ಸಂಕಷ್ಟದಲ್ಲಿ ಕರಾವಳಿಯ ಮತ್ಸ್ಯ ಉದ್ಯಮ!

ಕಠಿನ ನಿಯಮಾವಳಿಯಿಂದ ರಫ್ತು ಕುಸಿತ

Team Udayavani, Sep 15, 2020, 6:09 AM IST

ಸಂಕಷ್ಟದಲ್ಲಿ ಕರಾವಳಿಯ ಮತ್ಸ್ಯ ಉದ್ಯಮ!

ಸಾಂದರ್ಭಿಕ ಚಿತ್ರ

ಮಂಗಳೂರು: ಭಾರತ-ಚೀನ ನಡುವಿನ ಸಂಘರ್ಷಮಯ ಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದಿಂದ ಮೀನು ಆಮದಿಗೆ ಚೀನವು ಕಠಿನ ನಿಯಮಾವಳಿಗಳನ್ನು ರೂಪಿಸಿರುವುದು ಕರಾವಳಿಯ ಮೀನುಗಾರರನ್ನು ಸಂಕಷ್ಟಕ್ಕೆ ತಳ್ಳಿದೆ.

ರಾಜ್ಯದಿಂದ ಪ್ರತೀ ವರ್ಷ ಸುಮಾರು 1 ಸಾವಿರ ಕಂಟೈನರ್‌ಗಳ ಮೂಲಕ ಚೀನಕ್ಕೆ ಮೀನು ರಫ್ತು ಆಗುತ್ತದೆ. ಒಂದು ಕಂಟೈನರ್‌ನಲ್ಲಿ 25 ಟನ್‌ ಮೀನು ಇರುತ್ತದೆ. ಕಪ್ಪೆ ಬೊಂಡಾಸ್‌, ಬೊಂಡಾಸ್‌ ಮತ್ತು ಪಾಂಬೋಲು ಮೀನು ಯಥೇತ್ಛವಾಗಿ ಚೀನಕ್ಕೆ ರಫ್ತಾಗುತ್ತವೆ. ಆದರೆ ಕೊರೊನೋತ್ತರದಲ್ಲಿ ವಿದೇಶಗಳಿಂದ ಬೇಡಿಕೆ ಕುಸಿತ ಮತ್ತು ಕಟ್ಟುನಿಟ್ಟಿನ ನಿಯಮಗಳಿಂದ ರಫ್ತಿಗೆ ಹೊಡೆತ ಬೀಳುತ್ತಿದೆ.

ಚೀನ ಸಹಿತ ವಿದೇಶಗಳಿಗೆ ಕರ್ನಾಟಕದಿಂದ ಕಳೆದ ವರ್ಷ ಒಟ್ಟು 1,600 ಕೋ.ರೂ. ಮೌಲ್ಯದ ಮೀನು ರಫ್ತಾಗಿದೆ. ಆದರೆ ಮಾರ್ಚ್‌ ಬಳಿಕ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಶೇಖರಿಸಿಟ್ಟ ಮೀನು ರಫ್ತಾಗದ ನಷ್ಟ ಒಂದೆಡೆಯಾದರೆ ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರಿಗೆ ಸಂಬಳ ಸಹಿತ ಇತರ ವ್ಯವಸ್ಥೆ ಕಲ್ಪಿಸಿದ್ದರಿಂದಲೂ ನಷ್ಟವಾಗಿದೆ. ಸದ್ಯ ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗಿದ್ದರೂ ರಫ್ತು ಇನ್ನೂ ಆರಂಭವಾಗಿಲ್ಲ.

ಸದ್ಯದ ಮಾಹಿತಿಯಂತೆ ಚೀನ ಮಾರುಕಟ್ಟೆಯಲ್ಲಿ ಮೀನಿಗೆ ಬೇಡಿಕೆ ಕಡಿಮೆಯಿದೆ. ಮೀನು ರಫ್ತಾಗುವ ಕಂಟೈನರ್‌ಗಳನ್ನು ಸ್ಯಾನಿಟೈಸ್‌ ಮಾಡ ಬೇಕು ಎನ್ನುವುದರ ಸಹಿತ ಕಠಿನ ನಿಯಮಾವಳಿ ರೂಪಿಸಿದ್ದರಿಂದ ಮುಂದಿನ ಸ್ಥಿತಿಗತಿಯ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ರಾಜ್ಯದಿಂದ ಐರೋಪ್ಯ ದೇಶಗಳು, ಬ್ಯಾಂಕಾಕ್‌, ಥಾçಲ್ಯಾಂಡ್‌, ಮಲೇಷ್ಯಾ, ಕೊರಿಯಾ ಮತ್ತಿತರ ದೇಶಗಳಿಗೂ ಮೀನು ರಫ್ತಾಗುತ್ತಿತ್ತು. ಅವು ಕೂಡ ಮಾರ್ಚ್‌ನಿಂದ ಸ್ಥಗಿತಗೊಂಡಿದ್ದು, ಮರಳಿ ಆರಂಭವಾಗಿಲ್ಲ.

ಪ್ರಯೋಗಾಲಯ ಪರೀಕ್ಷೆ ಇಲ್ಲಿಲ್ಲ!
ಕೇಂದ್ರ ಸರಕಾರದ “ಸಮುದ್ರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ’ದ ಕಚೇರಿ ಮಂಗಳೂರಿನಲ್ಲಿ ಇದ್ದರೂ ಇಲ್ಲಿಂದ ರಫ್ತಾಗುವ ಮೀನಿನ ಪ್ರಯೋಗಾಲಯ ಪರೀಕ್ಷೆಗಾಗಿ ಕೊಚ್ಚಿಯಲ್ಲಿರುವ ಕೇಂದ್ರ ಕಚೇರಿಯನ್ನು ಅವಲಂಬಿಸಬೇಕಾಗಿದೆ. ರಫ್ತು ಮಾಡುವ ಕಾರ್ಖಾನೆಯಲ್ಲಿ ಲ್ಯಾಬ್‌ ಇದ್ದರೂ ವಾರ್ಷಿಕವಾಗಿ ನಡೆಯಬೇಕಾದ ಪರೀಕ್ಷೆಯ ವರದಿಯನ್ನು ಕೊಚ್ಚಿಯಿಂದಲೇ ಪಡೆಯಬೇಕಾದ ಕಾರಣ ಕರಾವಳಿಯ ರಫ್ತು ಉದ್ಯಮಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಂಗಳೂರಿನಲ್ಲೇ ಪ್ರಯೋಗಾಲಯ ಆರಂಭಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರೂ ಸಮಸ್ಯೆ ತಪ್ಪಿಲ್ಲ.

ಏರ್‌ಕಾರ್ಗೊ ದರ ದುಪ್ಪಟ್ಟು !
ಸದ್ಯ ಏರ್‌ ಕಾರ್ಗೊ ಮಾತ್ರ ನಿರ್ವಹಣೆಯಾಗುತ್ತಿದ್ದು, ದರ ಏರಿದೆ. ಇದು ಕೂಡ ಮೀನು ರಫ್ತಿಗೆ ಹೊಡೆತ ನೀಡುತ್ತಿದೆ. ಸದ್ಯ 100 ರೂ. ಮೌಲ್ಯದ ಮೀನನ್ನು 300 ರೂ. ವ್ಯಯಿಸಿ ಕಳುಹಿಸಿಕೊಡುವ ಸ್ಥಿತಿಯಿದೆ. ಹೀಗಾಗಿ ಮಾರ್ಚ್‌ನಿಂದ ಇಲ್ಲಿಯ ವರೆಗೆ ಮೀನು ರಫ್ತು ಮಾಡಿಲ್ಲ. ವಿಮಾನಯಾನ ಸಂಸ್ಥೆಗಳು ದರ ಕಡಿಮೆ ಮಾಡಿದರೆ ಉತ್ತಮ ಎನ್ನುತ್ತಾರೆ ಓರ್ವ ರಫ್ತು ಉದ್ಯಮಿ.

ಚೀನ ಸೇರಿದಂತೆ ವಿದೇಶಗಳಿಗೆ ರಾಜ್ಯದಿಂದ ಕಳೆದ ವರ್ಷ ಸುಮಾರು 1,600 ಕೋ.ರೂ. ಮೌಲ್ಯದ ಮೀನು ರಫ್ತಾಗಿದೆ. ಈ ಬಾರಿ ಮೀನುಗಾರಿಕೆ ಆರಂಭ ತಡವಾದದ್ದರಿಂದ ಕೆಲವು ದಿನಗಳ ಬಳಿಕ ರಫ್ತು ಆರಂಭವಾಗುವ ನಿರೀಕ್ಷೆಯಿದೆ. ಅಲ್ಲಿನ ಬೇಡಿಕೆಗೆ ಆಧರಿಸಿ ವಹಿವಾಟು ನಡೆಯಲಿದೆ.
– ಪಾರ್ಶ್ವನಾಥ್‌, ಮೀನುಗಾರಿಕೆ ಉಪನಿರ್ದೇಶಕರು, ಮಂಗಳೂರು

ಮೀನು ರಫ್ತು ಮಾಡುವ ಕಾರ್ಖಾನೆಗಳು
ಮಂಗಳೂರು 12
ಉಡುಪಿ 10
ಉತ್ತರ ಕನ್ನಡ 3
ಒಟ್ಟು: 25

 ದಿನೇಶ್‌ ಇರಾ

ಟಾಪ್ ನ್ಯೂಸ್

Road Mishap ಮೂಳೂರಿನಲ್ಲಿ ಸರಣಿ ಅಪಘಾತ: ಮೂರು ಕಾರು ಜಖಂ

Road Mishap ಮೂಳೂರಿನಲ್ಲಿ ಸರಣಿ ಅಪಘಾತ: ಮೂರು ಕಾರು ಜಖಂ

1-sadasd

OCA ಅಧ್ಯಕ್ಷರಾಗಿ ರಣಧೀರ್‌ ಸಿಂಗ್‌ ಅವಿರೋಧ ಆಯ್ಕೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

Laxmeshwar ಮಗನ ಹಠಕ್ಕೆ ಮುಸ್ಲಿಮರ ಮನೆಯಲ್ಲಿ ಗಣೇಶ ಹಬ್ಬ !

Laxmeshwar ಮಗನ ಹಠಕ್ಕೆ ಮುಸ್ಲಿಮರ ಮನೆಯಲ್ಲಿ ಗಣೇಶ ಹಬ್ಬ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Road Mishap ಮೂಳೂರಿನಲ್ಲಿ ಸರಣಿ ಅಪಘಾತ: ಮೂರು ಕಾರು ಜಖಂ

Road Mishap ಮೂಳೂರಿನಲ್ಲಿ ಸರಣಿ ಅಪಘಾತ: ಮೂರು ಕಾರು ಜಖಂ

1-sadasd

OCA ಅಧ್ಯಕ್ಷರಾಗಿ ರಣಧೀರ್‌ ಸಿಂಗ್‌ ಅವಿರೋಧ ಆಯ್ಕೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

1-bhat-bg

Bhatkal;ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿಹೋದ ಬಾಲಕನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.