ಬೆಳೆಯುತ್ತಿರುವ ಪಡುಬಿದ್ರಿಗೆ “ಹೆದ್ದಾರಿ’ಯೇ ಗೋಳು!


Team Udayavani, Jun 20, 2024, 2:15 PM IST

ಬೆಳೆಯುತ್ತಿರುವ ಪಡುಬಿದ್ರಿಗೆ “ಹೆದ್ದಾರಿ’ಯೇ ಗೋಳು!

ಪಡುಬಿದ್ರಿ: ದೊಡ್ಡ ಮಟ್ಟದಲ್ಲಿ ಬೆಳೆಯುವ ಎಲ್ಲ ಅವಕಾಶಗಳಿರುವ ಪಡುಬಿದ್ರಿಗೆ “ಹೆದ್ದಾರಿ’ಯೇ “ಗೋಳು’ ಎಂಬಂತಾಗಿದೆ. ಮಂಗಳೂರು-ಉಡುಪಿ- ಕಾರ್ಕಳ ಒಂದುಗೂಡಿಸುವ ಬಹುಮುಖ್ಯ ಕೇಂದ್ರವಾದ ಪಡುಬಿದ್ರಿ ದೂರದೃಷ್ಟಿ ಇಲ್ಲದ ಯೋಜನೆಗ ಳಿಂದ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಹೆದ್ದಾರಿಗೆ ಸಿಗ್ನಲ್‌ ದೀಪ ಅಳವಡಿಸಲು ಇರುವ ಕಾನೂನುರೀತ್ಯಾ ಅಡ್ಡಿ ಆತಂಕ ಜನರಿಗೆ ಮುಳುವಾಗಿವೆ.

ಚತುಷ್ಪಥ ಹೆದ್ದಾರಿಯಾಗಿ ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆಗೊಂಡಾಗ ಕರಾವಳಿಯ ಎರಡೂ ಜಿಲ್ಲೆಗಳ ಎಲ್ಲ ಕಡೆ ಅದು 60 ಮೀಟರ್‌ ಅಗಲ ಇದ್ದರೆ ಪಡುಬಿದ್ರಿಯಲ್ಲಿ ಮಾತ್ರ 45 ಮೀಟರ್‌ಗೆ ಸೀಮಿತವಾಗಿದೆ. ಹಾಗಾಗಿ ಇಲ್ಲಿನ ಹೆದ್ದಾರಿ ಸಹಿತ ಡಿವೈಡರ್‌ ಮತ್ತು ಸರ್ವೀಸ್‌ ರಸ್ತೆ ಅಗಲ ಕಿರಿದಾಗಿದೆ. ಸರ್ವೀಸ್‌ ರಸ್ತೆಯಲ್ಲಿ ಬಸ್ಸುಗಳ ಸಂಚಾರದಿಂದಾಗಿ ಪಾದಚಾರಿಗಳಿಗೆ ನಡೆದಾಡಲೂ ಭಯ ಕಾಡುತ್ತದೆ.

ಕೆಲ ಖಾಸಗಿ ಕಾರುಗಳು, ದ್ವಿಚಕ್ರ ವಾಹನ ಸರ್ವೀಸ್‌ ರಸ್ತೆಯಲ್ಲೇ ನಿತ್ಯ ಪಾರ್ಕಿಂಗ್‌ ಮಾಡುತ್ತಿರುವುದರಿಂದ ರಸ್ತೆ ತಡೆ, ವಾಹನ
ಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಪಡುಬಿದ್ರಿಯ ಜಂಕ್ಷನಲ್ಲಿ ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ  ಆರು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಕಳೆದೊಂದು ವರ್ಷದಲ್ಲೇ ಸುಮಾರು 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಹೊರ ವಲಯ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಗೊಳ್ಳುತ್ತಿರುವಾಗ ಪೇಟೆಯಲ್ಲಿ ವಾಹನ ಸಂಚಾರಗಳ ಒತ್ತಡವೂ ಮುಂದಿನ ದಿನಗಳಲ್ಲಿ ಅಪರಿಮಿತ ವೆನಿಸಲಿದೆ. ಈಗಿಂದೀಗಲೇ ಈ ಕುರಿತ ದೂರದೃಷ್ಟಿಯ ಯೋಜನೆ ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಇದರ ಶಾಶ್ವತ ಪರಿಹಾರಕ್ಕೆ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಉನ್ನತಾಧಿಕಾರಿ ಗಳಿಗೆ ವರದಿ ನೀಡುತ್ತಲೇ ಬಂದಿದ್ದಾರೆ.

ಪಡುಬಿದ್ರಿಯ ಸಂಚಾರ ಸಮಸ್ಯೆ
*ನಿತ್ಯ 200ಕ್ಕೂ ಹೆಚ್ಚು ಬಸ್‌ಗಳು ಪಡುಬಿದ್ರಿಯಲ್ಲಿ ನಿಂತು ಚಲಿಸುತ್ತದೆ. ಸರಕಾರಿ ಬಸ್ಸುಗಳಿಗೆ ಇಲ್ಲಿ ಅವಕಾಶ ಕಡಿಮೆ.
*ಇಲ್ಲಿರುವ ಯಾವುದೇ ಬಸ್ಸು ನಿಲ್ದಾಣದಲ್ಲಿ ಸಿಸಿಟಿವಿ ಅಳವಡಿಸಿಲ್ಲ.
* ಮಂಗಳೂರು-ಉಡುಪಿ ಮಧ್ಯೆ ಸಂಚರಿಸುವ ಎಲ್ಲಾ ಬಸ್ಸುಗಳು ಸರ್ವಿಸ್‌ ರಸ್ತೆ ಬಳಸಿ ಬಸ್ಸು ನಿಲ್ದಾಣಕ್ಕೆ ಬರಬೇಕು ಎಂಬ ನಿಯಮವಿದೆ. ಅದರೆ ಶೇ. 40ರಷ್ಟು ಬಸ್ಸುಗಳು ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಹತ್ತಿ ಇಳಿಸುತ್ತದೆ.
* ಹಲವು ಕೈಗಾರಿಕೆಗಳು, ಸಣ್ಣ ಉದ್ಯಮಗಳಿರುವ ಪಡುಬಿದ್ರಿ ಕಾರ್ಮಿಕರಿಂದ ಗಿಜಿಗುಡುತ್ತದೆ.

ಮೂಲ ಸೌಕರ್ಯ ಅಗತ್ಯ
ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಪಡುಬಿದ್ರಿಯಲ್ಲಿನ ಮೂಲ ಬಸ್‌ ನಿಲ್ದಾಣ ಅಸ್ತಿತ್ವ ಕಳೆದುಕೊಂಡಿತ್ತು. ಸದ್ಯ ಹೆದ್ದಾರಿಯಿಂದಾಗಿ ಸೀಳಲ್ಪಟ್ಟಿರುವ ಪಡುಬಿದ್ರಿಯ 3 ಕಡೆಗಳಲ್ಲಿ ಪಡುಬಿದ್ರಿ ಗ್ರಾ.ಪಂ. ಸಾರ್ವಜನಿಕ ಸಹಭಾಗಿತ್ವದೊಂದಿಗೆ
3 ಬಸ್‌ ನಿಲ್ದಾಣ ನಿರ್ಮಿಸಿದೆ.
* ಪಡುಬಿದ್ರಿ-ಮಂಗಳೂರು ಬಸ್‌ ನಿಲ್ದಾಣ ಹೊರತುಪಡಿಸಿ ಯಾವುದೇ ನಿಲ್ದಾಣದಲ್ಲಿ ಮೂಲ  ಸೌಕರ್ಯಗಳಿಲ್ಲ. ಒದಗಿಸಲು ಸ್ಥಳಾವಕಾಶವೂ ಇಲ್ಲ.
* ಕಾರ್ಕಳ ರಸ್ತೆ ಬಸ್‌ ನಿಲ್ದಾಣದ ಬಳಿ ಇರುವ ಅಲ್ಪ ಸ್ಥಳಾವಕಾಶದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಪಡುಬಿದ್ರಿ ಪಂಚಾಯತ್‌ 7ಲ. ರೂ. ಗಳ ಕ್ರಿಯಾ ಯೋಜನೆ ರೂಪಿಸಿದ್ದು ಇನ್ನಷ್ಟೇ ಅನುಷ್ಠಾನಗೊಳ್ಳಬೇಕಿದೆ.

ಆರಾಮ

ಟಾಪ್ ನ್ಯೂಸ್

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

Exam

Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

Theft Case ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 67.75 ಲ.ರೂ. ಮೌಲ್ಯದ ಚಿನ್ನಾಭರಣ ಕಳವು

Theft Case ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 67.75 ಲ.ರೂ. ಮೌಲ್ಯದ ಚಿನ್ನಾಭರಣ ಕಳವು

Mangaluru ಜೆಪ್ಪು ಸೆಮಿನರಿ: ಮನೆಯಿಂದ ಕಳವು

Mangaluru ಜೆಪ್ಪು ಸೆಮಿನರಿ: ಮನೆಯಿಂದ ಕಳವು

police crime

Mangalore ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ: ಇಬ್ಬರು ಆಸ್ಪತ್ರೆಗೆ

ಬಜಪೆ: ಎತ್ತ ಹೋಗಲಿ? ಎಡಕ್ಕೊ , ಬಲಕ್ಕೊ: ಗೊಂದಲದಲ್ಲಿ ವಾಹನ ಚಾಲಕರು

ಬಜಪೆ: ಎತ್ತ ಹೋಗಲಿ? ಎಡಕ್ಕೊ , ಬಲಕ್ಕೊ: ಗೊಂದಲದಲ್ಲಿ ವಾಹನ ಚಾಲಕರು

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

3

Golden Star Ganesh: ಕ್ಷಮಿಸಿ, ಮುಂದಿನ ಸಲ ಸಿಗೋಣ..

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Horoscope: ಅಕಸ್ಮಾತ್‌ ಧನಾಗಮ ಯೋಗ ನಿಮ್ಮದಾಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.