Kinnigoli: ಪಕ್ಷಿಕೆರೆ-ಕೊಯಿಕುಡೆ ರಸ್ತೆಯುದ್ದಕ್ಕೂ ಹೊಂಡ ಗುಂಡಿ

ಚರಂಡಿ ಕಾಮಗಾರಿ ಮಾಡದೆ ರಸ್ತೆ ಅವ್ಯವಸ್ಥೆ ;ರಸ್ತೆ ಹೊಂಡಗಳಲ್ಲಿ ಮಳೆ ನೀರು

Team Udayavani, Oct 21, 2024, 2:28 PM IST

5

ಕಿನ್ನಿಗೋಳಿ: ಎಸ್‌. ಕೋಡಿಯಿಂದ ಪಕ್ಷಿಕೆರೆ ಹಳೆಯಂಗಡಿಯ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡ ಗುಂಡಿಗಳೇ ಕೂಡಿವೆ. ದ್ವಿಚಕ್ರ ವಾಹನ ಚಾಲಕರಿಗಂತೂ ಇಲ್ಲಿ ಅಪಾಯ ತಪ್ಪಿದ್ದಲ್ಲ. ರಸ್ತೆ ಹೊಂಡಗಳಲ್ಲಿ ಮಳೆ ನೀರು ತುಂಬಿಕೊಂಡಿವೆ. ಸರಿಯಾದ ಚರಂಡಿ ವ್ಯವಸ್ಯೆ ಇಲ್ಲದಿರುವುದು ಈ ಸಮಸ್ಯೆ ಕಾರಣ.

ಪಕ್ಷಿಕೆರೆ ಪೇಟೆ ಸಹಿತ ಹಲವು ಕಡೆಗಳಲ್ಲಿ ದೊಡ್ಡ ಹೊಂಡಗಳಿಗೆ ಐಸಿವೈಮ್‌ ಸಂಘಟನೆಯ ಮೂಲಕ ಆಗಸ್ಟ್‌ ನಲ್ಲಿ ಶ್ರಮದಾನ ಮಾಡಿ ಜಲ್ಲಿ ಹಾಕಿ ಮುಚ್ಚಲಾಗಿತ್ತು. ಈಗ ಹೊಂಡ ಗಳು ಮತ್ತೆ ಕಾಣಿಸಿಕೊಂಡು ಸಮಸ್ಯೆಯಾಗಿದೆ.

ಅಪಾಯಕಾರಿ ತಿರುವು
ಕೊಯಿಕುಡೆ ಪರಿಸರದಲ್ಲಿ ಅಪಾಯಕಾರಿ ತಿರುವು ಇರುವಲ್ಲಿ ದೊಡ್ಡ ಹೊಂಡ ಗುಂಡಿಗಳು ಇದ್ದು ಅಪಾಯಕಾರಿಯಾಗಿದೆ.

ಇಲ್ಲಿನ ರಸ್ತೆಗೆ ಪಕ್ಷಿಕೆರೆ ಪೇಟೆ, ಪರಿಸರ ಚರ್ಚ್‌ ಎದುರು, ಕೊಯಿಕುಡೆ ಪರಿಸರ ದಲ್ಲಿ ಮಳೆಗಾಲದ ಸಂದರ್ಭ ರಸ್ತೆಯಲ್ಲಿ ಹೆಚ್ಚಿನ ನೀರಿನ ಒರೆತ ಇರುವುದರಿಂದ ಮಳೆಗಾಲಕ್ಕೂ ಮುನ್ನಾ ರಸ್ತೆ ಹೊಂಡ ಗುಂಡಿಗಳನ್ನು ಮುಚ್ಚಿ ಚರಂಡಿ ಕೆಲಸ ಮಾಡಬೇಕಾಗಿದೆ. ರಸ್ತೆ ಬದಿಯ ಹುಲ್ಲು ಗಿಡಿ ಕಂಟಿಗಳಿಂದ ಎದುರಿನಿಂದ ಬರುವ ವಾಹನಗಳು ಕಾಣಿಸದೇ ಅಪಘಾತ ಉಂಟಾಗುವ ಸಾಧ್ಯತೆ ಇವೆ. ಆದ್ದರಿಂದ ಅದಷ್ಟು ಬೇಗ ಇವುಗಳನ್ನು ತೆರವು ಮಾಡಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ ಭಾಸ್ಕರ ಅಮೀನ್‌, ನವೀನ್‌ ಚಂದ್ರ ತೋಕೂರು ಲೈಟ್‌ ಹೌಸ್‌.

ಅನುದಾನದ ಕೊರತೆ
ಮುಖ್ಯ ರಸ್ತೆ ಹೆದ್ದಾರಿಯ ದುರಸ್ತಿಯ ಬಗ್ಗೆ ಇಲಾಖೆಯ ವರಿಷ್ಟರಿಗೆ ಈಗಾಗಲೇ ಮನವಿ ನೀಡಲಾಗಿದೆ. ಗ್ರಾಮೀಣ ಮಟ್ಟದ ರಸ್ತೆ ದುರಸ್ತಿಗೆ ಅನುದಾನದ ಕೊರತೆ ಇದೆ. ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿದರೇ ಸಮಸ್ಯೆ ಪರಿಹಾರ ಆಗಬಹುದು.
-ಮಯ್ಯದಿ ಪಕ್ಷಿಕೆರೆ, ಅಧ್ಯಕ್ಷರು, ಕೆಮ್ರಾಲ್‌ ಗ್ರಾ.ಪಂ.

10ಕ್ಕೂ ಮಿಕ್ಕಿ ಜನರು ಹೊಂಡಕ್ಕೆ
ಪಕ್ಷಿಕೆರೆ ಚರ್ಚ್‌ ಮುಂಭಾಗ ಹಾಗೂ ಕೆಳಭಾಗದ ರಸ್ತೆಯಲ್ಲಿ ದೊಡ್ಡ ಹೊಂಡಗಳನ್ನು ತಪ್ಪಿಸಲು ದ್ವಿಚಕ್ರ ಚಾಲಕರು ಹೋದರೆ ಮತ್ತೂಂದು ಹೊಂಡಕ್ಕೆ ಬೀಳುವುದು ಗ್ಯಾರಂಟಿ. ಕಳೆದ ಒಂದು ವಾರದಲ್ಲಿ 10 ಕ್ಕೂ ಮಿಕ್ಕಿ ಹೆಚ್ಚು ಜನರು ಹೊಂಡಕ್ಕೆ ಬಿದ್ದಿದ್ದಾರೆ.
-ಪೀಟರ್‌ ಕೊಯಿಕುಡೆ, ಗ್ರಾಮಸ್ಥರು

-ರಘನಾಥ ಕಾಮತ್‌ ಕೆಂಚನಕೆರೆ

ಟಾಪ್ ನ್ಯೂಸ್

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

IPL Mega Auction; 2 day event in Riyadh; IPL Mega Auction Date Revealed

IPL Mega Auction: ರಿಯಾದ್‌ ನಲ್ಲಿ 2 ದಿನದ ಇವೆಂಟ್; ಮೆಗಾ ಹರಾಜಿನ ದಿನಾಂಕ ಬಹಿರಂಗ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

2

Actress Oviya Helen: ನನ್ನ ಖಾಸಗಿ ವಿಡಿಯೋ ಲೀಕ್‌ ಮಾಡಿದ್ದು ಅವನೇ.. ನಟಿ ಓವಿಯಾ

Prajwal Revanna Case: High Court dismisses PIL against Rahul Gandhi

Prajwal Revanna Case: ರಾಹುಲ್‌‌ ಗಾಂಧಿ ವಿರುದ್ದದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

High Court : ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Kavoor: ಒಳಚರಂಡಿಯಿಂದ ಹೊರಚಿಮ್ಮುವ ಮಲಿನ ನೀರು; ಸಾಂಕ್ರಾಮಿಕ ರೋಗ ಭೀತಿ

10(2)

Mangaluru: ಸರಕಾರಿ ಶಾಲಾ ಶೌಚಾಲಯಗಳಿಗೆ ಹೊಸ ರೂಪ

9

Mangaluru: ಪಾಲಿಕೆ ಸಾಮಾನ್ಯ ಸಭೆಗೆ ಈ ಬಾರಿಯೂ ಅಡ್ಡಿ

8(1)

Pandeshwar ರೈಲು ಹಳಿ ದುರಸ್ತಿ; ವಾಹನ ಸವಾರರಿಗೆ ಸಂಕಷ್ಟ

3

Mangaluru: ಒಮ್ಮೆ ಪೌರ ಕಾರ್ಮಿಕರ ಜಾಗದಲ್ಲಿ ನಿಂತು ನೋಡಿ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

C. P. Yogeshwar: ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ

13

Dandeli: ಬೀದಿ ನಾಯಿಗಳ ನಿಯಂತ್ರಣಕ್ಕೆ ವಿಳಂಬ

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

Gudibande: ಕಳ್ಳತನ ಮಾಡಿ ಸಾಕ್ಷಿನಾಶಕ್ಕೆ ಬೆಂಕಿ ಇಟ್ಟ ಕಳ್ಳರು

Dandeli: ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಬಿಡುವಂತೆ ಮನವಿ

Dandeli: ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಬಿಡುವಂತೆ ಮನವಿ

12

Kavoor: ಒಳಚರಂಡಿಯಿಂದ ಹೊರಚಿಮ್ಮುವ ಮಲಿನ ನೀರು; ಸಾಂಕ್ರಾಮಿಕ ರೋಗ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.