![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
Team Udayavani, Jul 23, 2020, 8:41 AM IST
ತುಂಬೆ ಸಮೂಹ ಸಂಸ್ಥೆಗಳು ಮತ್ತು ಬಿಸಿಎಫ್ ವತಿಯಿಂದ ಯುಎಇಯಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಲಾಯಿತು.
ಮಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ಡೌನ್ನಿಂದಾಗಿ ಯುಎಇಯಲ್ಲಿ ಸಿಲುಕಿಕೊಂಡಿದ್ದವರನ್ನು ಮಂಗಳೂರಿಗೆ ಕರೆತರಲು ತುಂಬೆ ಸಮೂಹ ಸಂಸ್ಥೆ ಮತ್ತು ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತವಾಗಿ ಬಿಎಸ್ಎಫ್ ಚಾರ್ಟರ್ಡ್ ವಿಮಾನ ಮಂಗಳವಾರ ಯುಎಇ ರಾಸ್ ಅಲ್ ಖೈಮಾದಿಂದ ಮಂಗಳೂರಿಗೆ ತಲುಪಿತು. ನೌಕರಿ ಕಳೆದುಕೊಂಡವರು, ವೀಸಾ ಅವಧಿ ಮುಗಿದವರು, ವಿವಿಧ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದವರು, ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳ ಸಹಿತ 185 ಪ್ರಯಾಣಿಕರು ತಾಯ್ನಾಡಿಗೆ ತಲುಪಿದರು.
ತುಂಬೆ ಗ್ರೂಪ್ ಮಾಲಕ, ಬಿಸಿಎಫ್ ಸ್ಥಾಪಕ ಪೋಷಕ ಡಾ| ತುಂಬೆ ಮೊಯಿದೀನ್ ಹಾಗೂ ಬಿಎಸ್ಎಫ್ ಅಧ್ಯಕ್ಷ ಡಾ | ಬಿ.ಕೆ. ಯೂಸುಫ್ ಅವರ ನೇತೃತ್ವದಲ್ಲಿ ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ| ಕಾಪು ಮೊಹಮದ್ ಹಾಗೂ ತುಂಬೆ ಗ್ರೂಪ್ನ ಫರ್ಹಾದ್ ಅವರ ಉಸ್ತುವಾರಿಯಲ್ಲಿ ಈ ಕಾರ್ಯ ನಡೆಯಿತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಸಿಎಫ್ ಪೋಷಕ ಮುಮ್ತಾಜ್ ಅಲಿಯವರ ನೇತೃತ್ವದಲ್ಲಿ ಮಾಜಿ ಶಾಸಕ ಮೊದಿನ್ ಬಾವಾ, ಯು.ಟಿ . ಇಫ್ತಿಕಾರ್, ಬಿಸಿಎಫ್ ಕೇಂದ್ರ ಅಧ್ಯಕ್ಷ ಎಸ್ಎಂಆರ್ ರಶೀದ್ ಅವರು ಪ್ರಯಾಣಿಕರನ್ನು ಸ್ವಾಗತಿಸಿದರು.
ಜು.24ಕ್ಕೆ ಇನ್ನೊಂದು ವಿಮಾನ
ಜು.24ರಂದು ತುಂಬೆ ಬಿಸಿಎಫ್ ಸಹಭಾಗಿತ್ವದಲ್ಲಿ ಇನ್ನೊಂದು ಚಾರ್ಟರ್ಡ್ ವಿಮಾನ ಮಂಗಳೂರಿಗೆ ಆಗಮಿಸಲಿದೆ. ಅಲ್ಲದೆ ಶೀಘ್ರದಲ್ಲಿ ಇನ್ನೂ ಇಂತಹ ಹಲವಾರು ವಿಮಾನಗಳು ತುಂಬೆ ಬಿಸಿಎಫ್ ಸಹಭಾಗಿತ್ವದಲ್ಲಿ ಆಗಮಿಸಲಿವೆ ಎಂದು ತುಂಬೆ ಬಿಸಿಎಫ್ ವಕ್ತಾರರು ತಿಳಿಸಿದ್ದಾರೆ.
Udupi-Kasaragod: ಪರ್ಯಾಯ ಮಾರ್ಗ ಮೂಲಕ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.20ರಂದು ಬೃಹತ್ ಜಾಥಾ
Mangaluru ಬಲ್ಮಠ: ಮನೆಯಿಂದ ಕಳವು; ಪ್ರಕರಣ ದಾಖಲು
Mangaluru: ವಾಯುಪಡೆ ನಿವೃತ್ತ ಅಧಿಕಾರಿ ಮೇಲಿನ ಹಲ್ಲೆ ಆರೋಪವನ್ನು ತಳ್ಳಿಹಾಕಿದ ರೈಲ್ವೇ
Mangaluru: ಮರಳಿನ ಸಮಸ್ಯೆಗೆ ಕೆಡಿಪಿ ಸಭೆಯಲ್ಲೂ ಸಿಗದ ಪರಿಹಾರ: ಸಚಿವ ದಿನೇಶ್ ಗುಂಡೂರಾವ್
Mangaluru: “ರಾಜಣ್ಣ ಆಸೆಪಟ್ಟರೆ ತಪ್ಪಿಲ್ಲ’:ಸಚಿವ ದಿನೇಶ್ ಗುಂಡೂರಾವ್
You seem to have an Ad Blocker on.
To continue reading, please turn it off or whitelist Udayavani.