![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Dec 2, 2020, 10:28 AM IST
ಮಂಗಳೂರು: ಪರ್ಸೀನ್ ಬೋಟ್ ಮುಳುಗಡೆ ಪ್ರಕರಣದಲ್ಲಿ ನಾಪತ್ತೆಯಾದವರಲ್ಲಿ ಮತ್ತೋರ್ವ ಮೀನುಗಾರನ ಮೃತದೇಹ ಬುಧವಾರ ಪತ್ತೆಯಾಗಿದೆ.
ನಗರದಿಂದ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್ ಸೋಮವಾರ ರಾತ್ರಿ ಮುಳುಗಡೆಯಾಗಿತ್ತು. ಬೋಟ್ ನಲ್ಲಿ ಒಟ್ಟು 25 ಮಂದಿ ತೆರಳಿದ್ದು, 19 ಮಂದಿ ಪಾರಾಗಿದ್ದರು. ನಾಪತ್ತೆಯಾಗಿದ್ದ ಆರು ಮಂದಿಯಲ್ಲಿ ಇಬ್ಬರ ಮೃತದೇಹ ಮಂಗಳವಾರ ಪತ್ತೆಯಾಗಿತ್ತು. ಒಂದು ಮೃತದೇಹ ಇಂದು ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಶೋಧ ಮುಂದುವರಿದಿದೆ.
ಮುಷ್ಕರ
ನಾಪತ್ತೆಯಾದ ಎಲ್ಲರೂ ಪತ್ತೆಯಾಗುವವರೆಗೆ ನಾವು ಯಾವುದೇ ರೀತಿಯ ವ್ಯವಹಾರ ಮಾಡುವುದಿಲ್ಲ ಎಂದು ಮೀನುಗಾರರು ಮುಷ್ಕರ ಹೂಡಿದ್ದಾರೆ. ಹೀಗಾಗಿ ಮಂಗಳೂರು ಮೀನುಗಾರಿಕಾ ಬಂದರು ಸಂಪೂರ್ಣ ಬಂದ್ ಆಗಿದೆ. ಯಾವುದೇ ಮೀನು ವ್ಯಾಪಾರ- ವಹಿವಾಟು ನಡೆಯುತ್ತಿಲ್ಲ.
ಇದನ್ನೂ ಓದಿ:ಮಂಗಳೂರು ಬೋಟ್ ದುರಂತ: ನಾಲ್ವರು ಪತ್ತೆಯಾಗುವವರೆಗೂ ಮೀನುಗಾರಿಕಾ ಬಂದರು ಬಂದ್ ಮಾಡಿ ಮುಷ್ಕರ
ಏಕಾಏಕಿ ಮಗುಚಿದ ಬೋಟ್
ಮೀನು ತುಂಬಿದ್ದ ಬೋಟ್ ಏಕಾಏಕಿ ಒಂದೆಡೆಗೆ ಮಗುಚಿ ಮುಳು ಗಿದೆ. ಮಗುಚಿದಾಗ ಕೆಲವರು ಬೋಟ್ನ ಕ್ಯಾಬಿನ್ನೊಳಗೆ, ಮೂವರು ಬಲೆಯೊಳಗೆ ಸಿಲುಕಿದರು. ಉಳಿ ದವ ರಲ್ಲಿ ಕೆಲವರು ಬೋಟ್ನಿಂದ ನೀರಿಗೆ ಎಸೆಯಲ್ಪಟ್ಟರು ಎಂದು ಪಾರಾಗಿ ಬಂದಿರುವ ಮೀನುಗಾರರು “ಉದಯವಾಣಿ’ಗೆ ತಿಳಿಸಿದ್ದಾರೆ.
“ಹೇಗೆ ಸಂಭವಿಸಿತೋ ಗೊತ್ತಿಲ್ಲ’
“ನಾವು ಸುಮಾರು 12 ನಾಟಿಕಲ್ ಮೈಲು ದೂರದಲ್ಲಿ ಬೋಟ್ ನಿಲ್ಲಿಸಿ ಬಲೆ ಹಾಕಿ ಮೀನು ಹಿಡಿದು ದೋಣಿಗೆ ತುಂಬಿಸಿ ವಾಪಸಾಗುತ್ತಿದ್ದೆವು. ಅಲ್ಲಿಂದ ದಡ ಸೇರಲು ಅರ್ಧ ಗಂಟೆ ದಾರಿ ಮಾತ್ರ ಬಾಕಿ ಇತ್ತು. ನಾನು 15 ವರ್ಷಗಳಿಂದ ಮೀನುಗಾರಿಕೆ ಬೋಟ್ ಚಾಲಕನಾಗಿ ದುಡಿಯುತ್ತಿದ್ದೇನೆ. ಕಳೆದ ಕೆಲವು ತಿಂಗಳುಗಳಿಂದ ಶ್ರೀರಕ್ಷಾ ಬೋಟ್ ಚಲಾಯಿಸುತ್ತಿದ್ದೆ. ಆದರೆ ಸೋಮವಾರ ರಾತ್ರಿ ಏನಾಯಿತೆಂಬುದೇ ಗೊತ್ತಿಲ್ಲ. ನಾವು ಇದಕ್ಕಿಂತ ಮೂರು ಪಟ್ಟು ದೂರಕ್ಕೆ ಹೋಗಿ ಮೀನುಗಾರಿಕೆ ನಡೆಸಿದ್ದೆವು, ಏನೂ ಆಗಿರಲಿಲ್ಲ. ಆದರೆ ಸೋಮವಾರದ ಘಟನೆ ಕ್ಷಣದೊಳಗೆ ನಡೆದು ಹೋಯಿತು’ ಎಂದು ಮುಳುಗಡೆಯಾದ ಬೋಟ್ನ ಚಾಲಕ ರೂಪೇಶ್ ತಿಳಿಸಿದ್ದಾರೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.