ಮೂಲಸೌಕರ್ಯಗಳಿಲ್ಲದೆ ಸಂಕಷ್ಟ

ಜ್ಯೋತಿ ನಗರವೆಂಬ ಕಿಷ್ಕಿಂದೆ ಅನಾರೋಗ್ಯಕರ ವಾತಾವರಣದಲ್ಲಿ ಬದುಕು!

Team Udayavani, Apr 19, 2022, 12:54 PM IST

infrastructure

ಕಾವೂರು: ವಲಸೆ ಕಾರ್ಮಿಕ ರಾಗಿ ಬಂದವರು ಗುಡ್ಡದ ಮೇಲೊಂದು ಜೋಪಡಿಯ ಮಾಡಿ ಎಂಬಂತೆ, ಕಾಲಕ್ರಮವಾಗಿ ಜೋಪಡಿಗಳು ಇದ್ದ ಲ್ಲಿಯೇ ಕಲ್ಲು ಸಿಮೆಂಟು, ತಗಡು ಶೀಟಿನಿಂದ ಮನೆ ಮಾಡಿ ಕುಳಿತವರಿಗೆ ಇದೀಗ ಮೂಲಸೌಕರ್ಯ ಕಲ್ಪಿಸುವುದು ಸವಾಲಿನ ವಿಷಯವಾಗಿದೆ. ಹಾಗಾಗಿ ಅನಾರೋಗ್ಯಕರ ವಾತಾವರಣದಲ್ಲಿ ಅವರು ವಾಸಿಸುವಂತಾಗಿದೆ. ಜ್ಯೋತಿ ನಗರವೆಂಬ ಬೆಟ್ಟದಂತಹ ಇಳಿಜಾರಿನ ಸರಕಾರಿ ಜಾಗದಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ಮನೆ ನಿರ್ಮಿಸಿ ಹಲವಾರು ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ವಾಸಿಸುವವರ ಸಂಖ್ಯೆ ಏರುತ್ತಿದ್ದಂತೆ ಒಳಚರಂಡಿ, ದಾರಿ ಸರಿಯಾಗಿ ಇಲ್ಲದಿರುವುದು ಪ್ರಮುಖ ವಾಗಿ ಇಲ್ಲಿನ ಸಮಸ್ಯೆಯಾಗಿ ಕಾಡತೊಡಗಿತು.

ರಸ್ತೆ ಚರಂಡಿಗೆ ವ್ಯತ್ಯಸವಿಲ್ಲದಂತೆ ಹರಿಯುವ ನೀರು, ಸರಿಯಾಗಿ ಬೆಳಕು ಇಲ್ಲದ ಕಡೆ ಮನೆಗಳು, ರಾಶಿ ಕಸ, ತೆರೆದ ಮೋರಿ, ಕೊಳಚೆ ನೀರು ಅಲಲ್ಲಿ ನಿಂತ ಕಾರಣ ದುರ್ವಾಸನೆ, ಜತೆಗೆ ಸೊಳ್ಳೆಗಳು ಹೆಚ್ಚಿವೆ. ರೋಗಗಳು ಹರಡುವ ಭೀತಿ ನಡುವೆ ಜ್ವರ, ಶೀತ ಸಾಮಾನ್ಯ. ಬಡಾವ ಣೆಗೆ ಕಾಲಿಟ್ಟರೆ ಇಲ್ಲಿ ಜನ ವಸತಿ ಸಾಧ್ಯವೇ ಎಂಬ ಅನುಮಾನ ಬಾರದೇ ಇರದು.

ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಿದರೂ ಏರು ಪ್ರದೇಶದಲ್ಲಿ ಪ್ರಶರ್‌ ಕೊರತೆಯಿಂದ ಕೆಲವೆಡೆ ನೀರು ತಲುಪುವುದಿಲ್ಲ. ಬಡಾವಣೆ ತಲುಪಲು ಅಗಲ ಕಿರಿದಾದ ರಸ್ತೆ. ಸತತ ಮಾಹಿತಿ, ಜಾಗೃತಿಯಿಂದ ಸದ್ಯ ಬಯಲು ಶೌಚಾಲಯದ ಸಮಸ್ಯೆ ಇಲ್ಲ. ಆದರೆ ಸರಿಯಾಗಿ ಜಾಗವಿಲ್ಲದ ಪರಿಣಾಮ, ಕೆಲವರಿಗೆ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯಲು ರಸ್ತೆಯೇ ಆಧಾರ. ಇದರ ನೀರು ರಸ್ತೆಯಲ್ಲಿ ಹರಿದು ಅರೆ ಬರೆಯಾಗಿರುವ ಚರಂಡಿ ಸೇರುತ್ತದೆ. ಹರಿವ ಕೊಳಚೆ ನೀರು, ರಸ್ತೆ ಬದಿಯಲ್ಲೇ ಅಳಿದುಳಿದ ಆಹಾರ ಎಸೆಯುವ ಕಾರಣ ಬಡಾವಣೆ ಸುತ್ತ ಬೀದಿ ನಾಯಿಗಳ ಕಾಟ ಹೆಚ್ಚಿದೆ. ಇಷ್ಟೆಲ್ಲ ಅವಾಂತರಗಳ ನಡುವೆ ಇಲ್ಲಿನ ನಿವಾಸಿಗಳು ಸಂಕಷ್ಟದ ಜೀವನ ಸಾಗುತ್ತಿದೆ.

ಈ ಬಡಾವಣೆಯಲ್ಲಿ 75ಕ್ಕೂ ಅಧಿಕ ಮನೆಗಳಲ್ಲಿ ಬಡವರ್ಗದವರು ವಾಸ ಮಾಡುತ್ತಿದ್ದಾರೆ. ಇದ್ದ ಹಾಗೆಯೇ ಮನೆಗಳು ಕೈಯಿಂದ ಕೈಗೆ ಬದಲವಾಣೆ ಆಗುತ್ತಲೇ ಇವೆ. ಇಲ್ಲಿನವರಿಗೆ ಮೂಲಸೌಕರ್ಯ ಒದಗಿಸದಿದ್ದರೂ ಹಕ್ಕು ಪತ್ರ, ಮತದಾನದ ಹಕ್ಕನ್ನು ನೀಡಲಾಗಿದೆ.

ಮೂಲ ಸೌಕರ್ಯ ಒದಗಿಸಲು ನಮಗೂ ಮನಸ್ಸಿದೆ, ಅನುದಾನವನ್ನು ಶಾಸಕರು ನೀಡಿದ್ದಾರೆ. ಆದರೆ ಅದನ್ನು ನೀಡುವುದು ಹೇಗೆ ಎಂಬುದೇ ಇಲ್ಲಿನ ಸಮಸ್ಯೆ. ಕಾರಣ ಜಾಗದ ಕೊರತೆ, ಚರಂಡಿ ನಿರ್ಮಾಣಕ್ಕೆ ತಾಂತ್ರಿಕ ಅಡಚಣೆ ಹೀಗೆ ನೂರಾರು ಅಡ್ಡಿಗಳಿವೆ. ಅದರೂ ನಮ್ಮಿಂದಾದಷ್ಟು ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ಇಲ್ಲಿನ ಮನಪಾ ಸದಸ್ಯ ಶರತ್‌ ಕುಮಾರ್‌.

-ಲಕ್ಷ್ಮೀನಾರಾಯಣ ರಾವ್‌

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.