ಕೆಎಸ್ಆರ್ಟಿಸಿ ಬಸ್ ನಿಲ್ದಾಣ; ಪ್ರಾಣಸಂಕಟ ತರುತ್ತಿರುವ ಹಂಪ್ಸ್ ಗಳು
Team Udayavani, Nov 17, 2022, 11:30 AM IST
ಬಿಜೈ: ಮಂಗಳೂರಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಸ್ಗಳು ಪ್ರವೇಶಿಸುವ ಸ್ಥಳದಲ್ಲಿರುವ ಹಂಪ್ಸ್ಗಳು (ರಸ್ತೆ ಉಬ್ಬುಗಳು) ಸವೆದು ಹೋಗಿ ಅಪಾಯಕಾರಿಯಾಗಿ ಪರಿಣಮಿಸಿವೆ.
ಬಸ್ಗಳು ನಿಲ್ದಾಣಕ್ಕೆ ಆಗಮಿಸು ವಾಗ ವೇಗ ಕಡಿಮೆಗೊಳಿಸಬೇಕೆಂಬ ಉದ್ದೇಶದಿಂದ ಎರಡು ಹಂಪ್ಸ್ ಗಳನ್ನು ಅಳವಡಿಸಲಾಗಿದೆ. ಇದು ಸ್ವಲ್ಪ ಇಳಿಜಾರಿನ ಪ್ರದೇಶವೂ ಆಗಿದೆ. ಬಸ್ ಗಳ ಆಗಮನ ಮತ್ತು ನಿರ್ಗಮನ ಸ್ಥಳವಾಗಿರುವುದರಿಂದ ಇಲ್ಲಿ ಹಂಪ್ಸ್ಗಳ ಅಗತ್ಯವೂ ಇದೆ. ಆದರೆ ಈಗ ಇರುವ ಹಂಪ್ಸ್ ಗಳು ಬಸ್ಗಳ ಓಡಾಟದಿಂದ ಸವೆದಿದೆ, ಮಾತ್ರವಲ್ಲದೆ ಹಂಪ್ಸ್ನ ಅಂಚು ಕಿತ್ತು ಹೋಗಿದೆ. ಹಾಗಾಗಿ ಈ ಹಂಪ್ಸ್ ಗಳ ಮೇಲಿಂದ ಬಸ್ಗಳು ಚಲಿಸುವಾಗ ಮೇಲಕ್ಕೆ ಹಾರಿದಂತಾಗುತ್ತದೆ.
ನಿಲ್ದಾಣ ಪ್ರವೇಶಿಸುವ ಸಂದರ್ಭದಲ್ಲಿ ಬಹುತೇಕ ಪ್ರಯಾಣಿಕರು ತಮ್ಮ ಸೀಟಿನಿಂದ ಎದ್ದು ನಿಂತು ಇಳಿಯಲು ಅಣಿಯಾಗಿರುತ್ತಾರೆ. ಇದೇ ಸಂದರ್ಭ ದಲ್ಲಿ ಹಂಪ್ಸ್ ಮೇಲೆ ಬಸ್ ಹಾರಿದ ಅನುಭವವಾಗಿ ಪ್ರಯಾಣಿಕರು ನಿಯಂ ತ್ರಣ ಕಳೆದುಕೊಳ್ಳುತ್ತಿದ್ದಾರೆ. ಸೀಟಿನಲ್ಲಿ ಕುಳಿತವರು ಕೂಡ ಮೇಲಕ್ಕೆ ಹಾರಿ ಬೀಳುತ್ತಾರೆ. ಚಾಲಕರು ಹಂಪ್ಸ್ನ್ನು ಗಮನಿಸಿ ಬಸ್ನ ವೇಗ ತಗ್ಗಿಸುತ್ತಾರೆ. ಆದರೆ ಹಂಪ್ಸ್ ಸರಿಯಾಗಿಲ್ಲದ ಕಾರಣ ತೊಂದರೆಯಾಗುತ್ತಿದೆ. ಇಲ್ಲಿ ವೈಜ್ಞಾನಿಕ ರೀತಿಯ ಹಂಪ್ಸ್ ರಚನೆ ಅಗತ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.