Mangaluru: ನಿತ್ಯ ಟ್ರಾಫಿಕ್ ಜಾಮ್ ಗೋಳು; ವಾಹನ ಸವಾರರ ಪರದಾಟ
ಪಂಪ್ವೆಲ್ ಸರ್ವಿಸ್ ರಸ್ತೆ ಅವ್ಯವಸ್ಥೆ
Team Udayavani, Oct 17, 2024, 2:50 PM IST
ಮಹಾನಗರ: ಮಂಗಳೂರು ನಗರ ಸಂಪರ್ಕಿಸುವ ಪಂಪ್ವೆಲ್ ಸರ್ವಿಸ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ಪರ ದಾಡುವಂತಾಗಿದೆ. ಎಕ್ಕೂರು ಭಾಗದಿಂದ ಆಗಮಿಸುವ ವೇಳೆ ಹೆದ್ದಾರಿಯ ಫ್ಲೈ ಓವರ್ನ ಆರಂಭಿಕ ಪ್ರದೇಶದಿಂದ ಪಂಪ್ವೆಲ್ ಜಂಕ್ಷನ್ ತನಕ ಎರಡು ಭಾಗಗಳಲ್ಲಿನ ಸರ್ವಿಸ್ ರಸ್ತೆ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಅವ್ಯವಸ್ಥೆಯಿಂದ ಸವಾರರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಅಲ್ಲಲ್ಲಿ ಇರುವ ಹೊಂಡಗುಂಡಿಗಳು ಸುಗಮ ಸಂಚಾರಕ್ಕೆ ಬ್ರೇಕ್ ಹಾಕುತ್ತಿವೆ. ಹೊಂಡಗುಂಡಿಗಳನ್ನು ತಪ್ಪಿಸಿಕೊಂಡು ಸಂಚರಿಸುವುದೇ ಸಾಹಸ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಇರುವ ಸರ್ವಿಸ್ ರಸ್ತೆ ಇದೀಗ ಅಪಾಯಕಾರಿಯಾಗಿ ಪರಿಣಮಿಸಿದೆ.
ನಿತ್ಯ ಟ್ರಾಫಿಕ್ ಜಾಮ್ ಬಿಸಿ
ಕೇರಳ, ತಲಪಾಡಿ, ಉಳ್ಳಾಲ, ಮುಡಿಪು ಇತ್ಯಾದಿ ಭಾಗಗಳಿಂದ ಮಂಗಳೂರು ನಗರಕ್ಕೆ ಆಗಮಿಸುವ ವಾಹನಗಳು ಪಂಪ್ವೆಲ್ ಸರ್ವಿಸ್ ರಸ್ತೆಯನ್ನು ಅವಲಂಬಿಸಿವೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳು ಈ ರಸ್ತೆಯಲ್ಲಿ ಓಡಾಡುವ ಕಾರಣದಿಂದಾಗಿ ನಿತ್ಯ ಟ್ರಾಫಿಕ್ ಬಿಸಿ ಸವಾರರಿಗೆ ತಪ್ಪಿದ್ದಲ್ಲ. ಬೆಳಗ್ಗಿನ ಸಮಯದಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ದ್ವಿಚಕ್ರ ಹಾಗೂ ಇತರ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವುದು ನಿತ್ಯ ಕಂಡುಬರುತ್ತಿದೆ. ಈ ಹಿಂದೆ ಕೆಲವು ಆ್ಯಂಬುಲೆನ್ಸ್ಗಳು ಟ್ರಾಫಿಕ್ನಲ್ಲಿ ಸಿಲುಕಿ ಪರದಾಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಳೆಗಾಲದಲ್ಲಿ ಸಂಚಾರ ದುಸ್ಥರ!
ಬಹುತೇಕ ಮಳೆಗಾಲದಲ್ಲಿ ರಸ್ತೆಗಳ ನೈಜ ಬಣ್ಣ ಬಯಲಾಗುತ್ತದೆ. ಪಂಪ್ವೆಲ್ ಸರ್ವಿಸ್ ರಸ್ತೆಯಲ್ಲೂ ಪ್ರತೀ ವರ್ಷ ಹೊಂಡ ಗುಂಡಿಗಳ ದರ್ಶನವಾಗುತ್ತಿದ್ದು, ಶಾಶ್ವತ ಪರಿಹಾರ ಮರಿಚಿಕೆಯಾಗಿದೆ. ಕೆಲವೊಂದು ಭಾಗಗಳಲ್ಲಿ ತೇಪೆ ಕಾರ್ಯ ನಡೆಸಲಾಗಿದೆ. ಆದರೆ ಮಳೆಗೆ ಅವೆಲ್ಲವೂ ಮಾಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾತ್ರಿ ಸಂಚಾರ ಅಪಾಯಕಾರಿ
ಪಂಪ್ವೆಲ್ ಸರ್ವಿಸ್ ರಸ್ತೆಯಲ್ಲಿ ಅಲ್ಲಲ್ಲಿ ನಿರ್ಮಾಣವಾಗಿರುವ ಹೊಂಡಗುಂಡಿಗಳಿಂದಾಗಿ ರಾತ್ರಿ ಸಂಚಾರ ಅಪಾಯಕಾರಿ. ಹೊಂಡ ಗುಂಡಿಗಳು ಗೋಚರಕ್ಕೆ ಬರದೆ ಸವಾರರಿಗೆ ಸಮಸ್ಯೆಯಾಗುತ್ತಿದೆ. ಈ ರಸ್ತೆಯಲ್ಲಿರುವ ಅಂಡರ್ಪಾಸ್ನ ಎರಡೂ ಬದಿಗಳಲ್ಲೂ ಹೊಂಡಗುಂಡಿಗಳು ನಿರ್ಮಾಣವಾಗಿವೆ. ಅಂಡರ್ ಪಾಸ್ನಿಂದ ಬರುವ ವಾಹನಗಳು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಏಕಾಏಕಿ ವಾಹನಗಳು ಮುನ್ನುಗ್ಗುವುದು ಅಪಾಯಕಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ…
240Km ಅಂತರದಲ್ಲಿ ಸೇನಾ ದಂಪತಿ ಆತ್ಮಹ*ತ್ಯೆ… ಜೊತೆಯಲ್ಲೇ ಅಂತ್ಯಸಂಸ್ಕಾರ ನಡೆಸುವಂತೆ ಪತ್ರ
Udupi: ಸಂತೆಕಟ್ಟೆ ಓವರ್ಪಾಸ್ ಕಾಮಗಾರಿ ಚುರುಕು
Kulai: ಬೃಹತ್ ಟ್ರಕ್ ಓಡಾಟದಿಂದ ರಸ್ತೆಗೆ ಹಾನಿ
Kerala:ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಅರುಣ್ ಕುಮಾರ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.