Kuluru: ಹೆಚ್ಚುತ್ತಿರುವ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹ; ಸಿಸಿಟಿವಿಗೂ ಬೇಡಿಕೆ
ಉಳ್ಳಾಲದಂತೆ ಕೂಳೂರು ಸೇತುವೆಗೂ ಬೇಕು ಬೇಲಿ
Team Udayavani, Oct 11, 2024, 6:31 PM IST
ಕೂಳೂರು: ಕೂಳೂರು ಸೇತುವೆಯ ಮೇಲಿಂದ ನದಿಗೆ ಹಾರುವ ಪ್ರಕರಣಗಳು ಹೆಚ್ಚುತ್ತಿದೆ. 20203-24ರಲ್ಲಿ 5ಕ್ಕೂ ಅಧಿಕ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಸೇತುವೆಯಂತೆ ಕೂಳೂರು ಸೇತುವೆಗೂ ಭದ್ರತೆಯ ಅಗತ್ಯವಿದೆ ಎಂದ ಒತ್ತಾಯ ಕೇಳಿಬಂದಿದೆ.
ಇತ್ತೀಚೆಗೆ ಅನ್ಯ ರಾಜ್ಯದ ಮಹಿಳೆಯೊಬ್ಬರು ನದಿ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. ಇದೀಗ ಪ್ರಭಾವಿ ವ್ಯಕ್ತಿ ಮಮ್ತಾಜ್ ಅಲಿ ಪ್ರಕರಣದ ಬಳಿಕ ಇದೀಗ ಭದ್ರತೆಯ ಅಗತ್ಯ ಕಂಡು ಬರುತ್ತಿದೆ.
ಕೂಳೂರು ಸೇತುವೆಯಲ್ಲಿ ಇದುವರೆಗೆ ಬೀದಿ ದೀಪ ಹಾಕುವ ಯೋಜನೆಯೇ ಜಾರಿಯಾಗಿಲ್ಲ. ಇದರಿಂದ ಯಾವುದೇ ದುರ್ಘಟನೆ ಆದರೂ ಕಾಣದಂತಹ ಸ್ಥಿತಿಯಿದೆ. ಈ ಹಿಂದೆ ಹಲವಾರು ವಾಹನ ಗಳು ಇಲ್ಲಿನ ಅಪಾಯಕಾರಿ ಸೇತುವೆ ಕೆಳಭಾಗಕ್ಕೆ ಉರುಳಿ ಪ್ರಾಣಹಾನಿಯಾಗಿದೆ, ವಾಹನ ಹಾನಿಯಾಗಿದೆ. ಉಡುಪಿ ಕಡೆ ಯಿಂದ ಸೇತುವೆಯು ತಿರುವು ಹೊಂದಿದ್ದು ಹೊಸದಾಗಿ ಸಂಚರಿಸುವ ವಾಹನ ಸವಾರರಿಗೆ, ಲಾರಿ ಚಾಲಕರಿಗೆ ಹೆಚ್ಚಾಗಿ ತಿಳಿಯದೆ ಸೇತುವೆಯ ತಡೆಗೋಡೆಗೆ ಢಿಕ್ಕಿ ಯಾಗಿ ತಡೆಗೋಡೆಯೇ ಬಿರುಕು ಬಿಟ್ಟಿದೆ.
ಇದೀಗ ಆತ್ಮಹತ್ಯೆಯಂತಹ ಪ್ರಕರಣಗಳು ಉಳ್ಳಾಲದಿಂದ ಕೂಳೂರು ಕಡೆಗೆ ಶಿಫಾrಗಿದ್ದು, ಉಳ್ಳಾಲ ಸೇತುವೆಯಲ್ಲಿ ಸುರಕ್ಷ ಕ್ರಮವನ್ನು ತೆಗೆದುಕೊಂಡ ರೀತಿಯಲ್ಲೇ ಕೂಳೂರು ಸೇತುವೆಯಲ್ಲಿ ಸಿಸಿ ಟಿವಿ, ಎರಡೂ ಕಡೆಗಳಲ್ಲಿ ನೆಟ್ ಆಳವಡಿಸುವೆಗೆ ಕುರಿತಂತೆ ಕ್ರಮ ಜರಗಿಸಬೇಕು ಎಂಬ ಆಗ್ರಹವಿದೆ.
ಜಿಲ್ಲಾಧಿಕಾರಿಗೆ ಮನವಿ
ಕೂಳೂರು ಸೇತುವೆ ಅಪಘಾತ ಹಾಗೂ ಆತ್ಮಹತ್ಯೆಯ ತಾಣವಾಗಿ ಬದಲಾಗುವ ಬಗ್ಗೆ ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ನಿರ್ಧರಿಸಿದೆ. ಕಳೆದ ಒಂದು ತಿಂಗಳಲ್ಲಿ ಮೂರು ಪ್ರಕರಣ ದಾಖಲಾಗಿದೆ. ಇದನ್ನು ತಡೆಯಬೇಕಿದೆ.ಬೀದಿ ದೀಪ, ಫೆನ್ಸಿಂಗ್ ಹಾಕುವ ಮೂಲಕ ಆತ್ಮಹತ್ಯೆ ಪ್ರಕರಣವನ್ನು ತಡೆಯಬೇಕಿದೆ.
– ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು, ಅಧ್ಯಕ್ಷರು ನಾಗರಿಕ ಹಿತರಕ್ಷಣಾ ಸಮಿತಿ ಕೂಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು
UN posts ಮೇಲೆಯೇ ಇಸ್ರೇಲ್ ದಾಳಿ! ; 600 ಭಾರತೀಯ ಸೈನಿಕರು ಅಪಾಯದಲ್ಲಿ!!
Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು
Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ
Mysuru Dasara; ಅರಮನೆಯಲ್ಲಿ ಡಬಲ್ ಸಂಭ್ರಮ: ಯದುವೀರ್ ಅವರಿಗೆ 2ನೇ ಮಗು ಜನನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.