ಕನ್ನಡದಲ್ಲಿ ಮತದಾರರ ಚೀಟಿ,ಪಟ್ಟಿ,ನೋಟಿಸು,ಸೂಚನೆ ಯಾವುದೂ ಇಲ್ಲ

ಚುನಾವಣಾ ಇಲಾಖೆ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ನೀಡಿದ ಉತ್ತರಕ್ಕೂ ಬೆಲೆ ಇಲ್ಲ

Team Udayavani, Apr 27, 2019, 6:00 AM IST

VOTER-ID

ಪತ್ರಕ್ಕೆ ಇಂಗ್ಲಿಷ್‌ನಲ್ಲಿ ಉತ್ತರ, ಮಲಯಾಳದಲ್ಲಿ ಮಾತ್ರ ಭಿತ್ತಿಪತ್ರ.

ಕಾಸರಗೋಡು: ಭಾರತೀಯ ಚುನಾವಣ ಆಯೋಗದ ಸೂಚನೆ ಮೇರೆಗೆ ಭಾಷಾ ಅಲ್ಪಸಂಖ್ಯಾಕ ಕನ್ನಡ ಪ್ರದೇಶವಾದ ಕಾಸರಗೋಡು, ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಯಮ ಪ್ರಕಾರ ಕನ್ನಡದಲ್ಲೂ ಮತದಾರ ಚೀಟಿ, ಮತದಾರ ಪಟ್ಟಿ, ಉಮೇದ್ವಾರರ ವಿವರಣೆಯಿರುವ ನೋಟಿಸು, ಮತದಾರರಿಗೆ ಸೂಚನೆಗಳು ಮೊದಲಾದವುಗಳನ್ನು ವಿತರಿಸಲಾಗುವುದು ಮತ್ತು ಪ್ರದರ್ಶಿಸಲಾಗುವುದು ಎಂದು ರಾಜ್ಯ ಚುನಾವಣ ಇಲಾಖೆ ಮಾಹಿತಿ ಹಕ್ಕು ಪ್ರಕಾರ ಉತ್ತರ ನೀಡಿದ್ದರೂ ಜಿಲ್ಲಾ ಚುನಾವಣಾಧಿಕಾರಿಗಳು ಅದನ್ನು ಅನುಷ್ಠಾನಗೊಳಿಸದಿರುವುದು ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡಿನಲ್ಲಿ ಕನ್ನಡದಲ್ಲೂ ಮತದಾರ ಪಟ್ಟಿ, ಚೀಟಿ, ಭಿತ್ತಿಪತ್ರಗಳನ್ನು ಒದಗಿಸಬೇಕೆಂದು ಕನ್ನಡಿಗರು ರಾಜ್ಯ ಚುನಾವಣ ಆಯೋಗಕ್ಕೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾ ಧಿಕಾರಿಯವರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಮನವಿ ನೀಡಿದ್ದರು. ಮಾತ್ರವಲ್ಲ, ಕನ್ನಡದಲ್ಲಿ ಮಾಹಿತಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಚುನಾವಣ ಇಲಾಖೆಗೆ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಪ್ರಶ್ನೆಯನ್ನೂ ಕೇಳಲಾಗಿತ್ತು.

ಮುಳ್ಳೇರಿಯಾದ ಕೆ.ಎಂ. ಗೋಪಾಲಕೃಷ್ಣ ಭಟ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಚುನಾವಣ ಇಲಾಖೆಯ ಅಧಿಕಾರಿಗಳು ಕಾಸರಗೋಡು, ಮಂಜೇಶ್ವರಗಳಲ್ಲಿ ಕನ್ನಡದಲ್ಲೂ ಮಾಹಿತಿ ನೀಡಬೇಕೆಂದು ಭಾರತೀಯ ಚುನಾವಣ ಆಯೋಗದ ಸೂಚನೆಯಿದೆಯೆಂದೂ ಆ ಮೇರೆಗೆ ಕನ್ನಡದಲ್ಲೂ ಮತದಾರಪಟ್ಟಿ, ಮತದಾರ ಚೀಟಿ, ನೋಟಿಸು ಮೊದಲಾದವುಗಳನ್ನು ವಿತರಿಸಲಾಗುವುದು ಹಾಗೂ ಪ್ರದರ್ಶಿಸಲಾಗುವುದು ಎಂದು ಉತ್ತರಿಸಿದ್ದರು.

ಆದರೆ ಕಾಸರಗೋಡು, ಮಂಜೇಶ್ವರದ ಮತದಾರರಿಗೆ ಕನ್ನಡದಲ್ಲಿ ಮತದಾರ ಚೀಟಿ, ಮತದಾರ ಪಟ್ಟಿ ಸೂಚನೆಗಳು ಯಾವುದನ್ನೂ ವಿತರಿಸಲಾಗಿಲ್ಲ. ಮತಗಟ್ಟೆಗಳ ಹೊರಗೆ ಪ್ರದರ್ಶಿಸಿದ ಸೂಚನಾಫಲಕಗಳು, ಭಿತ್ತಿಪತ್ರಗಳು ಮಾತ್ರವಲ್ಲ ಫಾರ್ಮ್ ಹದಿನೈದರಲ್ಲಿ ಪ್ರದರ್ಶಿಸಲಾದ ಉಮೇದ್ವಾರರ ವಿವರಗಳೂ ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರವೇ ಇದ್ದುದರಿಂದ ಕನ್ನಡ ಮಾತ್ರ ಅರಿತ ಸಾಮಾನ್ಯ ಕನ್ನಡಿಗ ಮತದಾರರು ಸಂಕಷ್ಟಕ್ಕೊಳಗಾದರು.

ರಾಜಕೀಯ ಪ್ರೇರಣೆ?
ಕನ್ನಡದಲ್ಲಿ ಮತದಾರ ಚೀಟಿ ಹಾಗೂ ಮತ ದಾರ ಪಟ್ಟಿ ಒದಗಿಸಬೇಕೆಂದು ಪ್ರಮುಖ ರಾಜ ಕೀಯ ಪಕ್ಷಗಳಾದ ಮುಸ್ಲಿಂಲೀಗ್‌ ಮತ್ತು ಬಿ.ಜೆ.ಪಿ. ಒತ್ತಾಯಿಸಿದ್ದರೂ ಅವರ ಮನವಿಗಳನ್ನು ಜಿಲ್ಲಾಡಳಿತ ನಿರ್ಲಕ್ಷಿಸಿದ್ದರ ಹಿಂದೆ ರಾಜಕೀಯ ಪ್ರೇರಣೆಯಿದೆ ಎನ್ನಲಾಗುತ್ತಿದೆ. ಚುನಾವಣ ಆಯೋಗದ ಜಾಲತಾಣದಲ್ಲೂ ಮತದಾರ ಪಟ್ಟಿ ಯನ್ನು ಕನ್ನಡದಲ್ಲಿ ಮುದ್ರಿಸಲಾಗಿರಲಿಲ್ಲ.

ಕನ್ನಡ ಬಲ್ಲ ನೌಕರರನ್ನು ಮಲಯಾಳ ಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದರೆ ಕನ್ನಡ ಪ್ರದೇಶದಲ್ಲಿ ನಿಯುಕ್ತರಾದ ಅ ಧಿಕಾರಿಗಳಲ್ಲಿ ಹಲವರಿಗೆ ಕನ್ನಡದ ಗಂಧಗಾಳಿಯಿರಲಿಲ್ಲ. ಮಾತ್ರವಲ್ಲ ಕನ್ನಡ ಪ್ರದೇಶದಲ್ಲಿ ನಿಯುಕ್ತರಾದ ಚುನಾವಣಾಧಿಕಾರಿಗಳು ಹಾಗೂ ನೌಕರರು ಉದ್ದೇಶಪೂರ್ವಕ ವಿಳಂಬನೀತಿ ಅನುಸರಿಸಿ ಮತದಾರರನ್ನು ನಿರುತ್ತೇಜಿಸುತ್ತಿದ್ದರು ಎಂಬ ಆರೋಪವೂ ಈ ಬಾರಿ ಕೇಳಿಬಂದಿದೆ. ಕನ್ನಡ ಭಾಷೆ ಹಾಗೂ ಕನ್ನಡ ಮತದಾರರ ಬಗೆಗಿನ ಇಂತಹ ನಿರ್ಲಕ್ಷÂ ಧೋರಣೆಯನ್ನು ಯಾವುದೇ ರಾಜಕೀಯ ಪಕ್ಷದ ನಾಯಕರಾಗಲೀ ಕಾರ್ಯಕರ್ತರಾಗಲೀ ಪ್ರತಿಭಟಿಸದಿರುವುದು ಕೂಡ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಡಿಸಿ ಕಚೇರಿ ನೌಕರರ ಕನ್ನಡ ವಿರೋಧಿ ಧೋರಣೆ ಕಾರಣ
ಜಿಲ್ಲಾ ಚುನಾವಣಾ ಧಿಕಾರಿಗಳಾದ ಜಿಲ್ಲಾ ಧಿಕಾರಿ ಕಚೇರಿಯಲ್ಲಿರುವ ಕೆಲವು ಮಂದಿ ನೌಕರರ ಕನ್ನಡ ವಿರೋಧಿ  ರಾಜಕೀಯ ಧೋರಣೆಗಳು ಈ ನಿರ್ಲಕ್ಷ್ಯಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳಲ್ಲಿ ಕನ್ನಡದಲ್ಲಿ ಯಾವುದೇ ಮಾಹಿತಿಗಳನ್ನು ನೀಡದೆ ಮತದಾನವನ್ನು ನಿರುತ್ತೇಜಿಸುವ ಮೂಲಕ ಇಲ್ಲಿ ಬಲಿಷ್ಠವಲ್ಲದ ರಾಜಕೀಯ ಪಕ್ಷವೊಂದಕ್ಕೆ ಅನುಕೂಲ ಮಾಡಿಕೊಡುವ ತಂತ್ರವನ್ನು ಅನುಸರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನು ಸಮರ್ಥಿಸುವಂತೆ ಕನ್ನಡಿಗ ಮತದಾರರಲ್ಲಿ ಹಲವರಿಗೆ ಸರಿಯಾದ ಮಾಹಿತಿ ದೊರೆಯದೆ ಮಾರ್ಗದರ್ಶನವಿಲ್ಲದೆ ಮತ ಚಲಾಯಿಸದೆ ಮರಳಿದರು. ಇದರಿಂದ ಮತಚಲಾವಣೆಯ ಪ್ರಮಾಣ ಕಡಿಮೆಯಾಯಿತೆನ್ನಲಾಗಿದೆ.

ಟಾಪ್ ನ್ಯೂಸ್

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?

17-mng-dasara

Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ

ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ

ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

18-wonderla

Bengaluru: ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಫ್ರೀ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.