ಮಂಜೇಶ್ವರ ಬ್ಲಾಕ್‌ ಕಾಂಗ್ರೆಸ್‌ನಿಂದ ತಾಲೂಕು ಕಚೇರಿಗೆ ಜಾಥಾ


Team Udayavani, Mar 31, 2017, 1:48 PM IST

30-mjs-1-photo-1.jpg

ಮಂಜೇಶ್ವರ: ಕೇರಳವು ತನ್ನ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಬರಗಾಲ ಪರಿಸ್ಥಿತಿಯನ್ನು  ಎದುರಿಸುತ್ತಿದ್ದು ಪರಿಹಾರ ಒದಗಿಸಬೇಕಾದ ಸರಕಾರ ದೀರ್ಘ‌ ನಿದ್ರೆಯಲ್ಲಿ ಮುಳುಗಿದೆಯೆಂದು ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್‌ ಟೀಕಿಸಿದ್ದಾರೆ.

ಹನಿ ನೀರಿಲ್ಲದೆ ಜನತೆ ಸಂಕಷ್ಟ ಪಡುತ್ತಿರುವಾಗ ಮಂತ್ರಿಗಳು ಅನಗತ್ಯ ವಿವಾದಗಳನ್ನು  ಸೃಷ್ಟಿಸುವ ತವಕದಲ್ಲಿದ್ದಾರೆ. ಕೊಳವೆ ಬಾವಿ ಕೊರೆಯಲು ನಿಯಂತ್ರಣ ಹೇರಿದ ಸರಕಾರವು ಕುಡಿಯುವ ನೀರು ಒಗಗಿಸಲು ಮಾರ್ಚ್‌ ಆಂತ್ಯದ ವರೆಗೂ ಮುಂದಾಗದಿರುವುದು ಆಕ್ಷೇಪಾರ್ಹ. ನದಿ ನೀರು ಬಳಸಿ ಕೃಷಿ ನಡೆಸುವುದಕ್ಕೂ ಈ ಸರಕಾರ ಅಡ್ಡಿಪಡಿಸುತ್ತಿದೆ. ನದಿ ನೀರು ಬಳಸಿ ಕೃಷಿ ನಡೆಸಲು ಪ್ರೋತ್ಸಾಹಿಸುವ ಬದಲು ಕಿರುಕುಳ ನೀಡುವುದು ಅನ್ಯಾಯವಾಗಿದ ಎಂದರು.

ಸರಕಾರವು ಕೃಷಿಕರಿಗೆ ಪರ್ಯಾಯ ನೀರಾವರಿ ವ್ಯವಸ್ಥೆ ಮಾಡಿ ಈ ನಿಯಂತ್ರಣ ಗಳನ್ನು ತಂದಿದ್ದರೆ ಒಪ್ಪಿಕೊಳ್ಳಬಹುದಾಗಿತ್ತು. ಆಧಿಕಾರದ ಅಹಂಕಾರದಲ್ಲಿ ದಿನಕ್ಕೊಂದು ಕಾನೂನು ರೂಪಿಸುವ ಈ ಸರಕಾರವು ಜನತೆಗೆ ಹೊರೆಯಾಗಿ ಮಾರ್ಪಟ್ಟಿದೆ. ಮಾರಕ ಎಂಡೋಸಲ್ಫಾನ್‌ ಪ್ರಯೋಗದ ಬಲಿಪಶುಗಳಾಗಿ ಜೀವತ್ಛವಗಳಂತೆ ಕಾಳಕಳೆಯುತ್ತಿರುವ ಜನತೆಯ ಹೆಸರಿನಲ್ಲಿ  ರಾಜಕೀಯ ಲಾಭ ಪಡೆದು ಅಧಿಕಾರಕ್ಕೇರಿದ ಸರಕಾರವು ಆ ಬಡಪಾಯಿಗಳನ್ನೂ ಮರೆತು ವಂಚನೆ ಎಸಗಿದೆ. ಜಿಲ್ಲೆಯ ಅಭಿವೃದ್ಧಿಯಲ್ಲೂ ಸರಕಾರ ಮಲತಾಯಿ ಧೋರಣೆ ಮುಂದುವರಿಯುತ್ತಿದೆ. ಭೀಕರ ಕ್ಷಾಮಕ್ಕೆ ಸಮಾನವಾದ ಪರಿಸ್ಥಿತಿ ಜಿಲ್ಲೆಯಲ್ಲಿ ಉದ್ಭವಿಸಿದ್ದು. ಅಪಾರ ಕೃಷಿ ಹಾನಿ  ಸಂಭವಿಸಿದೆ. ಪುಟ್ಟ ಮಗುವಿನಿಂದ ತೊಡಗಿ ಮುತ್ತಜ್ಜಿ ಪ್ರಾಯದ  ಸ್ತ್ರೀ ಸಮುದಾಯ ಕಿರುಕುಳಕ್ಕೊಳಗಾಗುತ್ತಿರುವುದು ನಿತ್ಯ ವಾರ್ತೆಗಳಾಗಿವೆ. ಪೊಲೀಸ್‌ ವ್ಯವಸ್ಥೆ ಅಪಹಾಸ್ಯಕ್ಕೀಡಾಗಿದೆ. ಜನಹಿತವನ್ನು ಮರೆತು ದಾಷ್ಟéìದ ಆಡಳಿತ ನಡೆಸಿದರೆ ಸರಕಾರವು ಪ್ರತಿಭಟನೆಗಳ ಸರಣಿಯನ್ನೇ ಎದುರಿಸ ಬೇಕಾದೀತು ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.
ಎಂಡೋಸಲ್ಫಾನ್‌ ಪೀಡಿತರಿಗೆ ಸಹಾಯಹಸ್ತ ನೀಡುವಲ್ಲಿ ಸರಕಾರದ ವೈಫಲ್ಯ ಬರಪರಿಹಾರ ಕಾರ್ಯಗಳನ್ನು ನಡೆಸುವಲ್ಲಿ ಸರಕಾರ ಉದಾಸೀನ ಧೋರಣೆಗಳನ್ನು ಪ್ರತಿಭಟಿಸಿ ಮಂಜೇಶ್ವರ ಬ್ಲಾಕ್‌ ಕಾಂಗ್ರೆಸ್‌ನ ಸಮಿತಿಯ ಆಶ್ರಯದಲ್ಲಿ ಮಂಜೇಶ್ವರ ತಾಲೂಕು ಕಚೇರಿ ಮುಂದೆ ನಡೆಸಿದೆ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಉಮ್ಮರ್‌ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಕಾಂಗ್ರೆಸ್‌ ಅಧ್ಯಕ್ಷರಾದ ಸತ್ಯನ್‌ ಸಿ. ಉಮ್ಮಳ. ಸತ್ಯನಾರಾಯಣ ಕಲ್ಲೂರಾಯ, ಮಜಾಲು ಮೊಹಮ್ಮದ್‌, ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಯಾದ ಹಮೀದ್‌ ಕೋಡಿಯಡ್ಕ, ದಾಮೋದರ ಮಾಸ್ತರ್‌, ಹಮೀದ್‌ ಕೋಡಿಯಡ್ಕ, ಇಬ್ರಾಹಿಂ ಐಆರ್‌ ಡಿಸಿ, ಸದಾಶಿವ ಕೆ. ಗುರುವಪ್ಪ ಮಂಜೇಶ್ವರ, ನವೀನ್‌ ಮಂಗಲ್ಪಾಡಿ, ಓಂ ಕೃಷ್ಣ, ನಾಗೇಶ ಮಂಜೇಶ್ವರ ಸದಾಶಿವ ಕೆ.ಜೆ. ಮೊಹಮ್ಮದ್‌, ರಂಜಿತ್‌ ಮಂಜೇಶ್ವರ, ಫ್ರಾನ್ಸಿಸ್‌, ಜನಪ್ರತಿನಿಧಿಗಳಾದ ಮಮತಾ ದಿವಾಕರ, ಶಂಷಾದ್‌ ಶುಕೂರ್‌, ಶಶಿಕಲಾ, ಸುನಿತಾ ಡಿ’ಸೋಜಾ, ಪ್ರಸಾದ್‌ ರೈ, ಹೇಮಲತಾ, ಚಂದ್ರಾವತಿ ಸೀತಾ ಡಿ., ಯುವ ಕಾಂಗ್ರೆಸ್‌ ಮುಖಂಡರಾದ ಶರೀಫ್‌ ಅರಿಬೈಲು, ಇಕ್ಬಾಲ್‌ ಕಳಿಯೂರು, ಶರ್ಮಿಳಾ ಡಿ’ಸೋಜಾ, ಝಕರಿಯಾ, ಇರ್ಷಾದ್‌ ಮಂಜೇಶ್ವರ, ಹಮೀದ್‌ ಕಣಿಯೂರು, ಸುಧಾಕರ ಉಜಿರೆ ಮುಂತಾದವರು ಭಾಗವಹಿಸಿದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

6

Arrested: ಪತ್ನಿಯ ಕೊ*ಲೆಗೆ ಯತ್ನ; ಪತಿಯ ಬಂಧನ

Kasargod: ಕೊ*ಲೆ ಯತ್ನ: ನಾಲ್ವರ ಬಂಧನ

Kasargod: ಕೊ*ಲೆ ಯತ್ನ: ನಾಲ್ವರ ಬಂಧನ

Arrested: ಹಲವು ಪ್ರಕರಣಗಳ ಆರೋಪಿ ಬಂಧನ

Arrested: ಹಲವು ಪ್ರಕರಣಗಳ ಆರೋಪಿ ಬಂಧನ

Kasargod: ವಿದ್ಯಾರ್ಥಿಗೆ ಹಲ್ಲೆ: ಇಬ್ಬರಿಗೆ ಸಜೆ, ದಂಡ

Kasargod: ವಿದ್ಯಾರ್ಥಿಗೆ ಹಲ್ಲೆ: ಇಬ್ಬರಿಗೆ ಸಜೆ, ದಂಡ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.