Kinnigoli: ದ್ವಿಚಕ್ರ ವಾಹನ ಸವಾರರನ್ನು ಬೆನ್ನಟ್ಟುವ ನಾಯಿಗಳು
ಕಿನ್ನಿಗೋಳಿ ಬಸ್ನಿಲ್ದಾಣದಲ್ಲಿ ಬೀದಿನಾಯಿ, ಕುಡುಕರ ಕಾಟ
Team Udayavani, Sep 5, 2024, 12:56 PM IST
ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಶಾಲಾ ಮಕ್ಕಳಿಗೆ, ನಾಗರಿಕರಿಗೆ ತೊಂದರೆಯಾಗುತ್ತಿದೆ.
ಕಿನ್ನಿಗೋಳಿ ಬಸ್ನಿಲ್ದಾಣ, ಮೀನು ಮಾರುಕಟ್ಟೆ, ಉಲ್ಲಂಜೆ ಸಮೀಪದಲ್ಲಿ ನಾಯಿಗಳ ದಾಂಧಲೆ ಜೋರಾಗಿದೆ. ಕಳೆದ ಎರಡು ದಿನಗಳ ಹಿಂದೆ ಬಸ್ನಿಲ್ದಾಣದ ಪಕ್ಕ ಶಾಲಾ ಬಾಲಕನನ್ನು ಅಟ್ಟಾಟಿಸಿ, ಬಾಲಕ ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ಉಲ್ಲಂಜೆಯಲ್ಲಿ ದ್ವಿಚಕ್ರ ವಾಹನವನ್ನು ಹಿಂಬಾಳಿಸಿಕೊಂಡು ಹೋಗಿ ವಾಹನಸವಾರ ಬಿದ್ದ ಘಟನೆ ನಡೆದಿದೆ. ಹಿರಿಯ ನಾಗರಿಕರ ತಿಂಡಿಯ ಚೀಲ, ಬೈಕ್ ನಲ್ಲಿ ಇರಿಸಿದ್ದ ಮೀನಿನ ಚೀಲ ಕಸಿದು ಪರಾರಿಯಾಗಿದ್ದು, ಬೈಕ್ ವಾರೀಸುದಾರ ಬಂದು ನೋಡಿದಾಗ ಮೀನು ಇಲ್ಲ, ಚೀಲವೂ ಇಲ್ಲ ಇಂತಹ ಘಟನೆ ದಿನನಿತ್ಯ ನಡೆಯುತ್ತಿದೆ. ಕಳೆದ 8 ತಿಂಗಳ ಹಿಂದೆ ಕಿನ್ನಿಗೋಳಿ ರಾಜರತ್ನಪುರ ಕಾಪಿಕಾಡಿನಲ್ಲಿ ಅಂಚೆ ಪೋಸ್ಟ್ ಮನ್ ಓರ್ವರಿಗೆ ನಾಯಿ ಅಟ್ಟಾಡಿಸಿ ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ನಾಗರಿಕರು ಪಟ್ಟಣ ಪಂ.ದೂರು ನೀಡಿದರೂ ಯಾವ ಪ್ರಯೋಜನವಾಗಿಲ್ಲ.
ಅಧಿಕಾರಿಗಳ ಕಾರುಬಾರು ಕಿನ್ನಿಗೋಳಿ ಪ. ಪಂ.ಆಗಿ 36 ತಿಂಗಳು ಆದರೂ ಬೇರೆ ಬೇರೆ ಕಾರಣಗಳಿಂದ ಚುನಾವಣೆ ನಡೆದಿಲ್ಲ. ನಾಗರಿಕರ ಸಣ್ಣ ಸಮಸ್ಯೆ ಸಮಸ್ಯೆಗೂ ಪರಿಹಾರ ದೊರೆಯುತ್ತಿಲ್ಲ. ಗ್ರಾ. ಪಂ.ಇರುವಾಗ ಸದಸ್ಯರು ತಕ್ಕ ಮಟ್ಟಿನ ಪರಿಹಾರ ಮಾಡುತ್ತಿದ್ದರು. ಆದರೇ ಈಗ ಎಲ್ಲ ಅಧಿಕಾರಿ ವರ್ಗದ ಕಾರುಬಾರು.
–ಮಹಮದ್ ಬಾಶಾ ಸಮಾಜಸೇವಕರು ಕಿನ್ನಿಗೋಳಿ
ಬಸ್ನಿಲ್ದಾಣದಲ್ಲಿ ದಿನನಿತ್ಯ ಸಂಜೆ, ಬೆಳಗಿನ ಹೊತ್ತು ಕುಡುಕರ ಕಾಟ ಜೋರಾಗಿದೆ. ಎರಡು ಜನ ಬಸ್ ನಿಲ್ದಾಣದ ದಂಡೆಯಲ್ಲಿ ಮಲಗಿದರೇ ಎರಡು ಜನ ಕೆಳಗೆ ಮಲಗುವುದು ಸಾಮಾನ್ಯವಾಗಿದೆ. ಬಸ್ನಿಲ್ದಾನ ಪೂರ್ತಿ ಮೂತ್ರ ಶಂಕೆ ವಾಸನೆ. ಜನರು ಬಸ್ ನಿಲ್ದಾಣಕ್ಕೆ ಹೋಗುವುದು ಬಿಟ್ಟು, ಅಂಗಡಿಯ ಮುಂಭಾಗದಲ್ಲಿ ನಿಲ್ಲುತ್ತಿದ್ದಾರೆ. ಕುಡುಕರ ನೃತ್ಯ ಇಲ್ಲಿನ ಜನರಿಗೆ ಪುಕ್ಕಟ್ಟೆ ಮನೋರಂಜನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕದ್ರಿ ಪಾರ್ಕ್ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ
Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
Mangaluru: ಮಾದಕವಸ್ತು ಸಹಿತ ಮೂವರ ಬಂಧನ
Mangaluru City Corporation: ಸೆ.19ರಂದು ಮೇಯರ್, ಉಪ ಮೇಯರ್ ಚುನಾವಣೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.