Kaikamba: ಭರದಿಂದ ಸಾಗುತ್ತಿದೆ ಅದ್ಯಪಾಡಿ ದೇಗುಲದ ಜೀರ್ಣೋದ್ಧಾರ ಕಾರ್ಯ

ಆಕರ್ಷಿಸುತ್ತಿದೆ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ| ರಾಜಗೋಪುರದಲ್ಲಿ ದಾರು ಶಿಲ್ಪ ಚಿತ್ತಾ ರ

Team Udayavani, Jan 29, 2025, 2:58 PM IST

6(1

ಕೈಕಂಬ: ಸುಮಾರು 900 ವರ್ಷಗಳ ಇತಿಹಾಸವಿರುವ, ಸರ್ವ ರೋಗ ನಿವಾರಕ ಹಾಗೂ ಉಬ್ಬಸ ರೋಗ ನಿವಾರಿಸಿ, ಹರಸಿದ ದೇವರು ಎಂದೇ ಖ್ಯಾತಿ ಪಡೆದ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಮಾ. 9ರಿಂದ 25ರ ವರೆಗೆ ಬ್ರಹ್ಮಕಲಶೋತ್ಸವ ಮತ್ತು ಜಾತ್ರೆ ಜರಗಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಿಂದ ಸುಮಾರು 3 ಕಿ.ಮೀ. ದೂರದಲ್ಲಿ ಫ‌ಲ್ಗುಣಿ ನದಿಯ ಸಮೀಪ ಈ ಕ್ಷೇತ್ರವಿದೆ. ವಿಮಾನ ನಿಲ್ದಾಣದ ಗುಡ್ಡದ ಬುಡದಲ್ಲೇ ಇರುವ ಪ್ರಕೃತಿ ಸೌಂದರ್ಯದ ನೆಲೆ ಇದು.

ಮರವೂರಿನಿಂದ ಅದ್ಯಪಾಡಿಗೆ ನೇರ ಸಂಪರ್ಕವಿದೆ. ಬಜಪೆಯಿಂದ ಹಳೆ ವಿಮಾನ ನಿಲ್ದಾಣ ರಸ್ತೆದ ದಾರಿಯಾಗಿ ಉಣಿಲೆ ಮೂಲಕ ಇಲ್ಲಿಗೆ ಬರಬಹುದು. ಗುರುಪುರ ಕೈಕಂಬದಿಂದ ಕಂದಾವರವಾಗಿ ಕ್ಷೇತ್ರಕ್ಕೆ ಬರಲು ರಸ್ತೆ ಸಂಪರ್ಕವಿದೆ.

ಜೀರ್ಣೋದ್ಧಾರ ಕಾರ್ಯ
ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಏತಮೊಗರು ದೊಡ್ಡಮನೆ ಹರೀಶ್‌ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬೈಲು ಏತಮೊಗರು ಗುತ್ತು ಸುಜೀತ್‌ ಆಳ್ವ ಅವರ ನೇತೃತ್ವದಲ್ಲಿ ಸಮಿತಿಯ ಸರ್ವ ಸದಸ್ಯರು, ಭಕ್ತರು ಜೀರ್ಣೋದ್ಧಾರ, ಪುನರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಜೀರ್ಣೋದ್ದಾರ ಕಾರ್ಯ ಜತೆಗೆ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿ ಕಾರ್ಯಗಳು ಭರದಿಂದ ಸಾಗುತ್ತಿವೆ.

ದಿನನಿತ್ಯ 100ಕ್ಕೂ ಅಧಿಕ ಮಂದಿ ಶ್ರಮದಾನ
ಕಳೆದ ಒಂದುವರೆ ವರ್ಷಗಳಿಂದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಮಾಗಣೆಯ ಕೊಳಂಬೆ, ಅದ್ಯಪಾಡಿ, ಕಂದಾವರ ಗ್ರಾಮದ ಸಂಘ ಸಂಸ್ಥೆಗಳ 100ಕ್ಕೂ ಅಧಿಕ ಮಂದಿ ಪ್ರತಿನಿತ್ಯ ಭಾಗವಹಿಸುತ್ತಿದ್ದಾರೆ. ನಿರಂತರ ಶ್ರಮದಾನದಲ್ಲಿ ತೊಡಗಿಕೊಂಡಿವೆ. ಪೊರ್ಕೋಡಿ, ಕೆಂಜಾರು, ಪಡುಶೆಡ್ಡೆ, ಮೂಡುಶೆಡ್ಡೆ,ಪಡುಪೆರಾರ, ಎಡಪದವಯ, ಮೊಗರು, ಕೈಕಂಬ ಪರಿಸರದ ಸಂಘ, ಸಂಸ್ಥೆಗಳು ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರಮದಾನವನ್ನು ಕೈಗೊಂಡಿದೆ.

ದೇವಸ್ಥಾನದಲ್ಲಿ ಏನೇನು ಆಕರ್ಷಣೆ?
– ಶಿಲಾಮಯ ಗರ್ಭಗುಡಿ, ತೀರ್ಥಮಂಟಪ, ಸುತ್ತುಪೌಳಿ, ವಸಂತ ಮಂಟಪ, ಗಣಪತಿ ದೇವರ ಗುಡಿ, ನಾಗದೇವರ ಪೀಠ, ನವಗ್ರಹ ಗುಡಿ, ಶ್ರೀಧರ್ಮ ಶಾಸ್ತಾರ ಗುಡಿಯ ಕಾರ್ಯಗಳು ಬಹುತೇಕ ಮುಗಿದಿದೆ.
– ಗರ್ಭಗುಡಿ, ಸುತ್ತುಪೌಳಿ, ತೀರ್ಥ ಮಂಟಪ ಶಿಲಾಮಯವಾಗಿದ್ದು ವಿಶೇಷ ಆಕರ್ಷಣೆಯಾಗಿದೆ. ಇದಕ್ಕೆ ತ್ರಾಮದ ಹೊದಿಕೆ ಮಾಡಲಾಗಿದೆ.
– ಅನ್ನಛತ್ರ, ವಿಶ್ರಾಂತಿ ಗೃಹ, ಸಭಾಭವನ ಹಾಗೂ ರಾಜಗೋಪುರ ಕಾರ್ಯಗಳು ಭರದಿಂದ ಸಾಗುತ್ತಿವೆ.
– ಗರ್ಭಗುಡಿ ಹಾಗೂ ತೀರ್ಥ ಮಂಟಪದ ಮರದ ಕೆತ್ತನೆ ಕಾರ್ಯವನ್ನು ಶಿಲ್ಪಿ ಉಮಾಧರ ಅವರು ಮಾಡಿದ್ದಾರೆ. ಕೆತ್ತನೆಗಳನ್ನು ಶಿಲ್ಪಿ ನಾರಾಯಣ ಆಚಾರಿ ಮಣಿಪಾಲ ನಿರ್ವಹಿಸುತ್ತಿದ್ದಾರೆ.
– ತೀರ್ಥ ಮಂಟಪ, ಸುತ್ತುಪೌಳಿ, ಗರ್ಭಗುಡಿ, ರಾಜಗೋಪುರದ ಶಿಲಾಮಯ ಕೆತ್ತನೆಗಳನ್ನು ಶಿಲ್ಪಿ ಕೇಶವ ಮುರುಡೇಶ್ವರ ಮಾಡುತ್ತಿದ್ದಾರೆ.
– ಪೂರ್ವ ಗೋಪುರದ ಕೆಂಪು ಕಲ್ಲಿನ ಕೆತ್ತನೆ ಕಾರ್ಯವನ್ನು ಶಿವಮೊಗ್ಗದ ಕುಬೇರ ಲಮಾಣಿ ನಡೆಸುತ್ತಿದ್ದಾರೆ.
– ವಾಸ್ತುಶಿಲ್ಪಿ ವೇ| ಮೂ| ಕೃಷ್ಣರಾಜ ತಂತ್ರಿಗಳ, ಎಂಜಿನಿಯರ್‌ ಪುರುಷೋತ್ತಮ್‌ ಬಿ. ಉಸ್ತುವಾರಿ ವಹಿಸಿದ್ದಾರೆ.

ಟಾಪ್ ನ್ಯೂಸ್

‌Bollywood: ರಿಷಬ್‌ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್‌ ಅಪ್ಡೇಟ್   

‌Bollywood: ರಿಷಬ್‌ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್‌ ಅಪ್ಡೇಟ್  

Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು

Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು

Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್‌ ಪತ್ರಿಕೆ

Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್‌ ಪತ್ರಿಕೆ

ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್‌ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ

ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್‌ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ

Bollywood: ರೀ-ರಿಲೀಸ್‌ ಗಳಿಕೆಯಲ್ಲಿ ʼತುಂಬಾಡ್‌ʼ ಮೀರಿಸಿದ ʼಸನಮ್ ತೇರಿ ಕಸಮ್ʼ

Bollywood: ರೀ-ರಿಲೀಸ್‌ ಗಳಿಕೆಯಲ್ಲಿ ʼತುಂಬಾಡ್‌ʼ ಮೀರಿಸಿದ ʼಸನಮ್ ತೇರಿ ಕಸಮ್ʼ

11 ವರ್ಷದಿಂದ ವಿಶ್ವಗುರು ನೋಡಿದ್ದೇವೆ, ಅವರನ್ನು ಕೆಳಗಿಳಿಸಿ: ಬಿಜೆಪಿಗೆ ಸಂತೋಷ್ ಲಾಡ್ ಟಾಂಗ್

11 ವರ್ಷದಿಂದ ವಿಶ್ವಗುರು ನೋಡಿದ್ದೇವೆ, ಅವರನ್ನು ಕೆಳಗಿಳಿಸಿ: ಬಿಜೆಪಿಗೆ ಸಂತೋಷ್ ಲಾಡ್ ಟಾಂಗ್

Bengaluru: ಮೇ 30 ರೊಳಗೆ ಜಿ.ಪಂ-ತಾ.ಪಂ ಅಂತಿಮ ಮೀಸಲಾತಿ ಪಟ್ಟಿ ಆಯೋಗಕ್ಕೆ ಸಲ್ಲಿಕೆ

ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆ: ಮೇ 30 ರೊಳಗೆ ಮೀಸಲಾತಿ ಪಟ್ಟಿ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!

Summer

Weather Change: ಹವಾಮಾನ ತೀವ್ರ ಬದಲಾವಣೆ: ಕೆಮ್ಮು, ಶೀತ, ಜ್ವರ ಆತಂಕ

18

Robbery Case: ಮೂಡುಬಿದಿರೆ ಅಳಿಯೂರು; ಹಾಡ ಹಗಲೇ ಚಿನ್ನಾಭರಣ ದರೋಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಪ್ರೀತಿಯ ಕರೆ ಆತ್ಮದ ಮೊರೆ: ಪ್ರೀತಿ ಹಳತಾಗುವುದಿಲ್ಲ, ಹಳತಾದಷ್ಟು ಮಾಗುತ್ತದೆ…

ಪ್ರೀತಿಯ ಕರೆ ಆತ್ಮದ ಮೊರೆ: ಪ್ರೀತಿ ಹಳತಾಗುವುದಿಲ್ಲ, ಹಳತಾದಷ್ಟು ಮಾಗುತ್ತದೆ…

Udupi ಗೀತಾರ್ಥ ಚಿಂತನೆ-189: ಕ್ರಿಟಿಕಲ್‌ ಇನ್‌ಸೈಡರ್‌ ಆಗಬೇಕಾದ ಅಗತ್ಯ

Udupi: ಗೀತಾರ್ಥ ಚಿಂತನೆ-189; ಕ್ರಿಟಿಕಲ್‌ ಇನ್‌ಸೈಡರ್‌ ಆಗಬೇಕಾದ ಅಗತ್ಯ

8

Hosanagara: ಶ್ರೀಗಂಧ ಮರದ ತುಂಡುಗಳ ಸಾಗಾಟ; ಇಬ್ಬರ ಬಂಧನ

‌Bollywood: ರಿಷಬ್‌ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್‌ ಅಪ್ಡೇಟ್   

‌Bollywood: ರಿಷಬ್‌ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್‌ ಅಪ್ಡೇಟ್  

4

Editorial: ನೀರಿನ ಸಂರಕ್ಷಣೆಗಾಗಿ ಈಗಿನಿಂದಲೇ ಎಚ್ಚರ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.