ಮಂಗಳೂರು: ಕಡಲ ನಗರಿಯ “ಓವರ್‌ ಹೆಡ್‌’ ವಿದ್ಯುತ್‌ ಲೈನ್‌ “ಭೂಗತ’!


Team Udayavani, Feb 8, 2024, 11:20 AM IST

ಮಂಗಳೂರು: ಕಡಲ ನಗರಿಯ “ಓವರ್‌ ಹೆಡ್‌’ ವಿದ್ಯುತ್‌ ಲೈನ್‌ “ಭೂಗತ’!

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ಬದಲಾಗಿರುವ ಕಡಲನಗರಿ ಮಂಗಳೂರು ವ್ಯಾಪ್ತಿಯ “ಓವರ್‌ ಹೆಡ್‌’ ವಿದ್ಯುತ್‌ ಲೈನ್‌ಗಳನ್ನು “ಭೂಗತ ವಿದ್ಯುತ್‌ ಕೇಬಲ್‌’ಗೆ ಬದಲಾಯಿಸುವ ಮಹತ್ವದ ಚಿಂತನೆ ಇಂಧನ ಇಲಾಖೆಯಲ್ಲಿ ಮೂಡಿದ್ದು ಹೊಸ ನಿರೀಕ್ಷೆ ಹುಟ್ಟುಹಾಕಿದೆ.

ಸಬ್‌ ಸ್ಟೇಶನ್‌ನಿಂದ ವಿದ್ಯುತ್‌ ಸಂಪರ್ಕ ಕಲ್ಪಿಸುವ ಪ್ರದೇಶ ವ್ಯಾಪ್ತಿಯ “ಓವರ್‌ ಹೆಡ್‌’ ವಿದ್ಯುತ್‌ ಲೈನ್‌ ಗಳನ್ನು ಭೂಗತ ವಿದ್ಯುತ್‌ ಕೇಬಲ್‌ಗೆ ಬದಲಾಯಿಸುವುದು ಈ ಚಿಂತನೆಯ ಉದ್ದೇಶ. ಸದ್ಯ ನಗರದ ಸ್ಟೇಟ್‌ಬ್ಯಾಂಕ್‌ ಪರಿಸರ, ಮಂಗಳಾದೇವಿ, ಕಾರ್‌ ಸ್ಟ್ರೀಟ್‌ ವ್ಯಾಪ್ತಿಯಲ್ಲಿ ಅನುಷ್ಠಾನದಲ್ಲಿರುವ ಭೂಗತ ಕೇಬಲ್‌ ಯೋಜನೆಯನ್ನು ಮುಂದೆ ನಗರದ ಎಲ್ಲೆಡೆಯೂ ಅನುಷ್ಠಾನಿಸಲು ಉದ್ದೇಶಿಸಲಾಗಿದೆ.

ಮಂಗಳೂರು ಪರಿಧಿಯಲ್ಲಿ ಸಾಮಾನ್ಯವಾಗಿ ಉಪ್ಪಿನಂಶದಿಂದ ಕೂಡಿದ ಹವಾಮಾನ, ವಾತಾವರಣದಿಂದಾಗಿ ಕಂಬಗಳ ಮೂಲಕ ಹಾದುಹೋಗುವ ವಿದ್ಯುತ್‌ ತಂತಿಗಳಿಂದ ಆಗಾಗ್ಗೆ ಸಮಸ್ಯೆಗಳು ಸಾಮಾನ್ಯ. ನಗರ ಸೌಂದರ್ಯಕ್ಕೂ ಉತ್ತಮವಲ್ಲ. ಹಾಗಾಗಿ ಭೂಗತ ಕೇಬಲ್‌ ಅಳವಡಿಕೆಯ ಅಗತ್ಯವಿದೆ ಎಂದು ಇತ್ತೀಚೆಗೆ ವಿ.ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಅವರು ಇಂಧನ ಸಚಿವರ ಗಮನ ಸೆಳೆದಿದ್ದರು. ಶಾಸಕ ವೇದವ್ಯಾಸ ಕಾಮತ್‌ ಈ ಬಗ್ಗೆ ಧ್ವನಿಗೂಡಿಸಿ ನಗರದಲ್ಲಿ ಭೂಗತ ಕೇಬಲ್‌ ಅಳವಡಿಕೆಯ ಅಗತ್ಯದ ಬಗ್ಗೆ ವಿವರಿಸಿದ್ದರು.

ಬೈಕಂಪಾಡಿ ಕೈಗಾರಿಕೆ ವ್ಯಾಪ್ತಿ:
ಭೂಗತ ಕೇಬಲ್‌ಗೆ ಆಗ್ರಹ ಕೈಗಾರಿಕೆ ಪ್ರದೇಶವಿರುವ ಬೈಕಂಪಾಡಿ ವ್ಯಾಪ್ತಿಯಲ್ಲಿ ವಿದ್ಯುತ್‌ ಸುರಕ್ಷೆ ದೃಷ್ಟಿಯಿಂದ 33 ಕೆವಿ ಭೂಗತ ಕೇಬಲ್‌ ಅಳವಡಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಸರಕಾರವನ್ನು ಆಗ್ರಹಿಸಿದೆ. ಬೈಕಂಪಾಡಿ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆ ಸಂದರ್ಭ ವಿದ್ಯುತ್‌ ಲೈನ್‌ಗಳಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಜತೆಗೆ ಕೈಗಾರಿಕೆಗಳ
ಮೇಲ್ಭಾಗದಲ್ಲಿ ತಂತಿಗಳು ಇರುವುದರಿಂದ ಆತಂಕಕ್ಕೂ ಕಾರಣವಾಗುತ್ತದೆ. ಹೀಗಾಗಿ ಕೈಗಾರಿಕೆ ಪ್ರದೇಶವ ವ್ಯಾಪ್ತಿಯಲ್ಲಿ ವಿದ್ಯುತ್‌
ಲೈನ್‌ಗಳನ್ನು ಭೂಗತ ವ್ಯವಸ್ಥೆಯಡಿ ಮಾಡಿಕೊಡುವಂತೆ ಕೆಸಿಸಿಐ ಇಂಧನ ಇಲಾಖೆಯ ಗಮನಸೆಳೆದಿದೆ.

ಸದ್ಯ ಭೂಗತ ಕೇಬಲ್‌ ಎಲ್ಲಿದೆ?
ಮಂಗಳೂರು ವಿಭಾಗ ವ್ಯಾಪ್ತಿಯ ನೆಹರೂ ಮೈದಾನ, ಕಂಕನಾಡಿ, ಅತ್ತಾವರ, ಮಣ್ಣಗುಡ್ಡೆ ಕುದ್ರೋಳಿ ಸಹಿತ ಸಬ್‌ಸ್ಟೇಶನ್‌ ಇರುವ ಭಾಗಕ್ಕೆ ಭೂಗತ ವಿದ್ಯುತ್‌ ಕೇಬಲ್‌ ಮೂಲಕವೇ ಈಗಾಗಲೇ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಈ ಪೈಕಿ ನಗರದಲ್ಲಿ ಇದೇ ಮೊದಲ ಬಾರಿಗೆ ನೆಹರೂ ಮೈದಾನ ಸಬ್‌ಸ್ಟೇಶನ್‌ನಿಂದ ಸರಬರಾಜಾಗುವ ವಿದ್ಯುತ್‌ ಸಂಪರ್ಕಗಳಿಗೆ ಭೂಗತ
ವಿದ್ಯುತ್‌ ಕೇಬಲ್‌ ಅಳವಡಿಸಲಾಗಿದೆ.

ಪಾಂಡೇಶ್ವರದಿಂದ ಆರ್‌ಟಿಒ, ಕೆ.ಎಸ್‌. ರಾವ್‌ ರಸ್ತೆ, ಪಿವಿಎಸ್‌, ಡೊಂಗರಕೇರಿ, ಕಾರ್‌ಸ್ಟ್ರೀಟ್‌ ವ್ಯಾಪ್ತಿಯ ವಿದ್ಯುತ್‌ ಕೇಬಲ್‌
ಗಳು ಈ ಮೂಲಕ ಭೂಗತವಾಗಿದೆ. ಮೆಸ್ಕಾಂನ “ಮೋಡೆಲ್‌ ಸಬ್‌ಡಿವಿಶನ್‌ ಪ್ರೊಜೆಕ್ಟ್’ ಎಂಬ ಯೋಜನೆ ಇದಾಗಿದೆ. ಇದರ ಜತೆಗೆ ಸ್ಮಾರ್ಟ್‌ಸಿಟಿ ವತಿಯಿಂದ ಮಂಗಳಾದೇವಿ ರಸ್ತೆ, ಮಾರ್ನಮಿಕಟ್ಟೆ, ಮೋರ್ಗನ್ಸ್‌ಗೆàಟ್‌, ರಾಮಕೃಷ್ಣ ಮಠ ರಸ್ತೆ, ನ್ಯೂ ಪಾಂಡೇಶ್ವರ ರೋಡ್‌, ಕಾರ್‌ ಸ್ಟ್ರೀಟ್‌ ಪರಿಸರದಲ್ಲಿ ಭೂಗತ ಕೇಬಲ್‌ ಹಾಕಲಾಗಿದೆ. ಇಂತಹ ಪರಿಕಲ್ಪನೆಯನ್ನು ನಗರ ವ್ಯಾಪ್ತಿಯ ಎಲ್ಲೆಡೆಯೂ ವಿಸ್ತರಿಸುವ ಬಗ್ಗೆ ಚರ್ಚೆ ಶುರುವಾಗಿದೆ.

ಜಪ್ಪು-ತೊಕ್ಕೊಟು ಮಧ್ಯೆ ಭೂಗತ ಕೇಬಲ್‌
ಮೆಸ್ಕಾಂನ ಮಂಗಳೂರು ವೃತ್ತ ವ್ಯಾಪ್ತಿಯ ಮಂಗಳೂರು ವಿಭಾಗದಲ್ಲಿ ನಿರಂತರ ವಿದ್ಯುತ್‌ ಪೂರೈಕೆಗೆ ಪೂರಕವಾಗಿ ಮಂಗಳೂರು ತಾಲೂಕಿನ ಅಡ್ಯಾರು, ಕುಡುಪು, ಮೂಡುಬಿದಿರೆಯ ಕಡಲಕೆರೆ (ಮಾರ್ಪಾಡಿ), ಪುತ್ತೂರಿನ ಅಲಂಕಾರು ಬಳಿ
110/33/11 ಕೆವಿ ಸಾಮರ್ಥ್ಯದ ಉಪ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದೆ.

ಉಳ್ಳಾಲದ ತೊಕ್ಕೊಟ್ಟು, ಮಂಗಳೂರಿನ ನಂದಿಗುಡ್ಡೆ ಸಹಿತ ಜಿಲ್ಲೆಯ 8 ಉಪ ಕೇಂದ್ರಗಳ (33/11 ಕೆವಿ ಸಾಮರ್ಥ್ಯ) ಮೇಲಿನ ಅಧಿಕ ಹೊರೆಯನ್ನು ನಿರ್ವಹಿಸುವ ಸಲುವಾಗಿ ಈ ಉಪ ಕೇಂದ್ರಗಳ 5 ಎಂವಿಎ ಶಕ್ತಿ ಪರಿವರ್ತಕವನ್ನು 10 ಎಂವಿಎ ಶಕ್ತಿ
ಪರಿವರ್ತಕ್ಕೆ ಉನ್ನತೀಕರಣವನ್ನೂ ಕೈಗೆತ್ತಿಕೊಳ್ಳಲಾಗಿದೆ. ಮೂಡುಬಿದಿರೆ, ಕೊಣಾಜೆ, ಮಂಗಳೂರನ ಜಪ್ಪು ಉಪ ಕೇಂದ್ರ ಸಹಿತ ಕೆಲವು ಉಪಕೇಂದ್ರದ ಉನ್ನತೀಕರಣ ಹಾಗೂ ಜಪ್ಪು ಉಪಕೇಂದ್ರದಿಂದ ತೊಕ್ಕೊಟ್ಟು ಉಪ ಕೇಂದ್ರದ ನಡುವಿನ 6.25 ಕಿ.ಮೀ. ವ್ಯಾಪ್ತಿಯಲ್ಲಿ 33 ಕೆವಿ ಭೂಗತ ಕೇಬಲ್‌ ಲಿಂಕ್‌ ಲೈನ್‌ ಕಾಮಗಾರಿಯನ್ನು ಮೆಸ್ಕಾಂ ನಡೆಸುತ್ತಿದೆ ಎಂದು ಮೆಸ್ಕಾಂ ಎಂಡಿ ಪದ್ಮಾವತಿ ತಿಳಿಸಿದ್ದಾರೆ.

“ಭೂಗತ ಕೇಬಲ್‌’ ಲಾಭವೇನು?
ಭೂಗತ ಕೇಬಲ್‌ ಹಾಕುವುದರಿಂದ ರಸ್ತೆಯ ಬದಿ ಮೇಲ್ಭಾಗದಲ್ಲಿ ವಿದ್ಯುತ್‌ ತಂತಿಗಳು ಜೋತು ಬೀಳುವುದು, ಮಳೆ ಗಾಳಿಗೆ ಮರಗಳು ಬಿದ್ದು, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ತಪ್ಪುತ್ತದೆ. ವಿದ್ಯುತ್‌ ಸಂಬಂಧಿತ ಅವಘಡಗಳೂ
ಕಡಿಮೆಯಾಗುತ್ತವೆ. ರಸ್ತೆ ಬದಿ ಅಲ್ಲಲ್ಲಿ ವಿದ್ಯುತ್‌ ಕಂಬಗಳು, ಮೇಲ್ಭಾಗದಲ್ಲಿ ತಂತಿಗಳು ಇಲ್ಲದಾಗುವುದರಿಂದ ರಸ್ತೆಗಳ ಸೌಂದರ್ಯ ಕೂಡ ಹೆಚ್ಚುತ್ತದೆ. ನಗರದ ಸ್ಮಾರ್ಟ್‌ನೆಸ್‌ ವರ್ಧನೆ ಆಗುತ್ತದೆ. ವಿದ್ಯುತ್‌ ವಿತರಣೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿಯೂ ಇದು ಪೂರಕ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು.

ಹಂತ ಹಂತವಾಗಿ ಜಾರಿ
ಮಂಗಳೂರಿನಲ್ಲಿ ಹಂತಹಂತವಾಗಿ ಭೂಗತ ಕೇಬಲ್‌ ಅಳವಡಿಕೆ ಹೆಚ್ಚಿಸಲು ವಿಶೇಷ ಆದ್ಯತೆ ನೀಡಲಾಗುವುದು. ಹಂತ ಹಂತವಾಗಿ ಇದರ ಜಾರಿಗೆ ಉದ್ದೇಶಿಸಲಾಗುವುದು. ಈ ಮೂಲಕ ವಿದ್ಯುತ್‌ ಸಮಸ್ಯೆಗಳಿಗೆ ಪೂರ್ಣ ಪರಿಹಾರ
ಸಿಗುವಂತೆ ಮಾಡಲಾಗುವುದು.
ಕೆ.ಜೆ. ಜಾರ್ಜ್‌, ಇಂಧನ ಸಚಿವರು

*ದಿನೇಶ್‌ ಇರಾ

ಟಾಪ್ ನ್ಯೂಸ್

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

-ROHAN

Rohan City Bejai: ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆಗೆ ಖಚಿತ ಪ್ರತಿಫಲ ಕೊಡುಗೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.