![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 17, 2023, 12:06 AM IST
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಬೀಡಿ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬೀಡಿ ಕಂಟ್ರಾಕ್ಟರುದಾರರಿಗೆ 2022-23ರಲ್ಲಿ ನೀಡಲು ಬಾಕಿಯಾದ ಹೆಚ್ಚುವರಿ ಕಮಿಷನ್ಗಾಗಿ ಆಡಳಿತ ವರ್ಗಕ್ಕೆ ವಿವಿಧ ಬೀಡಿ ಗುತ್ತಿಗೆದಾರರ ಸಂಘಟನೆಗಳು ಸಲ್ಲಿಸಿದ ಮನವಿಗೆ ಮಾಲಕರ ಒಕ್ಕೂಟ ಸ್ಪಂದಿಸಿದೆ.
ಇದರಂತೆ ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್ ಅವರ ನೇತೃತ್ವದಲ್ಲಿ ಜಂಟಿ ಸಭೆ ನಡೆದು ಸುದೀರ್ಘ ಚರ್ಚೆಯಾದ ಪರಿಣಾಮ ಉಭಯಸ್ಥರ ನಡುವೆ 1 ಸಾವಿರ ಬೀಡಿಗೆ ಹಿಂದೆ ಪಾವತಿಸುತ್ತಿದ್ದ ಕಮಿಷನ್ 26.75 ರೂ.ಗೆ ಹೆಚ್ಚುವರಿಯಾಗಿ 2.60 ರೂ. ಸೇರಿಸಿ 29.35 ರೂ. ನೀಡಲು ಒಪ್ಪಲಾಯಿತು ಎಂದು ಬೀಡಿ ಗುತ್ತಿಗೆದಾರರ ಸಂಘಟನೆ ಪ್ರಮುಖರಾದ ಮಹಮ್ಮದ್ ರಫಿ ತಿಳಿಸಿದ್ದಾರೆ.
ಬೀಡಿ ಕೈಗಾರಿಕೆ ಒಕ್ಕೂಟದ ಅಧ್ಯಕ್ಷರಾದ ಜಗನ್ನಾಥ ಶೆಣೈ, ಸುಬ್ರಾಯ ಎಂ. ಪೈ, ಆನಂದ ಪ್ರಭು, ಅಭಿಷೇಕ್ ಪೈ, ಸತೀಶ್ ಪೈ, ಬೀಡಿ ಗುತ್ತಿಗೆದಾರರ ಸಂಘಟನೆ ಪ್ರಮುಖರಾದ ಮಹಮ್ಮದ್ ರಫಿ, ರವಿ ಉಡುಪಿ, ಹರೀಶ್ ಕೆ.ಎಸ್., ಕೃಷ್ಣಪ್ಪ ತೊಕ್ಕೊಟ್ಟು, ಗಂಗಾಧರ ಶೆಟ್ಟಿ ಪುತ್ತೂರು, ಸಿ. ಮೊಹಮ್ಮದ್ ಬೆಳ್ತಂಗಡಿ, ಕೃಷ್ಣ ಕಾಸರಗೋಡು ಭಾಗವಹಿಸಿದ್ದರು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.