Bajpe: ಎಕ್ಕಾರ್‌ ಪಿಲಿ; ಅಮ್ಮನ ಸೇವೆಯೇ ಗುರಿ; ಹುಲಿ, ಸಿಂಹ ಇತರ ವೇಷಗಳ ಅಬ್ಬರ

66 ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ವೈಭವದ ದಸರಾ ಮೆರವಣಿಗೆ; ಇಡೀ ಊರಿನ ಭಕ್ತಿ, ಪ್ರೀತಿಯ ಸಂಕೇತ

Team Udayavani, Oct 9, 2024, 1:15 PM IST

3(1)

ಬಜಪೆ: ಎಕ್ಕಾರಿನ ಸಮಸ್ತ ಜನರ ಭಕ್ತಿ ಭಾವದ ಪ್ರತೀಕವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಾಗುವ ನವರಾತ್ರಿಯ ವೈಭವದ ಎಕ್ಕಾರ್‌ ಪಿಲಿ ಮೆರವಣಿಗೆಗೆ ಈಗ 66 ವರ್ಷ. 1958ರಲ್ಲಿ ಆರಂಭಗೊಂಡ ದಸರಾ ಮೆರವಣಿಗೆ ಪ್ರತಿ ವರ್ಷವೂ ನವರಾತ್ರಿಯ ಏಳನೇ ದಿನ, ಮೂಲಾ ನಕ್ಷತ್ರ-ಶಾರದಾ ಪೂಜೆಯಂದೇ ನಡೆಯುತ್ತದೆ. ಎಕ್ಕಾರು ಶ್ರೀ ಗೋಪಾಕೃಷ್ಣ ಭಜನ ಮಂದಿರದಿಂದ ಹೊರಟು ಗ್ರಾಮ ದೈವ ಶ್ರೀ ಕೊಡಮಣಿತ್ತಾಯ ದೈವದ ಗೋಪುರ ಎದುರು ಪ್ರಾರ್ಥಿಸಿ ಕಟೀಲು ಕ್ಷೇತ್ರಕ್ಕೆ ತೆರಳುತ್ತದೆ. ಈ ಬಾರಿ ಅ. 9ರಂದು ಈ ಮೆರವಣಿಗೆ ನಡೆಯಲಿದ್ದು, ಅದಕ್ಕಾಗಿ 60ರಷ್ಟು ಹುಲಿಗಳು, ನಾನಾ ವೇಷಗಳೊಂದಿಗೆ ಊರಿನ ಜನರು ಸಜ್ಜಾಗಿದ್ದಾರೆ.

ದೇವರ ಸೇವೆ, ಹರಕೆಯ ಕುಣಿತ
ಕಟೀಲು ಜಾತ್ರೆ ಸಂದರ್ಭ ಕಟೀಲು ಶ್ರೀ ದುರ್ಗೆ ಆರಾಟೋತ್ಸವದಂದು ಎಕ್ಕಾರು ತಾಂಗಾಡಿ ಕಟ್ಟೆಗೆ ಮೆರವಣಿಗೆಯಲ್ಲಿ ಬಂದು ಪೂಜೆ ಸ್ವೀಕರಿಸುವುದು ಹಿಂದಿನಿಂದ ಬಂದ ಸಂಪ್ರದಾಯ. ನವರಾತ್ರಿ ವೇಳೆ ಎಕ್ಕಾರಿನ ಜನ ಭಕ್ತಿಯಿಂದ ಗುಂಪು ಗುಂಪಾಗಿ ವಿವಿಧ ವೇಷಗಳೊಂದಿಗೆ ಕಟೀಲಿಗೆ ಹೋಗುವುದು ಇನ್ನೊಂದು ಸಂಪ್ರದಾಯ.

ಎಕ್ಕಾರಿನಿಂದ ಹೊರಡುವ ಹುಲಿ, ಇತರ ವೇಷಗಳ ಗುರಿ ಅಮ್ಮನ ಸೇವೆ ಮಾತ್ರ. ಕೆಲವರು ವೃತಧಾರಿಗಳಾಗಿ ವೇಷ ಹಾಕುತ್ತಾರೆ, ಇಷ್ಟಾರ್ಥ ಸಿದ್ಧಿಯ ಹರಕೆ ಹೊತ್ತು ವೇಷ ಹಾಕುತ್ತಾರೆ. ಅವರವರ ಇಚ್ಛೆಯಂತೆ ವೇಷ ಹಾಕಿ ಕುಣಿಯು ತ್ತಾರೆ. ಇಲ್ಲಿ ವೇಷ ಹಾಕಿದವರು ಬೇರೆಲ್ಲೂ ಕುಣಿಯುವುದಿಲ್ಲ. ಹಣ ಸಂಗ್ರಹವಿಲ್ಲ. ಎಕ್ಕಾರಿ ನಿಂದ ಹೊರಟು, ದೇವರ ದರ್ಶನ ಮಾಡಿ ನಂದಿನಿಯಲ್ಲಿ ಸ್ನಾನ ಮಾಡುವಲ್ಲಿಗೆ ಮುಕ್ತಾಯ.

ಇಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರಿಗೂ ವೇಷ ಹಾಕಲು ಅವಕಾಶವಿದೆ. ಆದರೆ ಹರಕೆ ವೇಷ ಹಾಕುವವರು ಮೊದಲು ಸಂಘಟಕರಿಗೆ ತಿಳಿಸಬೇಕು.

ಎಕ್ಕಾರು ಶ್ರೀ ಗೋಪಾಕೃಷ್ಣ ಭಜನ ಮಂದಿರ ದಿಂದ ಹುಲಿವೇಷ ಮೆರವಣಿಗೆ ಆರಂಭ.

 

ಕಾರ್ಮಿಕರು, ಮೇಸ್ತ್ರಿಗಳು ಮೊದಲ ಹುಲಿಗಳು
ಎಕ್ಕಾರಿನಲ್ಲಿ ಮೊದಲ ಬಾರಿಗೆ ಹುಲಿ ಹಾಕಿದ ತಂಡದಲ್ಲಿದ್ದದ್ದು ಮೇಸ್ತ್ರಿಗಳು, ಕಾರ್ಮಿಕರು. ಎಕ್ಕಾರಿನ ದಿ| ಧೂಮ ಮೇಸ್ತ್ರಿ ಅವರ ಕಾಲದಲ್ಲಿ ಮೊದಲ ಬಾರಿಗೆ ಹುಲಿ ವೇಷ ಹಾಕಲಾಗಿತ್ತು. ವ್ಯಾಯಾಮ ಗುರುಗಳಾಗಿದ್ದ ಅವರು ಹುಲಿ ಕುಣಿತದ ಹೆಜ್ಜೆಗಳನ್ನೂ ಕಲಿಸುತ್ತಿದ್ದರು. ದಿ| ಸಿದ್ದು ಪೂಜಾರಿ, ದಿ| ಮೋನಪ್ಪ ಮೊಲಿ, ಗಿರಿಯ ಮೂಲ್ಯ, ದಿ| ಸುಬ್ಬಯ್ಯ ಶೆಟ್ಟಿ, ದಿ| ಜೋಗಿ ಶೆಟ್ಟಿ, ದಿ.ಸುಂದರ್‌ ಸಾಲ್ಯಾನ್‌ ಇಂದಿಗೂ ಜನ ನೆನಪಿಸಿಕೊಳ್ಳುವ ಎಕ್ಕಾರಿನ ಹಳೆ ಹುಲಿಗಳು! ಅವರ ಜತೆಗೆ ಟೈಲರ್‌ ದಿ| ಶ್ರೀನಿವಾಸ ರಾವ್‌, ದಿ| ಲೋಕಯ್ಯ ಶೆಟ್ಟಿ, ದಿ| ತೋಂಚು ಪೂಜಾರಿ, ದಿ| ದೇಜು ಮೂಲ್ಯ, ದಿ| ವೆಂಕಟ ಶೆಟ್ಟಿ ಇತರ ವೇಷಗಳಲ್ಲಿ ಮಿಂಚಿದವರು.

ಹುಲಿ ವೇಷದ ಆರಂಭಿಕ ಹೆಜ್ಜೆಗಳು !

  • ಹುಲಿ ವೇಷಕ್ಕೆ ಬಣ್ಣ, ಹುಲಿ, ಕರಡಿ, ಸಿಂಹದ ಮಂಡೆಗಳನ್ನು ಅವರವರೇ ತಯಾರು ಮಾಡಬೇಕಿತ್ತು.
  • ಮೆರವಣಿಗೆಯ ಮುನ್ನಾ ದಿನ ಹುಲಿ ಕುಣಿತದ ಪೂರ್ವಾಭ್ಯಾಸ ನಡೆಯು ತ್ತಿತ್ತು. ಹೆಜ್ಜೆ ಸರಿ ಇಲ್ಲದಿದ್ದರೆ ಕಾಲಿಗೆ ಪೆಟ್ಟು ಮತ್ತು ಬಣ್ಣ ಹಚ್ಚಲು ಅವಕಾಶವಿಲ್ಲ.
  • ಗುಹೆಯಿಂದ ಹುಲಿ ಹೊರಬರುವ ಕಲ್ಪನೆ ಇಲ್ಲಿತ್ತು. ಮೊದಲು ಮರಿ ಹುಲಿ ಬಳಿಕ ದೊಡ್ಡಹುಲಿ. ತಾಯಿ ಹುಲಿ ಮಕ್ಕಳಿಗೆ ಹಾಲು ಉಳಿಸುವ ದೃಶ್ಯವೂ ಇತ್ತು.
  • ಕೆಲವು ವರ್ಷಗಳ ಅನಂತರ ನಾಲ್ವರು ಹೆಗಲ ಮೇಲೆ ಹೊತ್ತುಕೊಂಡ 4 ಒನಕೆ ಗಳ ಮೇಲೆ ಹುಲಿ ಕುಣಿಯುವ, ಜಂಡೆ ತಿರುಗಿಸುವ ಸಾಹಸವೂ ನಡೆಯುತ್ತಿತ್ತು.
  • ದಂಡಿಗೆಗೆ ಬಾಳೆ, ಸೊಪ್ಪುಗಳನ್ನು ಕಟ್ಟಿ ಹುಲಿ, ಸಿಂಹಗಳು ಪೊದೆಯಿಂದ ಹೊರಬರುವ ಸನ್ನಿವೇಶ ನಿರ್ಮಿಸಲಾಗುತ್ತಿತ್ತು.
  • ಹಿಡಿಯಲು ಎತ್ತರದ ವ್ಯಕ್ತಿಗಳ ಆಯ್ಕೆ ನಡೆಯುತ್ತಿತ್ತು.
  • ಹುಲಿ, ಸಿಂಹ, ಕರಡಿ, ಶಾದೂìಲ, ಬೇಟೆಗಾರನ ವೇಷಗಳ ಜತೆ ಕುರುಕುರು ಮಾಮ, ಜಕ್ಕ ಮದೀನ, ಅನಾರ್ಕಲಿ ವೇಷಗಳೂ ಇದ್ದವು. ಹೆಣ್ಮಕ್ಕಳಂತೂ ವೇಷಗಳ ಬಳಿ ಹೋಗಲು ನಾಚುತ್ತಿದ್ದರು!

ಪ್ರಥಮ ಮೆರವಣಿಗೆ ಖರ್ಚು 32 ರೂ.!
ದಿ| ಧೂಮ ಮೇಸ್ತ್ರಿ ಹುಲಿ ತಂಡ ಕಟ್ಟಿದರೆ ಹುಲಿ ಮತ್ತು ಮೆರವಣಿಗೆ ತಂಡಕ್ಕೆ ಪ್ರೋತ್ಸಾಹಕರಾಗಿ ನಿಂತವರು ದಿ| ಕಮಲಾಕ್ಷ ಭಟ್‌ ಕಲ್ಲಮುಂಡ್ಕೂರು, ದಿ| ರಮಾನಾಥ ಕಾಮತ್‌, ತಾಂಗಾಡಿ ದಿ| ಶ್ರೀನಿವಾಸ ರಾವ್‌. ಶಿಕ್ಷಕರಾದ ತಾಂಗಾಡಿ ದಿ| ಶ್ರೀನಿವಾಸ ರಾವ್‌ ಅವರು ವೇಷಭೂಷಣ, ಇತರ ಸಾಮಗ್ರಿ, ಮೆರವಣಿಗೆ ವ್ಯವಸ್ಥೆಗೆ ಮುಖ್ಯಸ್ಥರು. ಅವರ ಪುತ್ರರು ಅದನ್ನು ಮುಂದುವರಿ ಸಿದ್ದರು. ಈಗ ದಸರಾ ಮಹೋತ್ಸವ ಸಮಿತಿ ನೇತೃತ್ವ ವಹಿಸಿದೆ.

ಅಂದಹಾಗೆ ಪ್ರಥಮ ಮೆರವಣಿಗೆಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಮೊತ್ತ 38 ರೂ. 14 ಅಣೆ, ಖರ್ಚು 32 ರೂ. 14 ಅಣೆ, ಉಳಿತಾಯ 6 ರೂಪಾಯಿ!

-ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

PM Modi

Congress ಬೇಜವಾಬ್ದಾರಿ ಪಕ್ಷ, ದ್ವೇಷ ಹರಡುವ ಕಾರ್ಖಾನೆ : ಪ್ರಧಾನಿ ಮೋದಿ ಕಿಡಿ

Watch Video: ಲಖೀಂಪುರ್‌ ನ ನಡುಬೀದಿಯಲ್ಲಿ ಬಿಜೆಪಿ ಶಾಸಕ ವರ್ಮಾಗೆ ಕಪಾಳಮೋಕ್ಷ, ರಂಪಾಟ

Watch Video: ಲಖೀಂಪುರ್‌ ನ ನಡುಬೀದಿಯಲ್ಲಿ ಬಿಜೆಪಿ ಶಾಸಕ ವರ್ಮಾಗೆ ಕಪಾಳಮೋಕ್ಷ, ರಂಪಾಟ

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

arrest-lady

Hubli; ವ್ಯಾಪಾರಿಯ ಬೆತ್ತ*ಲೆ ವಿಡಿಯೋ: ಮಹಿಳೆ ಸೇರಿ ಐವರ ಬಂಧನ

Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ

Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ

Kerala Cinema: ಮಲಯಾಳಂ ಖ್ಯಾತ ನಟ ಟಿಪಿ ಮಾಧವನ್‌ ವಿಧಿವಶ; ಗಣ್ಯರ ಸಂತಾಪ

Kerala Cinema: ಮಲಯಾಳಂ ಖ್ಯಾತ ನಟ ಟಿಪಿ ಮಾಧವನ್‌ ವಿಧಿವಶ; ಗಣ್ಯರ ಸಂತಾಪ

6-sathish

Chikkamagaluru: ವಿರೋಧ ಪಕ್ಷದವರು ಹೇಳಿದ ತಕ್ಷಣ ಸರ್ಕಾರ ಬೀಳುವುದಿಲ್ಲ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Mangaluru: ಈ ಮೇಸ್ಟ್ರು ಹುಲಿ ತಂಡಗಳ ತಾಯಿ ಹುಲಿ!

Mangaluru University: 9ಕ್ಕೂ ಅಧಿಕ ಪಿ.ಜಿ. ಕೋರ್ಸ್‌ಗೆ ವಿದ್ಯಾರ್ಥಿಗಳಿಲ್ಲ !

Mangaluru University: 9ಕ್ಕೂ ಅಧಿಕ ಪಿ.ಜಿ. ಕೋರ್ಸ್‌ಗೆ ವಿದ್ಯಾರ್ಥಿಗಳಿಲ್ಲ !

Mangaluru: “ಐ ವಾಚ್‌’ ಗಿಫ್ಟ್‌ ಆಸೆಗೆ 1,10,028 ರೂ. ಕಳೆದುಕೊಂಡರು

Mangaluru: “ಐ ವಾಚ್‌’ ಗಿಫ್ಟ್‌ ಆಸೆಗೆ 1,10,028 ರೂ. ಕಳೆದುಕೊಂಡರು

Gangolli

Mangaluru: ಉಸಿರಾಟ ಸಮಸ್ಯೆ; ಎಂಟು ತಿಂಗಳ ಗರ್ಭಿಣಿ ಸಾವು

Mangaluru: ಹುಲಿ ವೇಷದ ಅಬ್ಬರ ಸವಿಯಲಿರುವ ತಾರೆಯರು

Mangaluru: ಹುಲಿ ವೇಷದ ಅಬ್ಬರ ಸವಿಯಲಿರುವ ತಾರೆಯರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

PM Modi

Congress ಬೇಜವಾಬ್ದಾರಿ ಪಕ್ಷ, ದ್ವೇಷ ಹರಡುವ ಕಾರ್ಖಾನೆ : ಪ್ರಧಾನಿ ಮೋದಿ ಕಿಡಿ

9-gadag

Gadag: 14 ರಂದು ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 6ನೇ ಪುಣ್ಯಸ್ಮರಣೆ

Watch Video: ಲಖೀಂಪುರ್‌ ನ ನಡುಬೀದಿಯಲ್ಲಿ ಬಿಜೆಪಿ ಶಾಸಕ ವರ್ಮಾಗೆ ಕಪಾಳಮೋಕ್ಷ, ರಂಪಾಟ

Watch Video: ಲಖೀಂಪುರ್‌ ನ ನಡುಬೀದಿಯಲ್ಲಿ ಬಿಜೆಪಿ ಶಾಸಕ ವರ್ಮಾಗೆ ಕಪಾಳಮೋಕ್ಷ, ರಂಪಾಟ

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

8-kalburgi

Kalaburagi: ಕೀಟನಾಶಕ ಸಿಂಪಡಣೆ ಮಾಡುವಾಗ ನಿರ್ಲಕ್ಷ್ಯ ವಹಿಸಿದರೆ ಕಣ್ಣಿಗೆ ಅಪಾಯ:ಡಾ.ರಾಜಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.