Kuppepadav: ಅಶಕ್ತರ ನೆರವಿಗೆ ವೇಷ ಹಾಕಿದ ಯುವಕರು

3ನೇ ವರ್ಷದ ಕಾರ್ಯಕ್ರಮ; 1 ಲಕ್ಷಕ್ಕೂ ಅಧಿಕ ಸಂಗ್ರಹ ; ಐವರಿಗೆ ಸಿಗಲಿದೆ ನೆರವು; ಕುಪ್ಪೆಪದವಿನ ರಾಮ್‌ಸೇನಾ ವಾಯುಪುತ್ರ ಘಟಕದಿಂದ 25 ಕಿ.ಮೀ. ಕಾಲ್ನಡಿಗೆ

Team Udayavani, Oct 7, 2024, 2:45 PM IST

5(1)

ಕುಪ್ಪೆಪದವು: ನವರಾತ್ರಿ ಸಂದರ್ಭದಲ್ಲಿ ತಮ್ಮ ಸಂತೋಷಕ್ಕಾಗಿ ವೇಷ ಹಾಕುವವರ ನಡುವೆ ಕಷ್ಟ ದಲ್ಲಿರುವವರ ನೆರವಿಗಾಗಿ ವೇಷ ಹಾಕಿ ಕುಣಿಯು ವವರೂ ಸಾಕ ಷ್ಟಿದ್ದಾರೆ. ಕುಪ್ಪೆಪದವಿನ ರಾಮ್‌ ಸೇನಾ ವಾಯುಪುತ್ರ ಘಟಕವು ‘ಭವತಿ ಭಿಕ್ಷಾಂದೇಹಿ’ ಎಂಬ ಕಾರ್ಯ ಕ್ರಮ ರೂಪಿಸಿದ್ದು, ಅದರಲ್ಲಿ ಸಂಗ್ರಹವಾದ 1.3 ಲಕ್ಷ ರೂ.ಯನ್ನು ನಾಲ್ವರು ಅಶಕ್ತರ ಕುಟುಂಬಗಳಿಗೆ ನೀಡಲಿದೆ.

ರಾಮ್‌ ಸೇನಾ ವಾಯುಪುತ್ರ ತಂಡವು ನವರಾತ್ರಿಯ ಹಲವು ವೇಷಗಳನ್ನು ಧರಿಸಿ ಕುಪ್ಪೆಪದವಿನಿಂದ ಬಜಪೆವರೆಗೆ ಸುಮಾರು 25 ಕಿ.ಮೀ. ಕಾಲ್ನಡಿಗೆ ನಡೆಸಿದೆ. ಈ ವೇಳೆ ತಂಡವು ಅಂಗಡಿ, ಮನೆಗಳಲ್ಲಿ ವೇಷ-ಕುಣಿತ, ಹಾಸ್ಯ ಪ್ರದರ್ಶನ ನೀಡಿದೆ.

ತಂಡವು ಅ. 3ರಂದು ಕುಪ್ಪೆಪದವು ಶ್ರೀ ದುರ್ಗೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 8.30ಕ್ಕೆ ಗೊಂಬೆ ಹಾಗೂ ವಿಶೇಷ ವೇಷ ಧರಿಸಿ ಹೊರಟದೆ. ಕುಪ್ಪೆಪದವು ಪೇಟೆ, ಎಡಪದವು ಪೇಟೆ, ಗಂಜಿಮಠ, ಕೈಕಂಬ ಪೇಟೆ, ಪೆರಾರ, ಸುಂಕದಕಟ್ಟೆ ಮೂಲಕ ಬಜಪೆ ಪೇಟೆಗೆ ಆಗಮಿಸಿದೆ. ಬಳಿಕ ಅಲ್ಲಿಂದ ಕೈಕಂಬ ಪೇಟೆಗೆ ಕಾಲ್ನಡಿಗೆಯಲ್ಲಿ ಸಾಗಿದೆ. ಒಟ್ಟು ಸುಮಾರು 25 ಕಿ.ಮೀ. ದೂರ ಕ್ರಮಿಸಿದೆ. ತಂಡದಲ್ಲಿ ಒಟ್ಟು 30 ಮಂದಿ ಯುವಕರಿದ್ದು, ಕೆಲವರು ವೇಷ ಹಾಕಿದರೆ ಕೆಲವರು ವೇಷದೊಂದಿಗೆ ಹೋಗಿ, ಅಂಗಡಿ -ಮನೆಗಳಿಂದ ಹಣ ಸಂಗ್ರಹ ನಡೆಸಿದೆ.

3ನೇ ವರ್ಷದ ಕಾರ್ಯಕ್ರಮ
ರಾಮ್‌ ಸೇನಾ ವಾಯುಪುತ್ರ ಘಟಕದ ಅಧ್ಯಕ್ಷ ಸಂದೇಶ್‌ ಮತ್ತು ಇತರರ ನೇತೃತ್ವದಲ್ಲಿ ನಡೆಯುತ್ತಿರುವ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮ ಈ ವರ್ಷ ಮೂರನೇಯದು. ಸದಸ್ಯರು ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಅವರ ಜತೆಗೆ ಒಂದು ಪಿಕಪ್‌ ವಾಹನವೂ ಇದ್ದು, ಅದರಲ್ಲಿರುವ ದಲ್ಲಿ ಧ್ವನಿವರ್ಧಕ ಬಳಸಿ ಉದ್ದೇಶವನ್ನು ತಿಳಿಸಿ ಹಣ ಸಂಗ್ರಹ ಮಾಡಲಾಗಿದೆ. ಒಂದೇ ದಿನದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಮೊತ್ತ ಸಂಗ್ರಹವಾಗಿದೆ ಎನ್ನಲಾಗಿದೆ.

ಮೊದಲ ವರ್ಷ 1 ಲಕ್ಷ ರೂ. ಸಂಗ್ರಹವಾಗಿದ್ದು, ಅದನ್ನು ಆರು ಮಂದಿ ಅಶಕ್ತರಿಗೆ ಹಂಚಲಾಗಿದೆ. ಕಳೆದ ಬಾರಿ 90 ಸಾವಿರ ರೂಪಾಯಿ ಸಂಗ್ರಹದ ಹಣ 5 ಮಂದಿಗೆ ನೀಡಲಾಗಿದೆ. ಈ ಬಾರಿ ಐವರಿಗೆ ನೀಡಲಾಗುತ್ತದೆ.

ಟಾಪ್ ನ್ಯೂಸ್

0821

BBK11: ಜಗದೀಶ್‌ ಬಿಟ್ಟು ಈ ವ್ಯಕ್ತಿ ಬಿಗ್‌ಬಾಸ್‌ ಮನೆಯಲ್ಲಿ ಇರೋದು ತುಂಬಾ ಡೇಂಜರ್..‌ ಯಮುನಾ

Hubli: Cricketer KL Rahul helped poor talent

Hubli: ಬಡ ಪ್ರತಿಭೆಗೆ ನೆರವಾದ ಕ್ರಿಕೆಟಿಗ ಕೆ.ಎಲ್.ರಾಹುಲ್

Nagpur: 6 ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್:‌ ದೂರು ದಾಖಲು, ಆರೋಪಿ ಪರಾರಿ!

Nagpur: 6 ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್:‌ ದೂರು ದಾಖಲು, ಆರೋಪಿ ಪರಾರಿ!

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

Mangaluru CCB team seized huge quantity of drugs; Siberian citizen arrested

Mangaluru: ಬೃಹತ್‌ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡ ಸಿಸಿಬಿ ತಂಡ; ನೈಜಿರಿಯಾ ಪ್ರಜೆ ಬಂಧನ

zameer ahmed khan

Vijayapura: ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಹೈಕಮಾಂಡ್ ಇದೆ, ವಿಜಯೇಂದ್ರ ಯಾರು?: ಸಚಿವ ಜಮೀರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru CCB team seized huge quantity of drugs; Siberian citizen arrested

Mangaluru: ಬೃಹತ್‌ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡ ಸಿಸಿಬಿ ತಂಡ; ನೈಜಿರಿಯಾ ಪ್ರಜೆ ಬಂಧನ

4

Mangaluru: ಪೌರಾಣಿಕ ಕಥಾನಕ, ವೈಜ್ಞಾನಿಕ ಕೌತುಕ!

v

Kinnigoli: ಕಾರಿಗೆ ಆಕಸ್ಮಿಕ ಬೆಂಕಿ; ಸ್ಥಳೀಯರ ಸಹಾಯದಿಂದ ಪಾರಾದ ತಾಯಿ ಮಕ್ಕಳು

body of Mamtaz Ali found under Koolur Bridge

Mangaluru: ಕೂಳೂರು ಸೇತುವೆ ಕೆಳಗೆ ಮಮ್ತಾಜ್ ಅಲಿ ಮೃತದೇಹ ಪತ್ತೆ

Mangaluru: ಮಮ್ತಾಜ್ ಅಲಿ ನಾಪತ್ತೆ ಪ್ರಕರಣ: ಮಹಿಳೆ ಸಹಿತ ಆರು ಮಂದಿ ವಿರುದ್ದ ಎಫ್ಐಆರ್

Mangaluru: ಮಮ್ತಾಜ್ ಅಲಿ ಪ್ರಕರಣ: ಮಹಿಳೆ ಸಹಿತ ಆರು ಮಂದಿ ವಿರುದ್ದ ಎಫ್ಐಆರ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Shine shetty’s just married movie teaser out

Just Married: ಟೀಸರ್‌ನಲ್ಲಿ ʼಜಸ್ಟ್‌ ಮ್ಯಾರೀಡ್‌ʼ; ನಿರ್ಮಾಣದತ್ತ ಅಜನೀಶ್‌ ಲೋಕನಾಥ್‌

0821

BBK11: ಜಗದೀಶ್‌ ಬಿಟ್ಟು ಈ ವ್ಯಕ್ತಿ ಬಿಗ್‌ಬಾಸ್‌ ಮನೆಯಲ್ಲಿ ಇರೋದು ತುಂಬಾ ಡೇಂಜರ್..‌ ಯಮುನಾ

Hubli: Cricketer KL Rahul helped poor talent

Hubli: ಬಡ ಪ್ರತಿಭೆಗೆ ನೆರವಾದ ಕ್ರಿಕೆಟಿಗ ಕೆ.ಎಲ್.ರಾಹುಲ್

Nagpur: 6 ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್:‌ ದೂರು ದಾಖಲು, ಆರೋಪಿ ಪರಾರಿ!

Nagpur: 6 ವರ್ಷಗಳಿಂದ ನಕಲಿ ವೈದ್ಯನ ದರ್ಬಾರ್:‌ ದೂರು ದಾಖಲು, ಆರೋಪಿ ಪರಾರಿ!

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.