Mangaluru ಬ್ಯಾಂಕ್ಗೆ ಹಣ ಜಮೆ ಮಾಡಲು ಹೋದ ವ್ಯಕ್ತಿ ನಾಪತ್ತೆ
Team Udayavani, Nov 20, 2023, 11:20 PM IST
ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್ ಸಮೀಪದ ಬ್ಯಾಂಕ್ಗೆ ಹಣ ಜಮೆ ಮಾಡಲು ಹೋಗಿದ್ದ ಕೃಷ್ಣ ಪ್ರಸಾದ್ ಶೆಟ್ಟಿ (42) ಅವರು ನಾಪತ್ತೆಯಾಗಿದ್ದಾರೆ.
ಇವರು ಶೇರು ಮಾರುಕಟ್ಟೆಯ ವ್ಯವಹಾರ ನಡೆಸುತ್ತಿದ್ದು, ನ. 16ರಂದು ಅಪರಾಹ್ನ 3.45ಕ್ಕೆ ಬ್ಯಾಂಕ್ಗೆ ಹಣ ಜಮೆ ಮಾಡಲೆಂದು ಹೋಗಿದ್ದರು. ಸಂಜೆ 6ಕ್ಕೆ ಅವರ ತಂದೆಗೆ ಕರೆ ಮಾಡಿ ಶಿವಮೊಗ್ಗಕ್ಕೆ ಹೋಗುತ್ತಿದ್ದು, ನ. 17ರಂದು ಗೆಳೆಯರ ಜತೆಯಲ್ಲಿ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದರು. 6.30ಕ್ಕೆ ಶಿವಮೊಗ್ಗದ ಹೊಟೇಲ್ನಿಂದ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದರು.
ಮರುದಿನ ಬೆಳಗ್ಗೆ 11.30ಕ್ಕೆ ಅವರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. 11.48ಕ್ಕೆ ಮೆಸೇಜ್ ಮಾಡಿ ಮೊಬೈಲ್ನಲ್ಲಿ ಚಾರ್ಜ್ ಕಡಿಮೆ ಇದೆ. ಅನಂತರ ಕರೆ ಮಾಡುವುದಾಗಿ ತಿಳಿಸಿದ್ದರು. ಅನಂತರ ಸಂಪರ್ಕಕ್ಕೆ ಸಿಕಿಲ್ಲ ಎಂದು ಬಂದರು ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.