![BJP 2](https://www.udayavani.com/wp-content/uploads/2024/07/BJP-2-1-415x252.jpg)
Kasaragod ಕ್ವಾಟ್ರಸ್ನಲ್ಲಿ ಮಹಿಳೆಯ ಶವ ಪತ್ತೆ; ನೇಣಿಗೆ ಶರಣಾದ ಪ್ರಿಯತಮ
Team Udayavani, Jul 4, 2024, 12:03 AM IST
![Woman’s body found in Kasaragod Quattros; Beloved who surrendered to hanging](https://www.udayavani.com/wp-content/uploads/2024/07/POLICE-5-2-620x326.jpg)
ಕಾಸರಗೋಡು: ಮಹಿಳೆಯ ಮೃತದೇಹ ಕ್ವಾಟ್ರಸೊಂದರಲ್ಲಿ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆದಾದ ಬೆನ್ನಲ್ಲೇ ಆಕೆಯ ಪ್ರಿಯತಮ ವಸತಿ ಗೃಹದಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದೆ.
ಚೆಂಗಳ ನೆಲ್ಲಿಕಟ್ಟೆ ನಿವಾಸಿ ಫಾತಿಮತ್ ಸುಹರಾ (42) ಅವರ ಶವ ಹೊಸದುರ್ಗ ರಸ್ತೆಯ ಅವಿಯಿಲ್ನ ಅಪಾರ್ಟ್ಮೆಂಟ್ನ ಕೆಳ ಅಂತಸ್ತಿನ ಕೊಠಡಿಯಲ್ಲಿ ಪತ್ತೆಯಾಗಿದ್ದು, ಮೂರು ದಿನಗಳ ಹಿಂದೆ ಸಾವಿಗೀಡಾಗಿರಬೇಕೆಂದು ಶಂಕಿಸಲಾಗಿದೆ.
ಶವ ಪತ್ತೆಯಾದ ಅಪಾರ್ಟ್ಮೆಂಟ್ನ ಬಾಗಿಲಿಗೆ ಹೊರಗಡೆಯಿಂದ ಬೀಗ ಹಾಕಲಾಗಿತ್ತು. ಬಟ್ಟೆಯನ್ನು ಹೊದಿಸಿ ಆ ಕೊಠಡಿಯ ಸೋಫಾದ ಅಡಿಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು, ಅದರ ಸುತ್ತಲೂ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದೇ ಸಂದರ್ಭದಲ್ಲಿ ಈ ಮಹಿಳೆ ಜತೆ ಅಲ್ಲಿ ವಾಸಿಸುತ್ತಿದ್ದ ಆಕೆಯ ಪ್ರಿಯತಮನೆಂದು ಹೇಳಲಾಗುತ್ತಿರುವ ಯುವಕ ಚೆರ್ಕಳ ಗ್ರಾಮದ ರಹಮ್ಮತ್ ನಗರದ ಕನಿಯಡ್ಕ ಹೌಸಿನ ಹಸೈನಾರ್(33) ಅವರ ಮೃತದೇಹ ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿರುವ ವಸತಿಗೃಹವೊಂದರ ಕೊಠಡಿಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈತ ಟಿಪ್ಪರ ಚಾಲಕನಾಗಿದ್ದ.
ಹಸೈನಾರ್ ಮತ್ತು ಸುಹರಾ ಅವರನ್ನು ಮೂರು ದಿನಗಳ ಹಿಂದೆ ನೆರೆಮನೆಯವರು ನೋಡಿದ್ದರು. ಮಂಗಳೂರಿಗೆ ಚಿಕಿತ್ಸೆಗಾಗಿ ಹೋಗುವುದಾಗಿ ಸುಹರಾ ಹಲವರಲ್ಲಿ ತಿಳಿಸಿದ್ದರೆನ್ನಲಾಗಿದೆ.
ಸುಹರಾ ಮತ್ತು ಹಸೈನಾರ್ 3 ತಿಂಗಳ ಹಿಂದೆಯಷ್ಟೇ ಕೋಟಚ್ಚೇರಿಯ ಅವಿಯಿಲ್ ಅಪಾರ್ಟ್ಮೆಂಟ್ನಲ್ಲಿ ಜತೆಗೇ ವಾಸಿಸತೊಡಗಿದ್ದರು. ಸುಹರಾ ಪತಿ ಮತ್ತು ಮಕ್ಕಳನ್ನು ಬಿಟ್ಟು ಏಕಾಂಗಿಯಾಗಿ ವಾಸಿಸುತ್ತಿದ್ದರೆ ಹಸೈನಾರ್ ಪತ್ನಿಯನ್ನು ತೊರೆದಿದ್ದನು.
ಟಾಪ್ ನ್ಯೂಸ್
![BJP 2](https://www.udayavani.com/wp-content/uploads/2024/07/BJP-2-1-415x252.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.