Mangaluru ಆ.8-10: ಗೋಡಂಬಿ ಸಮ್ಮೇಳನ
Team Udayavani, Aug 7, 2024, 11:41 PM IST
ಮಂಗಳೂರು: ಅಖಿಲ ಭಾರತ ಗೋಡಂಬಿ ಸಂಘ-ಎಐಸಿಎ ವತಿಯಿಂದ ಎಐಸಿಎ ಗೋಡಂಬಿ ಸಮ್ಮೇಳನ ಆ.8ರಿಂದ ಆ.10ರ ವರೆಗೆ ಬೆಂಗಳೂರು ಮಾನ್ಯತಾ ಬಿಸಿನೆಸ್ ಪಾರ್ಕ್ನಲ್ಲಿ ನಡೆಯಲಿದೆ.
ಎಐಸಿಎ, ಕ್ಯಾಶ್ಯೂ ಇನಾರ್ಮೇಶನ್ ಡಾಟ್ ಕಾಮ್ ಹಾಗೂ ಅಪೆಡಾ ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಅಪೇಡಾ ಅಧ್ಯಕ್ಷ ಅಭಿಷೇಕ್ದೇವ್ ಮುಖ್ಯ ಅತಿಥಿಯಾಗಿದ್ದು, ಆ.8ರಂದು ಸಂಜೆ ಉದ್ಘಾಟನೆ ನೆರವೇರಿಸುವರು.
ಅಪೆಡಾ ನಿರ್ದೇಶಕ ಡಾ| ತರುಣ್ ಬಜಾಜ್, ಗೋಡಂಬಿ ಹಾಗೂ ಕೊಕೊ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕಿ ಡಾ| ಫೆಮಿನಾ, ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಲಹೆಗಾರ ಡಾ| ಅಲ್ಕಾ ರಾವ್, ಭಾರತೀಯ ಬೀಜಗಳು ಹಾಗೂ ಒಣಹಣ್ಣು ಸಮಿತಿ ಅಧ್ಯಕ್ಷ ಗುಂಜನ್ ಜೈನ್, ಎಇಸಿ-ಸಿಐ ಅಧ್ಯಕ್ಷ ಅಲೆಕ್ಸ್ ಎನ್ಗುಯೆಶಿಯಾ ಅಸೌಮಾನ್ ಪಾಲ್ಗೊಳ್ಳುವರು.
ಮೂರು ದಿನಗಳ ಸಮ್ಮೇಳನದಲ್ಲಿ ಯಂತ್ರೋಪಕರಣಗಳ ಪ್ರದರ್ಶನ, ಅಲ್ಲದೆ ಪೂರೈಕೆದಾರರಿಗೆ ಬೇಕಾದ ಸೇವೆ
ಗಳ ಪ್ರದರ್ಶನ, ವಿವಿಧ ಬಗೆಯ ಗೋಡಂಬಿ ಪ್ರದರ್ಶನವೂ ನಡೆಯಲಿದೆ.
ಭಾರತೀಯ ಗೋಡಂಬಿ ಕ್ಷೇತ್ರ ಕುರಿತಂತೆ ಗೋಡಂಬಿ ಬೆಳೆ ಹೆಚ್ಚಿಸುವುದು, ತಾಂತ್ರಿಕ ಸುಧಾರಣೆ ಮತ್ತು ಗೋಡಂಬಿ ಫ್ಯಾಕ್ಟರಿಗಳನ್ನು ಸ್ಪರ್ಧಾತ್ಮಕ ಗೊಳಿಸುವುದು, ಭಾರತದಲ್ಲಿ ಗೋಡಂಬಿ ಬಳಕೆ ಕುರಿತು ಅರಿವು ಮೂಡಿಸುವ ಉದ್ದೇಶಗಳನ್ನು ಹೊಂದಿದೆ. 40ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ಮಾತನಾಡಲಿದ್ದಾರೆ. 600ರಷ್ಟು ಪ್ರತಿನಿಧಿಗಳು ಭಾರತದಿಂದ ಮತ್ತು ಐವರಿಕೋಸ್ಟ್, ಯುಎಇ, ಸಿಂಗಪುರಕ್ಕೆ ಸೇರಿದ 30 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಎಐಸಿಎ ಅಧ್ಯಕ್ಷ ರಾಹುಲ್ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!
Bajpe ಬಸ್ ನಿಲ್ದಾಣ ಕಟ್ಟಡ ಪೂರ್ಣ; 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್ ಆಫ್ ಯುಕೆ
Udupi: ಯುಜಿಡಿ ಚೇಂಬರ್ ಅವ್ಯವಸ್ಥೆಗಿಲ್ಲ ಪರಿಹಾರ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ
Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.