ಜಲ ವಿಮಾನ : ಜಲ ವಿಮಾನ ಮಹತ್ವಾಕಾಂಕ್ಷಿ ಯೋಜನೆಗೆ ಎಳ್ಳುನೀರು


Team Udayavani, Jan 24, 2020, 6:55 AM IST

jala-vimana

ಕಾಸರಗೋಡು : ವಿದೇಶಿ ಹಾಗೂ ಸ್ವದೇಶಿ ಪ್ರವಾಸಿಗರನ್ನು ಆಕರ್ಷಿ ಸುವ ಮತ್ತು ಆ ಮೂಲಕ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಕೇರಳ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಾಕಾರ ಗೊಳಿಸಲು ಯೋಜಿಸಿದ “ಸೀ ಪ್ಲೇನ್‌'(ಜಲ ವಿಮಾನ) ಯೋಜನೆಯನ್ನು ಕೈಬಿಟ್ಟಿದೆ.

ಪ್ರವಾಸೋದ್ಯಮ ಇಲಾಖೆ ಹೊಳೆ ಗಳಲ್ಲೂ, ಹಿನ್ನೀರಿನಲ್ಲೂ ಆರಂಭಿಸಲು ಉದ್ದೇಶಿಸಿದ ಜಲ ವಿಮಾನ ಯೋಜನೆ ಯನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಈ ಸಂಬಂಧ ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಫ್ಲೋಟಿಂಗ್‌ ಜೆಟ್ಟಿಗಳನ್ನು ಹರಾಜು ಮಾಡಲು ತೀರ್ಮಾನಿಸಿದೆ. ಎರಡು ವರ್ಷಗಳಿಂದ ಹೊಳೆಗಳಲ್ಲಿ ಮತ್ತು ಹಿನ್ನೀರಿನಲ್ಲಿ ತೇಲಾಡುತ್ತಿದ್ದ “ಫ್ಲೋಟಿಂಗ್‌ ಜೆಟ್ಟಿಗಳು ಪ್ರದರ್ಶನ ವಸ್ತುಗಳಾಗಿ ದಿನಗಳನ್ನು ಕಳೆದವು. ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಿಸಿದ ಫ್ಲೋಟಿಂಗ್‌ ಜೆಟ್ಟಿಯನ್ನು ಹೌಸ್‌ ಬೋಟ್‌ (ದೋಣಿ ಮನೆ) ಮಾಲಕರಿಗೆ ಹರಾಜು ಮೂಲಕ ಮಾರಾಟ ಮಾಡಲು ಜಿಲ್ಲಾ ಟೂರಿಸಂ ಪ್ರೊಮೋಶನ್‌ ಕೌನ್ಸಿಲ್‌ ನಿರ್ಧರಿಸಿದೆ.

ಕೇರಳದ ಕುಮರಗಂ, ಆಲಪ್ಪುಳ, ಕಾಸರಗೋಡು ಜಿಲ್ಲೆಯ ನೀಲೇಶ್ವರದ ಕೋಟ್ಟಪ್ಪುರಂ, ಬೇಕಲ ಮೊದಲಾದೆಡೆಗಳಲ್ಲಿ ಆರಂಭಿಸಲು ಉದ್ದೇಶಿಸಿದ ಜಲ ವಿಮಾನ ಯೋಜನೆಗೆ ಮೀನು ಕಾರ್ಮಿತರು ತೀವ್ರ ವಿರೋಧದಿಂದಾಗಿ ಈ ಯೋಜನೆಯನ್ನು ಕೈಬಿಡಲು ಪ್ರವಾಸೋದ್ಯಮಿ ಇಲಾಖೆ ನಿರ್ಧರಿಸಲು ಪ್ರಮುಖ ಕಾರಣವಾಗಿದೆ.

ಪ್ರವಾಸೋದ್ಯಮ ಇಲಾಖೆ ಕಣ್ಣೂರಿ ನಿಂದ ಕೋಟ್ಟಪ್ಪುರಕ್ಕೆ ಫ್ಲೋಟಿಂಗ್‌ ಜೆಟ್ಟಿಯನ್ನು ತಂದು ಜೋಡಿಸಿಡಲಾಗಿತ್ತು. ಮಂಗಳೂರು ವಿಮಾನ ನಿಲ್ದಾಣದಿಂದ 12 ಮಂದಿ ಕುಳಿತುಕೊಂಡು ಪ್ರಯಾಣಿ ಸಬಹುದಾದ ಕಿರು ವಿಮಾನಗಳಲ್ಲಿ ಪ್ರವಾಸಿಗರನ್ನು ಕೋಟ್ಟಪ್ಪುರಕ್ಕೆ ತಂದು ಇಳಿಸಲು ಯೋಜಿಸಲಾಗಿತ್ತು. ಈ ಫ್ಲೋಟಿಂಗ್‌ ಜೆಟ್ಟಿಗಳಿಂದ ಹೊಳೆ ಹಾಗೂ ಹಿನ್ನೀರಿನಿಂದ ಪ್ರವಾಸಿಗರನ್ನು ದಡಕ್ಕೆ ತರಲು ಸಹಕಾರಿಯಾಗಿತ್ತು.

ಕುಮರಗಂನಲ್ಲಿ ಮೀನು ಕಾರ್ಮಿಕರು ಜಲ ವಿಮಾನ ಯೋಜನೆಯನ್ನು ತೀವ್ರ ವಾಗಿ ಪ್ರತಿಭಟಿಸಿದ್ದರು. ಈ ಯೋಜನೆ ಯಿಂದ ಮೀನಿನ ಸಂತತಿ ನಾಶವಾಗು ವುದಲ್ಲದೆ, ಮೀನು ಕಾರ್ಮಿಕರು ಜೀವನ ಮಾರ್ಗವನ್ನೇ ಕಳೆದುಕೊಳ್ಳಬೇಕಾದೀತು ಮತ್ತು ಹೊಳೆ ಹಾಗೂ ಹಿನ್ನೀರಿನಲ್ಲಿ ಮೀನುಗಾರಿಕೆ ಅಸಾಧ್ಯ ಎಂಬುದು ಮೀನು ಕಾರ್ಮಿಕರ ವಾದವಾಗಿತ್ತು. ಈ ಹಿಂದಿನ ಐಕ್ಯರಂಗ ಸರಕಾರ ಜಲ ವಿಮಾನ ಯೋಜನೆಗೆ ಮುನ್ನುಡಿ ಬರೆದಿತ್ತು. ಆದರೆ ಪ್ರಸ್ತುತ ಎಡರಂಗ ಸರಕಾರ ಮೀನು ಕಾರ್ಮಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲು ತೀರ್ಮಾನಿಸಿದೆ.

ಇದೇ ಸಂದರ್ಭದಲ್ಲಿ ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡಿದೆ ಮತ್ತು ಕಾಸರಗೋಡು ಜಿಲ್ಲೆಯ ಪೆರಿಯಾದಲ್ಲಿ ಕಿರು ವಿಮಾನಗಳನ್ನು ಇಳಿಸುವ “ಏರ್‌ ಸ್ಟ್ರಪ್‌’ ಆರಂಭಿಸಲು ಉದ್ದೇಶಿಸಿರುವುದರಿಂದ ಜಲ ವಿಮಾನದ ಅಗತ್ಯವಿಲ್ಲ ಎಂಬುದಾಗಿ ಪ್ರವಾಸೋದ್ಯಮ ಇಲಾಖೆ ತೀರ್ಮಾನಕ್ಕೆ ಬಂದಿದೆ. ಯಾವುದೇ ಕ್ಷಣದಲ್ಲೂ ವಾಪಸು ಮಾಡಬೇಕೆಂಬ ವ್ಯವಸ್ಥೆಯಲ್ಲಿ ಫ್ಲೋಟಿಂಗ್‌ ಜೆಟ್ಟಿಗಳನ್ನು ಡಿ.ಟಿ.ಪಿ.ಸಿ.ಗೆ ಹಸ್ತಾಂತರಿಸಲಾಗಿತ್ತು.

ಮಹತ್ವಾಕಾಂಕ್ಷೆಯ ಜಲ ವಿಮಾನ ಯೋಜನೆ
ಮಹತ್ವಾಕಾಂಕ್ಷೆಯ ಜಲ ವಿಮಾನ ಯೋಜನೆ ಸದ್ಯ ದೇಶದಲ್ಲೇ ಪ್ರಥಮವಾಗಿ ಮಹಾರಾಷ್ಟ್ರದಲ್ಲಿ ಮಾತ್ರವೇ ಚಾಲ್ತಿಯಲ್ಲಿದೆ. ಕಾಸರಗೋಡು ಜಿಲ್ಲೆಯ ಕೋಟ್ಟಪುರದಲ್ಲಿ ಉದ್ದೇಶಿಸಿದ ಜಲ ವಿಮಾನ ಯೋಜನೆಯ ಅಂಗವಾಗಿ ಫ್ಲೋಟಿಂಗ್‌ ನಿರ್ಮಿಸಲಾಗಿತ್ತು. ಆದರೆ ಈ ಯೋಜನೆಯನ್ನು ಕೈಬಿಟ್ಟಿರುವುದರಿಂದಾಗಿ ಕೆಲವು ಕಾಲ ಫ್ಲೋಟಿಂಗ್‌ ಜೆಟ್ಟಿ ಹಿನ್ನೀರಿನಲ್ಲಿ ಪ್ರದರ್ಶನ ವಸ್ತುವಾಗಿತ್ತು. ಯೋಜನೆಯನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಈ ಫ್ಲೋಟಿಂಗ್‌ ಜೆಟ್ಟಿಯ ಅಗತ್ಯವಿಲ್ಲವೆಂಬ ಕಾರಣದಿಂದ ಫ್ಲೋಟಿಂಗ್‌ ಜೆಟ್ಟಿಯನ್ನು ಹರಾಜು ಮಾಡಲಾಗಿದೆ. ಇದರಿಂದಾಗಿ ಡಿ.ಟಿ.ಪಿ.ಸಿ.ಗೆ ವರಮಾನ ಬರುವುದರಿಂದ ಜಿಲ್ಲಾಧಿಕಾರಿಗಳು ಫ್ಲೋಟಿಂಗ್‌ ಜೆಟ್ಟಿಯನ್ನು ಹರಾಜು ಮಾಡಲು ನಿರ್ದೇಶಿಸಿದ್ದರು.
– ಬಿಜು ರಾಘವನ್‌, ಕಾರ್ಯದರ್ಶಿ, ಕಾಸರಗೋಡು ಡಿ.ಟಿ.ಪಿ.ಸಿ.

ಫ್ಲೋಟಿಂಗ್‌ ಜೆಟ್ಟಿ
ಹೊಳೆ ಅಥವಾ ಹಿನ್ನೀರಿನಲ್ಲಿ ಪ್ರವಾ ಸಿಗರನ್ನು ಹೊತ್ತು ತರುವ ಜಲ ವಿಮಾನ ಲ್ಯಾಂಡ್‌ ಮಾಡುವ ಹಿನ್ನೀರಿನಿಂದ ದಡಕ್ಕೆ ತರಲು ಈ ಫ್ಲೋಟಿಂಗ್‌ ಜೆಟ್ಟಿಗಳನ್ನು ನಿರ್ಮಿಸಲಾಗಿತ್ತು. ಒಂದೊಂದು ಫ್ಲೋಟಿಂಗ್‌ ಜೆಟ್ಟಿಗಳಿಗೆ ಸುಮಾರು 80 ಸಾವಿರ ರೂ. ವೆಚ್ಚವಾಗಿದೆ. ಇದೀಗ ಜಲ ಯೋಜನೆಯನ್ನು ಕೈಬಿಟ್ಟಿರುವುದರಿಂದಾಗಿ ಫ್ಲೋಟಿಂಗ್‌ ಜೆಟ್ಟಿಗಳನ್ನು ಹರಾಜು ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.