ರಧಾನ ಕಂಪೆನಿಯೊಂದು ದಿಲ್ಲಿಯಲ್ಲಿ ಕಾರ್ಯವೆಸಗುತ್ತಿದೆ ಎಂದು ನಂಬಿಸಿದ್ದ. ಕೆಲವರು ವಾಹನದಲ್ಲಿ ಬಂದು ಅಮಾನ್ಯ ನೋಟುಗಳ ವ್ಯವಹಾರದ ವೀಡಿಯೋ ದೃಶ್ಯಗಳನ್ನು ತೋರಿಸಿ ತನ್ನಿಂದ ಒಟ್ಟಾರೆಯಾಗಿ 57 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ಇಬ್ರಾಹಿಂ ಬಾದ್ಶಾ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.