Heavy Rain: ಮೂಡುಬಿದಿರೆ ತಾಲೂಕಿನ ವಿವಿಧೆಡೆ ಹಾನಿ; ಓರ್ವ ಮಹಿಳೆ ಸಾವು
Team Udayavani, Aug 1, 2024, 1:23 PM IST
ಮೂಡುಬಿದಿರೆ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಹಲವೆಡೆ ಮನೆ, ಕಟ್ಟಡ, ತಡೆಗೋಡೆ, ಅವರಣ ಗೋಡೆ, ಸೇತುವೆ ಕುಸಿತ, ರಸ್ತೆಗಳು ಕೊಚ್ಚಿಹೋದ ಪ್ರಕರಣಗಳು ವರದಿಯಾಗಿವೆ.
ನೆಲ್ಲಿಕಾರು ಗ್ರಾಮದಲ್ಲಿ ಗೋಪಿ ಎಂಬವರ ಮನೆ ಮಳೆಯಿಂದಾಗಿ ಜು.31ರ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಕುಸಿದು ಬಿದ್ದಿದೆ.
ಮಕ್ಕಳು, ಮೊಮ್ಮಕ್ಕಳ ಸಹಿತ 5 ಮಂದಿಯೊಂದಿಗೆ ವಾಸವಾಗಿರುವ ಗೋಪಿ (56) ಅವರಿಗೆ ತೀವ್ರ ಏಟು ತಗಲಿದ್ದು, ತಕ್ಷಣ ಹೊಸ್ಮಾರು ಆಸ್ಪತ್ರೆಗೆ ಬಳಿಕ ಕಾರ್ಕಳ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗದೆ ತಡರಾತ್ರಿ ಮೃತಪಟ್ಟರು.
ಮಳೆಯಿಂದಾಗಿ ತಾಲೂಕಿನಲ್ಲಿ ಈ ಮಳೆಗಾಲದಲ್ಲಿ ಜೀವಹಾನಿ ಸಂಭವಿಸಿರುವ ಮೊದಲ ಪ್ರಕರಣ ಇದಾಗಿದೆ.
ಮುರಕಲ್ಲಿನ ಗೋಡೆ ಕುಸಿದು ಗೋಪಿ ಅವರ ಮೇಲೆಯೇ ಬಿತ್ತೆಂದೂ ಮಕ್ಕಳಾದ ಗಣೇಶ, ರಾಜೇಶ, ಸತೀಶ ಹೊರಗೆ ಓಡಿ ಹೋದ ಕಾರಣ ಪ್ರಾಣಾಪಾಯದಿಂದ ಪಾರಾದರೆಂದೂ ಹೇಳಲಾಗಿದೆ. ಮಕ್ಕಳೆಲ್ಲರೂ ಕೂಲಿ ಕಾರ್ಮಿಕರು.
ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ತಹಶೀಲ್ದಾರ್ ಪ್ರದೀಪ್ ವಿ. ಕುರ್ಡೇಕರ್, ಆರ್ ಐ. ಮಂಜುನಾಥ್, ನೆಲ್ಲಿಕಾರು ಪಂ. ಅಧ್ಯಕ್ಷ ಉದಯ ಪೂಜಾರಿ, ಪಿಡಿಓ ಪ್ರಶಾಂತ ಶೆಟ್ಟಿ, ಕಾರ್ಯದರ್ಶಿ ದಾಮೋದರ, ಸಿಬಂದಿ ಪ್ರಶಾಂತ್ ಜೈನ್, ಲಕ್ಷ್ಮಣ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.