Kateel: ಕಟೀಲಮ್ಮನ ಮಡಿಲಿನಲ್ಲಿ 2,000 ವೇಷಗಳ ನರ್ತನ

ತಿರುಗಾಟದ ಬಳಿಕ ಸೇವೆ ಸಲ್ಲಿಸಿ ವೇಷ ಬಿಚ್ಚುವುದು ಇಲ್ಲಿ

Team Udayavani, Oct 10, 2024, 3:23 PM IST

5

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮುಂದೆ ಸೇವೆ ಸಲ್ಲಿಸಲು ಆಗಮಿಸಿದ ಹುಲಿವೇಷ ತಂಡ.

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯುವ ನವರಾತ್ರಿ ಉತ್ಸವದ ವೈಭವ ಒಂದು ಕಡೆಯಾದರೆ, ಹುಲಿ, ಸಿಂಹ ಸೇರಿದಂತೆ ಸಾವಿರಾರು ವೇಷಗಳು ಕಟೀಲಿಗೆ ಬಂದು ಸೇವೆ ಸಲ್ಲಿಸುವ ಸೊಬಗು ಇನ್ನೊಂದು ಕಡೆ.

ಹಲವಾರು ತಂಡಗಳು ಹುಲಿ ವೇಷ ಹಾಕಿ ತಿರುಗಾಟ ನಡೆಸಿ ಅಂತಿಮವಾಗಿ ಕಟೀಲಿಗೆ ಬಂದು ದೇವಾಲಯದ ಆವರಣದಲ್ಲಿ ನರ್ತಿಸಿ ವೇಷ ಕಳಚಿ ಬಳಿಕ ನಂದಿನಿ ನದಿಯಲ್ಲಿ ಮಿಂದು ಹೋಗುವುದು ರೂಢಿ. ಹಲವಾರು ಮಂದಿ ವೇಷ ಹಾಕುವಾಗಲೇ ಕಟೀಲಿನಲ್ಲಿ ವೇಷ ಬಿಚ್ಚುತ್ತೇನೆ ಎಂದು ಹರಕೆ ಹೊರುವವರೂ ಇದ್ದಾರೆ. ಕೆಲವರು ಕಟೀಲು ಕ್ಷೇತ್ರದಲ್ಲೇ ಸೇವೆ ಸಲ್ಲಿಸಿ ಮರಳಿ ಅಲ್ಲೇ ವೇಷ ಬಿಚ್ಚುವುದೂ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವಾರು ಹುಲಿ ವೇಷದ ತಂಡಗಳು ಮತ್ತು ಇತರ ವೇಷಗಳು ಈ ಪರಿಪಾಠ ಇಟ್ಟುಕೊಂಡಿವೆ. ಅದರ ನಡುವೆ ಕೆಲವರು ಕಟೀಲಿಗೆ ಬಂದು ಸೇವೆ ಸಲ್ಲಿಸಿ ಹೋಗುವುದೂ ಇದೆ.

ಹೀಗಾಗಿ ಕಟೀಲು ದೇವಾಲಯದ ಆವರಣದಲ್ಲಿ ನಿತ್ಯವೂ ಹತ್ತಾರು ವೇಷಗಳು, ಹುಲಿ ತಂಡಗಳ ನರ್ತನ ಇರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ 2000ಕ್ಕೂ ಅಧಿಕ ವೇಷಗಳು, 70ರಿಂದ 80 ತಂಡಗಳು ಕಟೀಲಿನ ಸನ್ನಿಧಿಗೆ ಬರುತ್ತವೆ.

ಎಕ್ಕಾರು, ಕೊಡೆತ್ತೂರು ಮೆರವಣಿಗೆ
ಎಕ್ಕಾರು ಮತ್ತು ಕೊಡೆತ್ತೂರಿನಿಂದ ಹುಲಿ ವೇಷಗಳು, ನೂರಾರು ಅನ್ಯ ವೇಷಗಳ ಹುಲಿ ಕುಣಿತ ತಂಡಗಳು ಆಗಮಿಸುವುದು ಕಳೆದ ಹಲವಾರು ದಶಕಗಳ ವಾಡಿಕೆ. ಎಕ್ಕಾರು ಹುಲಿಗೆ 66 ವರ್ಷವಾದರೆ, ಕೊಡತ್ತೂರಿನಿಂದ 60 ವರ್ಷಗಳಿಂದ ಊರಿನ ಜನರೇ ಮೆರವಣಿಗೆ ಬರುತ್ತಾರೆ.

ಮುಂಬಯಿಯಿಂದ ಬಂದು ವೇಷ ಹಾಕುತ್ತಾರೆ
ಕಟೀಲು ದೇವಿಯ ಸೇವೆ ಮಾಡಬೇಕು ಎನ್ನುವ ತುಡಿತ ಕೆಲವರಿಗೆ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ದೂರದ ಮುಂಬಯಿಯಿಂದ ನವರಾತ್ರಿ ಸಂದರ್ಭದಲ್ಲಿ ಬಂದು ಹುಲಿ ಸೇರಿದಂತೆ ಅವರಿಗಿಷ್ಟವಾದ ಯಾವುದೇ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವರಂತೂ 30- 40 ವರ್ಷಗಳಿಂದ ವೇಷ ಹಾಕುತ್ತಲೇ ಇದ್ದಾರೆ.

ಸುಮಾರು 150 ವರ್ಷಗಳ ಹಿಂದೆ ಕಟೀಲಿನ ಒಂದು ಭಾಗದಲ್ಲಿ ಕಾಡು ಪ್ರದೇಶವಿದ್ದು ಹುಲಿಗಳು ನೀರು ಕುಡಿಯಲು ಬರುತ್ತಿದ್ದವು ಎನ್ನಲಾಗುತ್ತಿದೆ. ಇನ್ನೊಂದು ಬದಿಯಲ್ಲಿ ದೇವಸ್ಥಾನ ಪೂಜಾ ಕೈಂಕರ್ಯದ ಅರ್ಚಕರು ಜಳಕ ಮಾಡುತ್ತಿದ್ದರು ಎಂಬುದು ಪ್ರತೀತಿ.

-ರಘುನಾಥ ಕಾಮತ್‌ ಕೆಂಚನಕರೆ

ಟಾಪ್ ನ್ಯೂಸ್

ENGvsPAK: First in Test history…. A record-breaking partnership root-brook

ENGvsPAK: ಟೆಸ್ಟ್‌ ಇತಿಹಾಸದಲ್ಲೇ ಮೊದಲು…. ದಾಖಲೆಯ ಜೊತೆಯಾಟವಾಡಿದ ರೂಟ್-ಬ್ರೂಕ್

Ranebennur Blackbuck Sanctuary: ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ವಾಹನ

Ranebennur Blackbuck Sanctuary: ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ವಾಹನ

Devara 2: ʼದೇವರ-2ʼ ನಲ್ಲೂ ಬಾಲಿವುಡ್‌ ಸ್ಟಾರ್ಸ್? ನಿರ್ದೇಶಕರು ಹೇಳಿದ್ದೇನು?Devara 2: ʼದೇವರ-2ʼ ನಲ್ಲೂ ಬಾಲಿವುಡ್‌ ಸ್ಟಾರ್ಸ್? ನಿರ್ದೇಶಕರು ಹೇಳಿದ್ದೇನು?

Devara 2: ʼದೇವರ-2ʼ ನಲ್ಲೂ ಬಾಲಿವುಡ್‌ ಸ್ಟಾರ್ಸ್? ನಿರ್ದೇಶಕರು ಹೇಳಿದ್ದೇನು?

Charmadi: ಭಾರೀ ಮಳೆಗೆ ಧರೆ ಕುಸಿತ… ಜೆಸಿಬಿಯಿಂದ ಮಣ್ಣು ತೆರವು ಕಾರ್ಯಾಚರಣೆ

Charmadi: ಭಾರೀ ಮಳೆಗೆ ಧರೆ ಕುಸಿತ… ಜೆಸಿಬಿಯಿಂದ ಮಣ್ಣು ತೆರವು ಕಾರ್ಯಾಚರಣೆ

omar-nc

J.K: ನ್ಯಾಶನಲ್‌ ಕಾನ್ಫರೆನ್ಸ್‌ ಗೆ ಸ್ವತಂತ್ರ ಶಾಸಕರ ಬೆಂಬಲ; ಕ್ಷೀಣಿಸಿತು ಕಾಂಗ್ರೆಸ್‌ ಬಲ

Renukaswamy Case: ವಿಚಾರಣೆ ಅಂತ್ಯ; ಈ ದಿನ ಹೊರಬೀಳಲಿದೆ ದರ್ಶನ್‌ ಜಾಮೀನು ತೀರ್ಪು

Renukaswamy Case: ವಿಚಾರಣೆ ಅಂತ್ಯ; ಈ ದಿನ ಹೊರಬೀಳಲಿದೆ ದರ್ಶನ್‌ ಜಾಮೀನು ತೀರ್ಪು

11-bantwala

Bantwala: ವಿದ್ಯುತ್ ಕಂಬ, ಬೈಕ್ ಗೆ ಡಿಕ್ಕಿಯಾಗಿ ಕಾರು ಪಲ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: 8 ಕೆಜಿ ಮುಡಿ ಹಾರಿಸುವ 8ರ ಕಿನ್ನಿಪಿಲಿ!

Mangaluru: ಬಿಲ್ಡರ್, ಮನೆಯವರ ಮೇಲೆ ಹಲ್ಲೆ… ಬರ್ಕೆ ಪೊಲೀಸರಿಂದ ಇಬ್ಬರ ಬಂಧನ

Mangaluru: ಬಿಲ್ಡರ್, ಮನೆಯವರ ಮೇಲೆ ಹಲ್ಲೆ… ಬರ್ಕೆ ಪೊಲೀಸರಿಂದ ಇಬ್ಬರ ಬಂಧನ

2

Mangaluru: ವಿಡಿಯೋ ಲೈಕ್‌ ಮಾಡಿ ಹಣಗಳಿಸಲು ಹೋಗಿ 5 ಲಕ್ಷ ಕಳೆದುಕೊಂಡರು!

Mangaluru: ಉಳಿಯ ದ್ವೀಪ ಮರಳುಗಾರಿಕೆ ನಿಷೇಧ

Mangaluru: ಉಳಿಯ ದ್ವೀಪ ಮರಳುಗಾರಿಕೆ ನಿಷೇಧ

Rain: ಇಂದು “ಎಲ್ಲೋ ಅಲರ್ಟ್‌’; ಕರಾವಳಿಯಲ್ಲಿ ತುಸು ಬಿಡುವು ನೀಡಿದ ಮಳೆ

Rain: ಇಂದು “ಎಲ್ಲೋ ಅಲರ್ಟ್‌’; ಕರಾವಳಿಯಲ್ಲಿ ತುಸು ಬಿಡುವು ನೀಡಿದ ಮಳೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ENGvsPAK: First in Test history…. A record-breaking partnership root-brook

ENGvsPAK: ಟೆಸ್ಟ್‌ ಇತಿಹಾಸದಲ್ಲೇ ಮೊದಲು…. ದಾಖಲೆಯ ಜೊತೆಯಾಟವಾಡಿದ ರೂಟ್-ಬ್ರೂಕ್

Ranebennur Blackbuck Sanctuary: ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ವಾಹನ

Ranebennur Blackbuck Sanctuary: ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ವಾಹನ

Devara 2: ʼದೇವರ-2ʼ ನಲ್ಲೂ ಬಾಲಿವುಡ್‌ ಸ್ಟಾರ್ಸ್? ನಿರ್ದೇಶಕರು ಹೇಳಿದ್ದೇನು?Devara 2: ʼದೇವರ-2ʼ ನಲ್ಲೂ ಬಾಲಿವುಡ್‌ ಸ್ಟಾರ್ಸ್? ನಿರ್ದೇಶಕರು ಹೇಳಿದ್ದೇನು?

Devara 2: ʼದೇವರ-2ʼ ನಲ್ಲೂ ಬಾಲಿವುಡ್‌ ಸ್ಟಾರ್ಸ್? ನಿರ್ದೇಶಕರು ಹೇಳಿದ್ದೇನು?

Charmadi: ಭಾರೀ ಮಳೆಗೆ ಧರೆ ಕುಸಿತ… ಜೆಸಿಬಿಯಿಂದ ಮಣ್ಣು ತೆರವು ಕಾರ್ಯಾಚರಣೆ

Charmadi: ಭಾರೀ ಮಳೆಗೆ ಧರೆ ಕುಸಿತ… ಜೆಸಿಬಿಯಿಂದ ಮಣ್ಣು ತೆರವು ಕಾರ್ಯಾಚರಣೆ

7(1)

Udupi: ಗೊಂಬೆ ಹೇಳುತೈತೆ.. ಕಥೆಯ ಹೇಳುತೈತೆ; ಉದ್ಯಾವರದ ಗೊಂಬೆ ಸಂಭ್ರಮಕ್ಕೆ 33 ವರ್ಷ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.