![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 5, 2024, 10:00 AM IST
ಮೂಲ್ಕಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆಯಂಗಡಿ ಕೊಳುವೈಲು ಮಾರುತಿ ರೈಸ್ ಮಿಲ್ ಸಮೀಪ ಮಾ. 3ರ ಮಧ್ಯಾಹ್ನ ಭಾರೀ ಪ್ರಮಾಣದ ಗಾಳಿಗೆ ಕೆಲವು ವಿದ್ಯುತ್ ಕಂಬಗಳು ಹಾಗೂ ತೆಂಗಿನ ಮರಗಳು ಉರುಳಿ ಬಿದ್ದಿರುವ ಘಟನೆಯಲ್ಲಿ ವಿದ್ಯುತ್ ಲೈನು ದುರಸ್ತಿ ಕೆಲಸಕ್ಕೆಂದು ಬಂದಿದ್ದ ಸಿಬಂದಿ ಓರ್ವರು ಕಂಬದಿಂದ ಕೆಳಕ್ಕೆ ಬಿದ್ದು ಗಾಯಗೊಂಡವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕಿನ್ನಿಗೋಳಿಯ ವಿದ್ಯುತ್ ಗುತ್ತಿಗೆದಾರ ಸಂಸ್ಥೆಯೊಂದರ ಉದ್ಯೋಗಿ ಪುನರೂರು ಸಮೀಪದ ಕೆರೆಕಾಡು ನಿವಾಸಿ ಹರೀಶ್ (42) ಮೃತಪಟ್ಟವರು.
ಅವರು ಕಂಬದಲ್ಲಿ ಜಂಪರ್ ಕಟ್ಟುವ ಕೆಲಸ ಮಾಡುತ್ತಿದ್ದಾಗ ಅಲ್ಲಿಯೇ ಪಕ್ಕದಲ್ಲಿದ್ದ ತೆಂಗಿನ ಮರವೊಂದು ವಯರ್ ಮೇಲೆ ಬಿದ್ದ ಪರಿಣಾಮ ಕಂಬದಿಂದ ಕೆಳಗೆ ಬಿದ್ದವರನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಾ. 4ರಂದು ಸಂಜೆಯ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ. ಮೂಲ್ಕಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.