Bajpe: ಸೋಮವಾರದ ಸಂತೆ: ಬೆಳ್ಳುಳ್ಳಿಯೇ ಮಾರುಕಟ್ಟೆಯ ರಾಜ!
ಶುಂಠಿ, ಅಲಸಂಡೆ, ಮುಸುಂಬಿ ಅಗ್ಗ; ಆದರೂ ಖಾಯಸ್ಸಿಲ್ಲ!
Team Udayavani, Sep 24, 2024, 5:26 PM IST
ಬಜಪೆ: ಸೋಮವಾರದ ಬಜಪೆ ಸಂತೆಯಲ್ಲಿ ಶುಂಠಿ, ಅಲಸಂಡೆ ಸೇರಿದಂತೆ ಕೆಲವು ತರಕಾರಿಗಳು ಮತ್ತು ಮುಸುಂಬಿ ಹಣ್ಣಿನ ದರದಲ್ಲಿ ಇಳಿಕೆ ಕಂಡಿತ್ತು. ಆದರೆ ಗ್ರಾಹಕರಿಂದ ಬೇಡಿಕೆ ಅಷ್ಟಾಗಿ ಇರಲಿಲ್ಲ. ಸ್ಥಳೀಯ ಗೆಣಸು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.
ಸೆಪ್ಟಂಬರ್ ಮೊದಲ ವಾರದ ತನಕ ಶುಂಠಿ ಕೆ.ಜಿ.ಗೆ 70 ರೂ. ಇತ್ತು. ಈಗ 20 ರೂಪಾಯಿ ಕಡಿಮೆಯಾಗಿ ಕೆ.ಜಿ.ಗೆ ಕೇವಲ 50 ರೂಪಾಯಿ ಎಂದು ಸಂತೆ ವ್ಯಾಪಾರಿಗಳು ಧ್ವನಿವರ್ಧಕವಿಟ್ಟು ಜನರನ್ನು ಕರೆಯುವ ದೃಶ್ಯ ಕಂಡುಬರುತ್ತಿತ್ತು. ಆದರೂ ಜನರು ಶುಂಠಿ ಖರೀದಿಗೆ ಹೆಚ್ಚು ಆಸಕ್ತಿ ತೋರಿದಂತೆ ಕಂಪುಬರಲಿಲ್ಲ
ಅಲಸಂಡೆ ಆಗಸ್ಟ್ ಅಂತ್ಯದಲ್ಲಿ ಕೆ.ಜಿ.ಗೆ 85 ರೂ. ಇತ್ತು. ಕಳೆದ ಒಂದು ವಾರದಿಂದ ಇಳಿಕೆ ಕಾಣುತ್ತಾ ಬಂದು ಪ್ರಸ್ತುತ ಒಂದೂವರೆ ಕೆ.ಜಿ.ಗೆ 50 ರೂಪಾಯಿ ಎಂದು ವ್ಯಾಪಾರಿಗಳು ಕೂಗಿ ಕೂಗಿ ಗ್ರಾಹಕರನ್ನು ಸೆಳೆಯುತ್ತಿದ್ದರು. ಅಂತೆಯೇ ಮುಸುಂಬಿ ಹಣ್ಣಿನ ದರದಲ್ಲಿಯೂ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಮುಸುಂಬಿ ರಾಶಿಯೇ ಕಂಡು ಬಂದಿದೆ. ಕೆ.ಜಿ.ಗೆ 50ರಿಂದ 60 ರೂ.ಗಳಿಗೆ ಮಾರಾಟವಾಗುತ್ತಿತ್ತು.
ಬೆಳ್ಳುಳ್ಳಿ ಬೆಲೆ ಮಾತ್ರ ಈಗ 400ರ ಗಡಿ ಸಮೀಪಿಸಿದೆ. ದೊಡ್ಡ ಗಾತ್ರದ ಬೆಳ್ಳುಳ್ಳಿ ಕೆ.ಜಿ.ಗೆ ಭರ್ತಿ 400 ರೂ. ಗಳಂತೆ ಬಿಕರಿಯಾಗಿದೆ. ಆದರೂ ಬೆಳ್ಳುಳ್ಳಿಯ ಲಭ್ಯತೆ ಕಡಿಮೆ ಇತ್ತು.
ಹೊಸ ನೀರುಳ್ಳಿ, ಬಟಾಟೆ ಆವಕ
ನೀರುಳ್ಳಿ ಮತ್ತು ಬಟಾಟೆಯ ಹೊಸ ಫಸಲು ಮಾರುಕಟ್ಟೆಗೆ ಈಗ ಆಗಮನವಾಗುತ್ತಿದೆ. ಹಳೆ ನೀರುಳ್ಳಿ ಮತ್ತು ಹೊಸ ನೀರುಳ್ಳಿ ಕೆ.ಜಿ.ಗೆ 10 ರೂ. ವ್ಯತ್ಯಾಸವಿದೆ. ಅಂತೆಯೇ ಹೊಸ ಹಾಗೂ ಹಳೆ ಬಟಾಟೆಗೆ 5 ರೂ. ವ್ಯತ್ಯಾಸವಿದೆ. ಊರಿನ ಗೆಣಸು ಕೂಡ ಸಂತೆಗೆ ಬಂದಿದ್ದು, ಕೆ.ಜಿ.ಗೆ 80 ರೂ.ಗಳಂತೆ ಮಾರಾಟವಾಗುತ್ತಿದೆ. ಹಿಂದೆಲ್ಲ ಗೆಣಸಿನ ಬೆಳೆಗೆ ಬಜಪೆ ಪ್ರಸಿದ್ಧ. ಟನ್ ಗಟ್ಟಲೆ ಗೆಣಸು ಬೆಳೆಸುತ್ತಿದ್ದ ಪರಿಸರದ ಕೃಷಿಕರು ಈ ಬಾರಿ ಕಡಿಮೆ ಗೆಣಸನ್ನು ಬೆಳೆಸಿರುವುದು ದರ ಏರಿಕೆಗೆ ಕಾರಣ. ದೀಪಾವಳಿ ಸಂದರ್ಭ ದೊಡ್ಡ ಪ್ರಮಾಣದಲ್ಲಿ ಗೆಣಸು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ
Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Mangaluru: ಕೆಟ್ಟು ಹೋದ ಒಳಹಾದಿ, ಸಂಚಾರ ಸಂಕಷ್ಟ
Mangaluru: ಜಾಗ ಗುರುತಿಸಿದ್ದರೂ ತ್ಯಾಜ್ಯ ವಿಲೇವಾರಿಗೆ ಪರದಾಟ
Mangaluru: ಮತ್ತೆ ನಗರಕ್ಕೆ ಕೊಳೆತ ಮೀನಿನ ದುರ್ವಾಸನೆ ಶಿಕ್ಷೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್ಡಿಕೆ
Saligrama: ಚತುಷ್ಪಥ ರಸ್ತೆಯ ಅನಧಿಕೃತ ಒತ್ತುವರಿ ತೆರವಿಗೆ ಅಂತಿಮ ಹಂತದ ಸಿದ್ಧತೆ
Udupi: ಕತ್ತಲಲ್ಲಿ ಶೀಂಬ್ರಾ ಸೇತುವೆ: ಅಕ್ರಮಗಳ ಅಡ್ಡೆ!
3 ಡಿ ಮ್ಯೂರಲ್ ಹೃದಯಗಳೊಂದಿಗೆ ಕೆಂಪಾದ ಬೆಂಗಳೂರು ನಗರ
ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.