‘ಮೂಡಬಿದಿರೆ ಬೆಳವಣಿಗೆಯಲ್ಲಿ ಆಳ್ವಾಸ್ ಪಾತ್ರ ಮಹತ್ವದ್ದು’
Team Udayavani, Jun 6, 2018, 12:24 PM IST
ಮೂಡಬಿದಿರೆ : ಆರೋಗ್ಯ, ಶಿಕ್ಷಣ, ಕ್ರೀಡೆ, ಕಲೆಗಳ ನೆಲೆಗಟ್ಟಿನಲ್ಲಿ ಮೂಡಬಿದಿರೆ ನಾಡಿನ ನಕಾಶೆಯಲ್ಲಿ ಎದ್ದು ಕಾಣುವಂತಾಗುವಲ್ಲಿ ‘ಆಳ್ವಾಸ್’ ಸಮೂಹ ಸಂಸ್ಥೆಗಳ ಪಾತ್ರ ಮಹತ್ವಪೂರ್ಣವಾಗಿದೆ ಎಂದು ಇಲ್ಲಿನ ಅನಂತಪದ್ಮನಾಭ ಡೆಂಟಲ್ ಕ್ಲಿನಿಕ್ನ ಮುಖ್ಯಸ್ಥ ಡಾ| ವಿನಯಕುಮಾರ ಹೆಗ್ಡೆ ಹೇಳಿದರು.
ಆಳ್ವಾಸ್ ಹೆಲ್ತ್ ಸೆಂಟರ್ನಲ್ಲಿ ರೂಪಿಸಲಾಗಿರುವ ಕೆಫೆಟೇರಿಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಳ್ವಾಸ್ ಪ್ರವರ್ತಕ ಡಾ| ಎಂ. ಮೋಹನ ಆಳ್ವರು ತಮ್ಮ ಕನಸುಗಳನ್ನು ನನಸಾಗಿಸುತ್ತಲೇ ಬರುವ ಜತೆಗೆ ಆಧುನಿಕ ಮೂಡಬಿದಿರೆಯ ಸರ್ವಾಂಗೀಣ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ ಎಂದರು.
ಮೊಬೈಲ್ ಅಪ್ಲಿಕೇಶನ್ ಬಿಡುಗಡೆ
ಮೂಡಬಿದಿರೆಯ ದುರ್ಗಾ ಕ್ಲಿನಿಕ್ನ ಡಾ| ಬಿ. ರತ್ನಾಕರ ಶೆಟ್ಟಿ ಅವರು ಆರೋಗ್ಯ ಸೇವೆಗೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಹೆಲ್ತ್ ಸೆಂಟರ್ ನ ಆಡಳಿತ ನಿರ್ದೇಶಕ ಡಾ| ಎಂ. ಮೋಹನ ಆಳ್ವರು ‘ಸೆಂಟ್ರಲ್ ಗ್ಯಾಸ್ ‘ ವ್ಯವಸ್ಥೆಯನ್ನು ಉದ್ಘಾಟಿಸಿ, 1980ರ ದಶಕದಲ್ಲಿ ಆರೋಗ್ಯ ಸೌಲಭ್ಯಗಳಿಂದ ವಂಚಿತ ವಾಗಿದ್ದ ಮೂಡಬಿದಿರೆಯಂಥ ಊರಿನಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್ ಸ್ಥಾಪಿಸಿ, ತಜ್ಞ ವೈದ್ಯಕೀಯ ಸವಲತ್ತುಗಳನ್ನು ಒದಗಿಸಲು ಪಟ್ಟ ಕಷ್ಟ ದ ದಿನಗಳನ್ನು ಸ್ಮರಿಸಿದರು.
ಇದೇ ಸಂದರ್ಭ ಆಳ್ವರು ತಮ್ಮ 66ನೇ ಜನ್ಮದಿನವನ್ನು ದೀಪ ಬೆಳಗುವ ಮೂಲಕ ಆಚರಿಸಿದರು. ಕಾರ್ಕಳ ಜ್ಞಾನಸುಧಾ ವಿದ್ಯಾಸಂಸ್ಥೆಯ ಪ್ರವರ್ತಕ ಡಾ| ಸುಧಾಕರ ಶೆಟ್ಟಿ ಸಹಿತ ಗಣ್ಯರು, ಆಳ್ವಾಸ್ ಸಿಬಂದಿಗಳು ಡಾ| ಮೋಹನ ಆಳ್ವರಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದರು. ಡಾ| ಸದಾನಂದ ನಾಯಕ್, ವಿವೇಕ ಆಳ್ವ, ಡಾ| ವಿನಯ ಆಳ್ವ, ಡಾ| ಹನಾ ಶೆಟ್ಟಿ ಉಪಸ್ಥಿತರಿದ್ದರು.
ಆಳ್ವಾಸ್ ಹೆಲ್ತ್ ಸೆಂಟರ್ನ ವೈದ್ಯಕೀಯ ಅಧೀಕ್ಷಕ ಡಾ| ಹರೀಶ್ ನಾಯಕ್ ಸ್ವಾಗತಿಸಿ, ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು. ಡಾ| ಮಮತಾ ಗುರುಪ್ರಸಾದ್ ಅಡಿಗ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.