Mangaluru: ತಣ್ಣೀರುಬಾವಿ-ಸುಲ್ತಾನ್ಬತ್ತೇರಿ ಮಧ್ಯೆ ಕಾಂಕ್ರೀಟ್ ಸೇತುವೆ
ತೂಗುಸೇತುವೆ ಯೋಜನೆ ರದ್ದು , ವಾಹನ ಸಂಚಾರಕ್ಕೂ ಪೂರಕ; ಸೇತುವೆ 2 ದಶಕಗಳ ಹಿಂದಿನ ಕನಸು; ಸೇತುವೆ ಉದ್ದ 480 ಮೀ.
Team Udayavani, Aug 5, 2024, 5:27 PM IST
ಮಹಾನಗರ: ಪ್ರವಾಸೋದ್ಯಮಕ್ಕೆ ಒತ್ತು ಕೊಡುವ ಜೊತೆ ಸ್ಥಳೀಯರ ಸಂಪರ್ಕಕ್ಕೂ ಮಹತ್ವದ ಕೊಡುಗೆ ನೀಡುವ ಉದ್ದೇಶದಲ್ಲಿ ಸುಲ್ತಾನ್ ಬತ್ತೇರಿ- ತಣ್ಣೀರುಬಾವಿ ಮಧ್ಯೆ ಫಲ್ಗುಣಿ ನದಿಗೆ ಅಡ್ಡಲಾಗಿ ಕಾಂಕ್ರೀಟ್ ಸೇತುವೆ ನಿರ್ಮಿಸು ವುದಕ್ಕೆ ಮಂಗಳೂರು ಸ್ಮಾರ್ಟ್ ಸಿಟಿ ಮುಂದಾಗಿದೆ.
ಈ ಹಿಂದೆ ಇಲ್ಲಿ ತೂಗು ಸೇತುವೆ ನಿರ್ಮಿಸುವುದಕ್ಕೆಂದು ಯೋಜಿಸಲಾಗಿತ್ತು, ಆದರೆ ಸ್ಥಳೀಯರು ತೂಗುಸೇತುವೆ ಮಾಡಿ ಪ್ರಯೋಜನವಿಲ್ಲ, ಕೇವಲ ಜನರು ಕಾಲ್ನಡಿಗೆಯಲ್ಲಿ ಸಂಚರಿಸುದು ಮಾತ್ರವಲ್ಲ ವಾಹನವೂ ಸಂಚರಿಸುವಂತಹ ಅವಕಾಶ ಬೇಕು ಎಂಬ ಆಗ್ರಹ ಇರಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್ಸಿಟಿ ಲಿಮಿಟೆಡ್ ಇಲ್ಲಿ ಖಾಯಂ ಕಾಂಕ್ರೀಟ್ ಸೇತುವೆಯನ್ನೇ ನಿರ್ಮಿಸಲಿದೆ.
ಈ ನದಿಯಲ್ಲಿ ಮೀನುಗಾರರು ದೋಣಿಯೊಂದಿಗೆ ಸಂಚರಿಸಬೇಕಾಗಿರುವುದರಿಂದ ನದಿಯ ಹೈಟೈಡ್ ರೇಖೆಯಿಂದ 10 ಮೀಟರ್ನಷ್ಟು ಎತ್ತರದಲ್ಲಿರುವಂತೆ 100 ಮೀಟರ್ ಉದ್ದದ ಸೇತುವೆ ನಿರ್ಮಿ ಸಲಾಗುತ್ತದೆ. ಇವುಗಳಿಗೆ ಇಕ್ಕೆಲಗ ಳಲ್ಲೂ ತಲಾ 90 ಮೀಟರ್ ಉದ್ದದ ರ್ಯಾಂಪ್ ನಿರ್ಮಿಸ ಲಾಗುವುದು, ಅಲ್ಲದೆ ಇಕ್ಕೆಲಗ ಳಲ್ಲೂ ತಲಾ 100 ಮೀಟರ್ ಕೂಡು ರಸ್ತೆಯೂ ಇರಲಿದೆ. ಎಲ್ಲವೂ ಸೇರಿದಂತೆ ಸೇತುವೆ ಉದ್ದ 480 ಮೀ. ಇರಲಿದೆ.
ಇದು ಇಪಿಸಿ ಮಾದರಿಯಲ್ಲಿ ನಿರ್ಮಾಣಗೊಳ್ಳಲಿರುವ ಯೋಜನೆಯಾಗಿದ್ದು, ಅಂತಿಮ ನಕ್ಷೆ ಇತ್ಯಾದಿಗಳನ್ನು ಕಾಮ ಗಾರಿ ವಹಿಸಿಕೊಳ್ಳುವ ಸಂಸ್ಥೆಯವರು ರೂಪಿಸಲಿದ್ದಾರೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಶಕದ ಹಿಂದಿನ ಯೋಜನೆ
ಸುಲ್ತಾನ್ಬತ್ತೇರಿ – ತಣ್ಣೀರುಬಾವಿ ಸೇತುವೆ ನಿರ್ಮಾಣ ಎರಡು ದಶಕಗಳ ಹಿಂದಿನ ಕನಸು. ಆಗಿನ ಶಾಸಕ ಎನ್.ಯೋಗೀಶ್ ಭಟ್ ಅವರಿದ್ದಾಗಲೇ ಯೋಜನೆ ರೂಪಿಸಲಾಗಿತ್ತು. ಆಗ ಸೇತುವೆ ಮೇಲೆ ವಾಹನ ಸಂಚರಿಸುವ ಯೋಜನೆ ಇರಲಿಲ್ಲ, ಕೇವಲ ಪ್ರವಾಸೋದ್ಯಮಕ್ಕೆ ನೆರವಾಗುವ ಹಾಗೂ ಸ್ಥಳೀಯರಿಗೆ ನಡೆದಾಡುವುದಕ್ಕೆ ಮಾತ್ರವೇ ಅವಕಾಶ ವಿತ್ತು. 3 ಮೀಟರ್ ಅಗಲದ ಒಟ್ಟು 410 ಮೀಟರ್ ಉದ್ದದ 12 ಕೋಟಿ ರೂ.ನ ಯೋಜನೆ ಇದಾಗಿತ್ತು. 2012ರಲ್ಲಿ ಪ್ರಾರಂಭಗೊಂಡ ಈ ಯೋಜನೆಗೆ ನದಿ ಪಾತ್ರದಲ್ಲಿ ಪೈಲಿಂಗ್ ಕೆಲಸ ನಡೆದಿದ್ದು, ಬಳಿಕ ಹಣ ಬಿಡುಗಡೆಯಾಗದೆ ಅಲ್ಲಿಗೇ ಸ್ಥಗಿತಗೊಂಡಿತ್ತು.
ಆ ಬಳಿಕ ಮಂಗಳೂರು ಸ್ಮಾರ್ಟ್ಸಿಟಿ ಈ ಯೋಜನೆ ಮುಂದುವರಿಸುವುದಕ್ಕೆ ಯೋಜನೆ ರೂಪಿಸಿತ್ತು. ತನ್ನ ಸೀಲಿಂಕ್ ಯೋಜನೆಯಡಿಯಲ್ಲಿ ಈ ಕೆಲಸವನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಹಿಂದೆ ನಡೆದಿರುವ ಸುಮಾರು 1 ಕೋಟಿ ರೂ. ವೆಚ್ಚದ ಕೆಲಸ ಹಾಗೂ ಈಗಿನ ಹೊಸ ಯೋಜ ನೆಯ ಕೆಲಸ ಹೊಂದಾಣಿಕೆಯಾಗದ ಅದನ್ನು ಸೇರಿಸಿಕೊಳ್ಳುವಂತಿಲ್ಲ, ಇದನ್ನು ಪ್ರತ್ಯೇಕ ವಾಗಿಯೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಣ್ಣೀರುಬಾವಿ ಹತ್ತಿರವಾಗಲಿದೆ
ಮಂಗಳೂರಿನ ಸುಲ್ತಾನ್ಬತ್ತೇರಿ ಸಾಮಾನ್ಯವಾಗಿ ಪ್ರವಾಸಿಗರು ಭೇಟಿ ನೀಡುವ ಪ್ರದೇಶ. ಇದನ್ನು ತಣ್ಣೀರುಬಾವಿಗೆ ಬೆಸೆಯುವುದರಿಂದ ಈ ಭಾಗದಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯಬಹುದುಎನ್ನುವುದು ಇದರ ಮುಖ್ಯ ಉದ್ದೇಶ. ಪ್ರಸ್ತುತ ತಣ್ಣೀರುಬಾವಿಗೆ ಹೋಗುವುದಕ್ಕೆ ಕೂಳೂರು ಮೂಲಕ ಸುತ್ತಾಗಿ ಹೋಗಬೇಕುಅಥವಾ ಬಂದರಿಗೆ ಹೋಗಿ ಅಲ್ಲಿಂದ ಬೆಂಗ್ರೆಗೆ ಫೆರಿ ಮೂಲಕ ಬರಬೇಕು. ಈ ಪ್ರಮೇಯ ತಪ್ಪಿಸಿ, ನೇರವಾಗಿ ನಗರದಿಂದಲೇ ತಣ್ಣೀರುಬಾವಿಗೆ ಹೋಗಿಬರಬಹುದಾಗಿದೆ.
ಬೋ ಸ್ಟ್ರಿಂಗ್ ಸೇತುವೆ
ಇದು ಬೋ ಸ್ಟ್ರಿಂಗ್ ಎಂದರೆ ಬಿಲ್ಲಿನಾಕಾರದ ಕಮಾನಿನ ಸೇತುವೆ. ಸ್ಥಳೀಯರು ವಾಹನ ಸಂಚಾರಕ್ಕೆ ಪೂರಕ ಸೇತುವೆ ಬೇಕು ಎಂಬ ಒತ್ತಾಯ ಇರಿಸಿದ್ದರಿಂದ ಇಲ್ಲಿ ತೂಗು ಸೇತುವೆ ಕೈ ಬಿಡಲಾಗಿದೆ. ಅಂತಿಮ ವಿನ್ಯಾಸ ಇತ್ಯಾದಿಗಳನ್ನು ಟೆಂಡರ್ ಪಡೆಯುವ ಸಂಸ್ಥೆಯೇ ಸಿದ್ಧಪಡಿಸಲಿದೆ.
-ಅರುಣ್ಪ್ರಭ , ಜಿಎಂ (ತಾಂತ್ರಿಕ), ಮಂಗಳೂರು ಸ್ಮಾರ್ಟ್ಸಿಟಿ
– ವೇಣುವಿನೋದ್ ಕೆ.ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ
Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ
Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು
Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ
Rohan City Bejai: ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆಗೆ ಖಚಿತ ಪ್ರತಿಫಲ ಕೊಡುಗೆ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್ ಬೆಳ್ಳಿ’ ತೆರೆಗೆ
Space Wonder: ಇಂದು ವಿಶೇಷ ಸೂಪರ್ಮೂನ್
Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್ಐಎಗೆ ವಹಿಸಲಿ: ಶಾಸಕ ಸುನಿಲ್ ಕುಮಾರ್
Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ
Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್ ಸಿಸ್ಟಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.