![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 14, 2020, 2:24 PM IST
ಸುರತ್ಕಲ್: ಇಲ್ಲಿನ ಬೈಕಂಪಾಡಿ ಸಿಂಡಿಕೇಟ್ ಬ್ಯಾಂಕ್ ಬಳಿ ಹೆದ್ದಾರಿ ಇಲಾಖೆ ಗುಂಡಿ ತೋಡಿದ್ದು, ಸದ್ಯ ಅದರಲ್ಲಿ ಮಳೆ ನೀರು ನಿಂತು ಜನ ಸಂಕಷ್ಟ ಅನುಭವಿಸುವಂತಾಗಿದೆ.
ಮಳೆ ನೀರು ಹರಿದು ಹೋಗಲು ಎಂಬ ಕಾರಣಕ್ಕೆ ಸಿಂಡಿಕೇಟ್ ಬ್ಯಾಂಕ್ ಬಳಿ ಜೆಸಿಬಿ ವಾಹನದಿಂದ ಹೊಂಡ ತೋಡಲಾಗಿದೆ. ಆದರೆ ನೀರು ಹರಿಯುವ ಬದಲು ಅಲ್ಲೇ ನಿಂತು ಜನರು ಬೀಳುವಂತಾಗಿದೆ.
ಎದುರಲ್ಲೇ ಬ್ಯಾಂಕ್ ಒಂದರ ಎಟಿಎಂ ಇದ್ದು ಹಣ ತೆಗೆಯಲು ಬರುವ ಮಂದಿ ಇಲ್ಲಿ ಹೊಂಡ ಇರುವುದು ತಿಳಿಯದೆ ಬೀಳುತ್ತಿದ್ದಾರೆ. ಈಗಾಗಲೇ ಅನೇಕರು ಬಿದ್ದು ಕಾಲು ಉಳುಕಿಸಿಕೊಂಡಿದ್ದಾರೆ. ಹಣ ಹೊಂಡದ ಪಾಲಾಗಿದೆ.ಇನ್ನು ಹೊಂಡ ತೆಗೆದ ಪರಿಣಾಮ ನೀರು ನಿಂತು ಜನರು ನಡೆಯಲು ಸಾಧ್ಯವಾಗುತ್ತಿಲ್ಲ.ರಸ್ತೆಯವರೆಗೆ ನೀರು ನಿಂತಿದೆ. ಸ್ವಲ್ಪ ಏಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.
ಹೊಂಡದಲ್ಲಿ ಕೆಸರು ನೀರು ತುಂಬಿ ಹೋಗಿದ್ದು ಗೊತ್ತಿಲ್ಲದೆ ಇಲ್ಲಿ ಯಾರಾದರೂ ಕಾಲಿಟ್ಟರೆ ಕೆಸರು ನೀರಿಗೆ ಬೀಳುವ ಅಪಾಯವಿದೆ. ಯಾವುದೇ ಪ್ರಾಣಾಪಾಯ ನಡೆಯುವ ಮೊದಲು ತಕ್ಷಣ ಈ ಬಗ್ಗೆ ಹೆದ್ದಾರಿ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ತುರ್ತು ಕ್ರಮ ಕೈಗೊಳ್ಳ ಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.