Mangaluru: ಬಾಲಮಂದಿರದಿಂದ ಶಾಲೆಗೆಂದು ಹೋದ ಬಾಲಕ ನಾಪತ್ತೆ
Team Udayavani, Jul 24, 2024, 12:53 AM IST
ಮಂಗಳೂರು: ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲ ಮಂದಿರದಲ್ಲಿದ್ದ 14 ವರ್ಷದ ಬಾಲಕನೋರ್ವ ಶಾಲೆಗೆಂದು ಹೋದವನು ನಾಪತ್ತೆಯಾಗಿದ್ದಾನೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಬಾಲಕನನ್ನು ಜೂ.28ರಂದು ಬೋಂದೆಲ್ನಲ್ಲಿರುವ ಬಾಲಮಂದಿರಕ್ಕೆ ಒಪ್ಪಿಸಿದ್ದರು. ಬಾಲಮಂದಿರದ ಗೃಹಪಾಲಕರು ಈತನ ವಿದ್ಯಾಭ್ಯಾಸ ಮೊಟಕು ಆಗಬಾರದೆಂಬ ಉದ್ದೇಶದಿಂದ 10ನೇ ತರಗತಿಗೆ ಸೇರ್ಪಡೆ ಮಾಡಿದ್ದರು.
ಜು.22ರಂದು ಬಾಲಕನನ್ನು ಗೃಹಪಾಲಕರು ಬಾಲಮಂದಿರದಿಂದ ಶಾಲೆಗೆ ಕಳುಹಿಸಿದ್ದರು. ಬಳಿಕ ಮುಖ್ಯೋಪಾಧ್ಯಾಯರಿಗೆ ಕರೆ ಮಾಡಿ ವಿಚಾರಿಸಿದಾಗ ಬಾಲಕ ಶಾಲೆಗೆ ಹೋಗದೆ ನಾಪತ್ತೆಯಾಗಿರುವುದು ಗೊತ್ತಾಗಿದೆ.
ಈ ಬಗ್ಗೆ ಗೃಹಪಾಲಕರು ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.