ವೃತ್ತಿಪರ ವೈದ್ಯ ದಂಪತಿಯಿಂದ ನಿರಾಶ್ರಿತರಿಗೆ ಆಸರೆ


Team Udayavani, Apr 26, 2018, 6:25 AM IST

Udayavani Kannada Newspaper

ಉಳ್ಳವರು ಶಿವಾಲಯ ಮಾಡುವರು… ಇಲ್ಲದವರು ಅನಾಥಾಲಯ, ಬಡ ನಿರ್ಗತಿಕರ ಸೇವೆಯಲ್ಲೇ ದೇವರನ್ನು ಅರಸುವರು. ಆತ್ಮಬಲ, ಛಲ, ಸಮಾಜಕ್ಕೆ ತನ್ನದಾದ ಒಂದು ಕೊಡುಗೆ, ಅದು ಋಣ ಸಂದಾಯವೇ ಅನ್ನಿ. ಹೀಗೆ ತಮ್ಮ ಜೀವನದಲ್ಲಿ ಸಾರ್ಥಕ್ಯ ಕಂಡುಕೊಳ್ಳುವ ಓರ್ವ ವೈದ್ಯ ದಂಪತಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಸಮೀಪ ದೈಗೋಳಿಯಲ್ಲಿ ಸದ್ದಿಲ್ಲದೆ, ಸುದ್ದಿಗೂ ಗ್ರಾಸವಾಗದೆ ಈ ಕಾಯಕದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ವೈದ್ಯಕೀಯ ಪದವಿ ಪಡೆದು 2007 ರಲ್ಲೇ ತನ್ನ ಊರಿನ ಜನತೆಯ ಸೇವೆಯಲ್ಲಿ ಆಸ್ಪತ್ರೆ ತೆರೆದು ವೃತ್ತಿ ಪ್ರಾರಂಭಿಸಿದರು.ತಮ್ಮ ಚಿಕಿತ್ಸಾ ಕೇಂದ್ರವನ್ನೇ ಕ್ರಮೇಣ ಸೇವಾ ಕೇಂದ್ರವಾಗಿ ನಿರ್ವಹಣೆ ಮಾಡಿದ್ದು ಅವರ ಮನೋಧಾಡ್ಯìಕ್ಕೆ, ಸಮಾಜಮುಖೀ ಸ್ಪಂದನಕ್ಕೆ ಇಂಬು ಕೊಟ್ಟಿತು.

ಆಯುರ್ವೇದ ವೈದ್ಯೆ ಬೆಳ್ತಂಗಡಿ ಅಳದಂಗಡಿ ಮೂಲದ ಡಾ| ಶಾರದಾ ಅವರನ್ನು ವಿವಾಹವಾದ ಬಳಿಕ ಅವರ ಸಮಾಜ ಸೇವೆಗೆ ಬಲ ಕೂಡಿದ್ದಂತೂ ನಿಜ. ತಮ್ಮ ವೈದ್ಯಕೀಯ ವೃತ್ತಿಯ ಜತೆ ನಿರ್ಗತಿಕರ ಉಚಿತ ಸೇವೆಯನ್ನು ಈ ದಂಪತಿ ಹಚ್ಚಿಕೊಂಡರು. 

2007ರಲ್ಲಿ ಸ್ಥಳೀಯ ಸಮಾನ ಮನಸ್ಕರ ಜತೆ ಸೇರಿ ಶ್ರೀ ಸತ್ಯಸಾಯಿ ಸೇವಾ ಪ್ರತಿಷ್ಠಾನ ಎಂಬ ಉಚಿತ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು. ಪ್ರಾರಂಭದಲ್ಲಿ 9 ಅನಾಥ ಬಾಲಕರಿಗೆ ಆಶ್ರಯ ನೀಡಿ ಅವರಿಗೆ ಉಚಿತ ಆಹಾರ, ವಿದ್ಯಾಭ್ಯಾಸ,ವಸತಿ ಸೌಕರ್ಯ ಒದಗಿಸಲಾಯಿತು. ಇಂದು ಹೆಮ್ಮರವಾಗಿ ಬೆಳೆದು ಶ್ರೀ ಸಾಯಿನಿಕೇತನವಾಗಿ ಮೈದಳೆ ಯಿತು. ದಾನಿಗಳ ಸಹಕಾರ ದೊಂದಿಗೆ ತಮ್ಮದೇ ಸಂಪಾದನೆ ಯನ್ನೂ ಸೇರಿಸಿ, ತಮ್ಮದೇ ಜಮೀನಿನಲ್ಲಿ ಸುಮಾರು 4000 ಚ.ಅಡಿ ವಿಸ್ತಾರದ ಒಂದು ವಸತಿ ಗೃಹವನ್ನು ನಿರ್ಮಿಸಲಾಯಿತು. ಬರಿಯ ವೃದ್ಧಾಪ್ಯವಷ್ಟೇ ಅಲ್ಲ. ಅಭಯಾರ್ತಿಗಳಿಗೆ, ನಿರ್ಗತಿಕರಿಗೆ, ಬೀದಿ ಪಾಲಾದ ಮಾನಸಿಕ ಸ್ವಾಸ್ಥÂ ಕಳೆದುಕೊಂಡವರಿಗೆ, ಮಾನಸಿಕ, ಸಾಮಾಜಿಕ ಪುನರ್ವಸತಿ ಕೇಂದ್ರವಾಗಿ ಇದು 2016ರಲ್ಲಿ ರೂಪು ಗೊಂಡಿತು. ±ಪ್ರಾಥಮಿಕ ಸಭ್ಯತೆ, ದೈಹಿಕ – ಮಾನಸಿಕ ಚಿಕಿತ್ಸಾವಿಧಿ, ಉತ್ತಮ ಆಹಾರ ಇತ್ಯಾದಿ ನೀಡಲಾಗಿ ಆಶ್ರದಲ್ಲಿ ನೆಲೆಕಂಡುಕೊಂಡವರು ಕ್ರಮೇಣ ಚೇತರಿಕೆ ಕಂಡುಕೊಂಡರು. ಮಾನಸಿಕ ಸಮತೋಲನ ಕಂಡುಕೊಂಡಾಗ 6 ಮಂದಿ ಹೆಂಗಸರನ್ನು, ಅವರ ಹೆತ್ತವರ, ಪೋಷಕರ ಸಂಪರ್ಕಗಳಿಸಿ ಮತ್ತೆ ತಮ್ಮೂರಿಗೆ ಕಳಿಸಿಕೊಡಲಾಗಿದೆ.ಈಗ ಈ ಪುನರ್ವತಿ ಕೇಂದ್ರದಲ್ಲಿ  80ಕ್ಕೂ ಮಿಕ್ಕ ವಯಸ್ಸಿನ ಮುದುಕಿಯರೂ ಬಾಳುತ್ತಿದ್ದಾರೆ. ಪರಿಚರಣೆ ಪಡೆಯುತ್ತಿದ್ದಾರೆ. ನೆಲ ಅಂತಸ್ತಿನಲ್ಲಿರುವ ವಸತಿ ಗೃಹದಲ್ಲಿ ಸುಮಾರು 40 ಮಂದಿ ಯುವತಿಯರು, ವೃದ್ಧೆಯರು ಇದ್ದಾರೆ. ದೂರದ ನೇಪಾಳದಿಂದ, ಮಧ್ಯ ಪ್ರದೇಶ, ಜಾರ್ಖಂಡ್‌, ಪಶ್ಚಿಮ ಬಂಗಾಳದಿಂದ ಮಾತ್ರವಲ್ಲದೆ ಸಮೀಪದ ನಗರಗಳಿಂದ, ದಕ್ಷಿಣದ ತಮಿಳು ನಾಡಿನಿಂದ ಬಂದವರೂ ಇಲ್ಲಿ ಆಸರೆ ಪಡೆದಿದ್ದಾರೆ.

2012ರಲ್ಲಿ ವೃದ್ಧಾಶ್ರಮದ ಮೊದಲ ಮಹಡಿಯಲ್ಲಿ ವೃದ್ಧರಿಗೆ, ಮಾನ ಸಿಕ ಖನ್ನತೆಯುಳ್ಳ ಯುವಕರಿಗೆ ಸಹಿತ 34 ಮಂದಿಗೆ ಆಸರೆ ಕಲ್ಪಿಸಲಾಯಿತು. ಪ್ರಾರಂಭದಲ್ಲಿ ಅನಾಥ ಮಕ್ಕಳನ್ನು ಸಲಹುತ್ತಿದ್ದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಆ ಮಕ್ಕಳನ್ನು ಇತರ ಅನಾಥಾಶ್ರಮಗಳಿಗೆ ವರ್ಗಾಯಿಸಲಾಯಿತು.ಈಗ ಅಂದಾಜು 58 ಲಕ್ಷ ರೂ. ವೆಚ್ಚದಲ್ಲಿ ಈಗಿನ ಕಟ್ಟಡಕ್ಕೆ ಹೊಂದಿಕೊಂಡಂತೆ 756.16 ಚ.ಮೀಟರ್‌ ವಿಸ್ತೀರ್ಣದ ಕಟ್ಟಡದ ಯೋಜನೆ ಹಾಕಿಕೊಳ್ಳಲಾಗಿದೆ. ಇದರ ಭೂಮಿ ಪೂಜೆ ಈಗಾಗಲೇ ನಡೆದಿದೆ. ಹಬೆಯಿಂದ ಕಾರ್ಯಾಚರಿಸುವ ಅಡುಗೆ ಯಂತ್ರಕ್ಕೆ  1.75 ಲಕ್ಷ ರೂ. ತಗಲುವುದಾಗಿ ಡಾ| ಉದಯ ಕುಮಾರ್‌ ತಿಳಿಸಿದ್ದಾರೆ.

ಕರ್ನಾಟಕದ ಜಬ್ಯ ಎಂಬಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಗೋ ಶಾಲೆಯೊಂದನ್ನು ಹುಟ್ಟು ಹಾಕುವ ಯೋಜನೆ ಸೇವಾ ಪ್ರತಿಷ್ಠಾನಕ್ಕಿದೆ. ಒಟ್ಟು 14 ಜನ ಉದ್ಯೋಗಿಗಳು ಇಲ್ಲಿ ಕಾರ್ಯನಿರತರಾಗಿದ್ದಾರೆ. ಮಾಸಿಕ ರೂ.2.5 ಲಕ್ಷ ಸಂಸ್ಥೆಯನ್ನು ನಡೆಸಲು ವೆಚ್ಚ ತಗಲುತ್ತದೆ. ತಮ್ಮ ವೈದ್ಯ ವೃತ್ತಿಯಿಂದ ದೊರೆಯುವ ಆದಾಯದ ಸಿಂಹಪಾಲನ್ನು ಈ ವೈದ್ಯ ದಂಪತಿ ಸೇವಾನಿಕೇತದ ವೆಚ್ಚ ಸರಿದೂಗಿಸಲು ಹೂಡುತ್ತಾರೆ. 

ಇನ್ನುಳಿದಂತೆ ಸ್ಥಳೀಯ, ಪರವೂರ ಉದಾನ ದಾನಿಗಳ ನೆರವು ನಿಯಮಿತವಾಗಿ ಇಲ್ಲದಿದ್ದರೂ ಕಾಲಾನುಕಾಲಕ್ಕೆ ಒದಗಿಬರುತ್ತದೆ. ಆದರೆ ಖರ್ಚು ವೆಚ್ಚ ತೂಗಿಸಿಕೊಂಡು ಹೋಗಲು ದುಸ್ತರ ವೆನಿಸಿದ್ದು ಉಂಟು ಅನ್ನುತ್ತಾರೆ ಈ ವೈದ್ಯ ದಂಪತಿ. ಏಕೈಕ ಸಂತಾನವಾದ ಪುತ್ರ ಶ್ರೀವತ್ಸ  ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದು ಹೆತ್ತವರ ತ್ತಾರೆ. ಮಾತ್ರವಲ್ಲ ತನ್ನ ಸಹೋದ್ಯೋಗಿ, ಮಿತ್ರರಿಂದಲೂ ದೇಣಿಗೆ ಸಂಗ್ರಹಿಸುತ್ತಾರೆ.

– ನರಸಿಂಗ ರಾವ್‌

ಟಾಪ್ ನ್ಯೂಸ್

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ

ದಸರೆಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಭಾಗದ ಅಪರಾಧ ಸುದ್ದಿಗಳು

Madikeri ಭಾಗದ ಅಪರಾಧ ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Suspend

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

\172.17.1.5ImageDirUdayavaniDaily21-09-24Daily_NewsDrugs.tif\172.17.1.5ImageDirUdayavaniDaily21-09-24Daily_NewsDrugs.tif

Uppala: ಸುಮಾರು 3.5 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ: ಓರ್ವನ ಸೆರೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ

ದಸರೆಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.