Mangaluru: ಹುಲಿ ವೇಷ ಬಣ್ಣಗಾರಿಕೆ ಹಿಂದಿದೆ ಶ್ರದ್ಧೆ, ಭಕ್ತಿ, ವಿಜ್ಞಾನ!

ವೇಷಧಾರಿ ಮೂರು ಗಂಟೆ ಕೈ ಅಗಲಿಸಿಯೇ ನಿಂತಿರಬೇಕು | ಬಾಳೆ ಎಲೆ, ಚಾಪೆಯಲ್ಲೇ ಮಲಗಬೇಕು

Team Udayavani, Oct 4, 2024, 12:34 PM IST

Mangaluru: ಹುಲಿ ವೇಷ ಬಣ್ಣಗಾರಿಕೆ ಹಿಂದಿದೆ ಶ್ರದ್ಧೆ, ಭಕ್ತಿ, ವಿಜ್ಞಾನ!

ಮಹಾನಗರ: ಪಟ್ಟೆ ಪಿಲಿ, ಚಿಟ್ಟೆ ಪಿಲಿ, ಪಚ್ಚೆ ಪಿಲಿ, ಅಪ್ಪೆ ಪಿಲಿ, ಕಪ್ಪು ಪಿಲಿ, ಬೊಲ್ದು ಪಿಲಿ ಹೀಗೆ ತರಹೇವಾರಿ ಪಿಲಿಗಳ ಲೋಕವನ್ನು ವರ್ಣರಂಜಿತಗೊಳಿಸುವ ನಿಜವಾದ ಶಕ್ತಿ ಬಣ್ಣಗಾರಿಕೆ! ಬಣ್ಣವಿದ್ದರೆ ಮಾತ್ರ ಪಿಲಿ ವೇಷಕ್ಕೆ ರೂಪ ಹಾಗೂ ಗೌರವ.

ಬಣ್ಣ ಹಾಕುವುದು ಒಂದು ಕುಶಲ ಕಲೆಗಾರಿಕೆ
50 ವರ್ಷದಿಂದ ಮಂಗಳೂರಿನಲ್ಲಿ ಹುಲಿ ವೇಷಕ್ಕೆ ಬಣ್ಣ ಹಾಕುತ್ತಿರುವ ಉಮೇಶ್‌ ಬೋಳಾರ್‌ ಅವರ ಪ್ರಕಾರ ‘ಹಿಂದೆ ಭತ್ತದ ಕೃಷಿ ಆದ ಬಳಿಕ ಪಿಲಿಪಂಜಿ ಗೊಬ್ಬು ಎಂದು ಮಾಡುತ್ತಿದ್ದರು. ಎರಡು ಮೂರು ಜನ ಮಾತ್ರ ಆಗ ಇದ್ದರು. ಆಗ ಅರಸಿನ, ರಕ್ತ ಚಂದನ ಅರೆದು ದೀಪದ ಮಸಿಗೆ ಎಣ್ಣೆ ಮಿಶ್ರಣ ಮಾಡಿ ಕೈಯಲ್ಲೇ ಗೆರೆ ಎಳೆಯುವ ಕ್ರಮ ಇತ್ತು. ನಂತರ ಅಗಸೆಕಾಯಿಯ ಬೀಜವನ್ನು ಕಲ್ಲಿನಲ್ಲಿ ಅರೆದು ಬಣ್ಣ ಹಚ್ಚಲಾಗುತ್ತಿತ್ತು. ಆವಾಗ ಬಣ್ಣ ಹಚ್ಚಲು ಕೆಲವೊಮ್ಮೆ ಒಂದು ದಿನ ಕೂಡ ಆಗುತ್ತಿತ್ತು. ಈಗ ಹುಲಿ ವೇಷಧಾರಿಗಳು ಅಧಿಕ ಹಾಗೂ ಸಮಯದ ಒತ್ತಡದ ಕಾರಣದಿಂದ ಬಣ್ಣವನ್ನು ಸ್ಪ್ರೇ ಮಾಡಲಾಗುತ್ತದೆ’ ಎನ್ನುತ್ತಾರೆ.

ದೇಹ ತಂಪಾಗಿರಬೇಕು
ಹುಲಿ ವೇಷ ಹಾಕುವವರು ದೇಹವನ್ನು ಹೆಚ್ಚು ತಂಪಾಗಿ ಇಟ್ಟಿರಬೇಕು. ದೇಹ ತಂಪಾಗದಿದ್ದರೆ ಬಣ್ಣ ಸರಿಯಾಗಿ ಅಂಟುವುದಿಲ್ಲ. ಹಲವು ದಿನ ಬಣ್ಣದಲ್ಲೇ ಇರುವುದರಿಂದ ದೇಹ ತಂಪಾಗದಿದ್ದರೆ ಚರ್ಮಕ್ಕೂ ಸಮಸ್ಯೆ ಎನ್ನುತ್ತಾರೆ ಉಮೇಶ್‌ ಬೋಳಾರ್‌.

ದೇಹಕ್ಕೆ ಒಪ್ಪುವ ಹುಲಿವೇಷ
ಕಳೆದ 35 ವರ್ಷಗಳಿಂದ ಹುಲಿವೇಷಕ್ಕೆ ಬಣ್ಣ ಹಾಕುತ್ತಿರುವ ಸುನಿಲ್‌ ಕೋಡಿಕಲ್‌ ಪ್ರಕಾರ, ಹುಲಿ ವೇಷಕ್ಕೆ ಬಣ್ಣ ಹಾಕುವುದು ಒಂದು ಸರಸ್ವತಿ ವಿದ್ಯೆ. ಶ್ರದ್ದೆಯಿಂದ ನಡೆಸುವ ಕೆಲಸ ಇದು. ಬಣ್ಣ ಹಾಕುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಹುಲಿ ವೇಷಧಾರಿಯ ಚರ್ಮಕ್ಕೆ ಸಮಸ್ಯೆ ಆಗಬಹುದು. ಮೊದಲಿಗೆ ಮೊದಲು ಹಳದಿ ಮತ್ತು ಬಿಳಿ ಬಣ್ಣ ಹಾಕಲಾಗುತ್ತದೆ. ಬಳಿಕ ಇತರ ಬಣ್ಣ. ದೇಹ ನೋಡಿಕೊಂಡು ಆತನಿಗೆ ಒಪ್ಪುವಂತಹ ಹುಲಿ ವೇಷ ಹಾಕಲಾಗುತ್ತದೆ. ದೇವರ ದಯೆ ಇದ್ದರೆ ಎಲ್ಲವೂ ಸಾಂಗವಾಗಿ ನಡೆಯುತ್ತದೆ. ಅದಕ್ಕೆ ಶುದ್ದಾಚಾರ ಬೇಕು.

ವೇಷಧಾರಿಗೆ ಸಾಲು ಸಾಲು ಸವಾಲು

  • ಬಣ್ಣ ಹಾಕುವಾಗ ವೇಷಧಾರಿ ಮೂರು ಗಂಟೆ ಕಾಲ ಎರಡು ಕೈಯನ್ನು ಅಗಲಿಸಿ ಉದ್ದದ ಕೋಲಿನ ಮೇಲೆ ಇಟ್ಟು ನಿಂತೇ ಇರಬೇಕು. ಯಾಕೆಂದರೆ, ಹಾಕಿದ ಬಣ್ಣ ಹಾಗೇ ಒಣಗಬೇಕು.
  • ಕೆಲವರ ದೇಹದಲ್ಲಿ ಪೈಂಟ್‌ ಕೆಲವೇ ಗಂಟೆಯಲ್ಲಿ ಒಣಗಿದರೆ, ಇನ್ನೂ ಕೆಲವರ ದೇಹದಲ್ಲಿ ಸುಮಾರು ತಾಸು ಕಾಯಬೇಕು.
  • ದಿನವಿಡೀ ಕುಣಿಯುವ ವೇಷಧಾರಿ ಸಂಜೆ ಮನೆಗೆ ಹೋಗುವುದಿಲ್ಲ. ಬದಲಾಗಿ, ರಂಗ್‌ಗೆ ನಿಂತ ಜಾಗದಲ್ಲಿ ಬಣ್ಣ ತೆಗೆಯದೆಯೇ ಮಲಗುತ್ತಾನೆ.
  • ವೇಷಧಾರಿ ಬಾಳೆ ಎಲೆ, ತೆಂಗಿನ ಮಡಲ್‌ ಅಥವಾ ಹಳೆಯ ಚಾಪೆಯ ಮೇಲೆ ಮಲಗುವುದು ಕ್ರಮ. ಮಲಗುವಾದ ದೇಹದ ಪೈಂಟ್‌ ಹೋಗಬಾರದು ಎಂದಿದೆ. ಕೆಲವು ಕಡೆ ಹೋದರೆ ಟಚಪ್‌ ಮಾಡಲಾಗುತ್ತದೆ.
  • ಹುಲಿ ವೇಷದ ಅಬ್ಬರ ನೋಡಲು ಬಹಳಷ್ಟು ಚಂದ. ಆದರೆ ಅದರ ಹಿಂದಿನ ಒದ್ದಾಟದ ಬಗ್ಗೆ ಅವರಿಗೆ ಮಾತ್ರ ಗೊತ್ತು.
  • ಬೆಳಗ್ಗಿನಿಂದ ಸಂಜೆಯವರೆಗೆ ಕುಣಿದು ಆಯಾಸಗೊಂಡವರಿಗೆ ರಾತ್ರಿ, ಛಳಿ, ಜ್ವರದ ಸಮಸ್ಯೆ ಇರುತ್ತದೆ. ಕೈಕಾಲು ಬಗ್ಗಿಸಲಾಗದಷ್ಟು ನೋವು.
  • ಕೆಲವರು ನಿದ್ದೆಯಿಂದ ಎದ್ದು ವಿಚಿತ್ರವಾಗಿ ನಡುಗುವುದೂ ಉಂಟು; ಹೀಗಾಗಿ ವೇಷಧಾರಿ ಕೈಗೆ ಸಣ್ಣ ನವಿಲುಗರಿ-ಲಿಂಬೆಹುಲಿ ಕಟ್ಟಲಾಗುತ್ತದೆ.

‘ಅಪ್ಪೆ ಪಿಲಿತ ಮಂಡೆ’ ಅತ್ಯಂತ ಪವಿತ್ರ
‘ಅಪ್ಪೆ ಪಿಲಿತ ಮಂಡೆ’ ಪವಿತ್ರ ಎಂದು ಹುಲಿ ವೇಷಧಾರಿಗಳು ನಂಬಿಕೊಂಡು ಬಂದಿದ್ದಾರೆ. ಅದಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತಾರೆ. ಒಂದು ವೇಳೆ ಅದಕ್ಕೆ ಸ್ವಲ್ಪ ಹಾನಿಯಾದರೆ ಅದನ್ನು ಬಳಸುವುದಿಲ್ಲ. ಮತ್ತು ಹಾನಿಯಾದ ಅಪ್ಪೆ ಪಿಲಿಯ ಮಂಡೆಯನ್ನು ಅತ್ಯಂತ ಪವಿತ್ರವಾಗಿ ತಾಸೆಯ ಶಬ್ದದೊಂದಿಗೆ ತೆಗೆದುಕೊಂಡು ಹೋಗಿ ಮಣ್ಣಿನಲ್ಲಿ ಹೂಳಲಾಗುತ್ತದೆ. ಶವಸಂಸ್ಕಾರ ಕ್ರಮದಂತೆಯೇ ಇದನ್ನು ಕೂಡ ಸಂಪ್ರದಾಯ ಪ್ರಕಾರವಾಗಿ ಮಾಡಲಾಗುತ್ತದೆ.

-ದಿನೇಶ್‌ ಇರಾ

ಟಾಪ್ ನ್ಯೂಸ್

Success Story:ಬಡತನವನ್ನೇ ಸೋಲಿಸಿದಾಕೆಯ ಯಶೋಗಾಥೆ-ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಡಾಕ್ಟರ್!

Success: ಬಡತನವನ್ನೇ ಸೋಲಿಸಿದಾಕೆಯ ಯಶೋಗಾಥೆ-ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಡಾಕ್ಟರ್!

Team India; Morkel, the bowling coach, is upset with Hardik Pandya

Team India; ಹಾರ್ದಿಕ್ ಪಾಂಡ್ಯ ಬಗ್ಗೆ ಅಸಮಾಧಾನಗೊಂಡ ಬೌಲಿಂಗ್‌ ಕೋಚ್‌ ಮಾರ್ಕೆಲ್‌

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಚಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Koppala: ಆದಷ್ಟು ಬೇಗ ಆರ್ಥಿಕ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

vaibhavi shandilya

Vaibhavi Shandilya: ಮಾರ್ಟಿನ್‌ ಪ್ರೀತಿ ಪಾತ್ರಳು ನಾನು…; ವೈಭವಿ ಕಣ್ತುಂಬ ನಿರೀಕ್ಷೆ

Delhi: ಬೃಹತ್ ಡ್ರಗ್ಸ್ ಜಾಲ-17 ವರ್ಷ ಬ್ರಿಟನ್‌ ನಲ್ಲಿದ್ದ ವ್ಯಕ್ತಿ ಪಂಜಾಬ್‌ ನಲ್ಲಿ ಬಂಧನ!

Delhi: ಬೃಹತ್ ಡ್ರಗ್ಸ್ ಜಾಲ-17 ವರ್ಷ ಬ್ರಿಟನ್‌ ನಲ್ಲಿದ್ದ ವ್ಯಕ್ತಿ ಪಂಜಾಬ್‌ ನಲ್ಲಿ ಬಂಧನ!

FIR: ಚನ್ನಪಟ್ಟಣ ಉಪಚುನಾವಣೆ ಖರ್ಚಿಗೆ ‘ಎಚ್‌ ಡಿಕೆ’ 50 ಕೋಟಿ ರೂ ಬೇಡಿಕೆ; ಉದ್ಯಮಿ ದೂರು

FIR: ಚನ್ನಪಟ್ಟಣ ಉಪಚುನಾವಣೆ ಖರ್ಚಿಗೆ ‘ಎಚ್‌ ಡಿಕೆ’ 50 ಕೋಟಿ ರೂ ಬೇಡಿಕೆ; ಉದ್ಯಮಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Court: ವಾಹನ ಅಪಘಾತ: ಮೃತ ವ್ಯಕ್ತಿಯ ಆಶ್ರಿತರಿಗೆ 1.35 ಕೋ.ರೂ. ಪರಿಹಾರ: ನ್ಯಾಯಾಲಯ ಆದೇಶ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

Mangaluru: ಮತದಾರರ ಒಲವು ನನ್ನ ಪರ: ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ

BJP: ನನ್ನಂಥವನಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಋಣಿ: ಕಿಶೋರ್‌ ಕುಮಾರ್‌

BJP: ನನ್ನಂಥವನಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಋಣಿ: ಕಿಶೋರ್‌ ಕುಮಾರ್‌

ಡಾ| ಸಂಧ್ಯಾ ಶೆಣೈಗೆ ಕಲ್ಪನಾ ಚಾವ್ಲಾ ಯುವವಿಜ್ಞಾನಿ ಪ್ರಶಸ್ತಿ

State Govt: ಡಾ| ಸಂಧ್ಯಾ ಶೆಣೈಗೆ ಕಲ್ಪನಾ ಚಾವ್ಲಾ ಯುವವಿಜ್ಞಾನಿ ಪ್ರಶಸ್ತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಉಡುಪಿ: ಮನೆಗೆ ಹೊಸತನ ತರುವ ಕದಿರು; ನವರಾತ್ರಿಯ ವೇಳೆ ನಡೆಯುವ ವಿಶಿಷ್ಟ ಆಚರಣೆ

Udupi: ಮನೆಗೆ ಹೊಸತನ ತರುವ ಕದಿರು; ನವರಾತ್ರಿಯ ವೇಳೆ ನಡೆಯುವ ವಿಶಿಷ್ಟ ಆಚರಣೆ

Success Story:ಬಡತನವನ್ನೇ ಸೋಲಿಸಿದಾಕೆಯ ಯಶೋಗಾಥೆ-ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಡಾಕ್ಟರ್!

Success: ಬಡತನವನ್ನೇ ಸೋಲಿಸಿದಾಕೆಯ ಯಶೋಗಾಥೆ-ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಡಾಕ್ಟರ್!

Team India; Morkel, the bowling coach, is upset with Hardik Pandya

Team India; ಹಾರ್ದಿಕ್ ಪಾಂಡ್ಯ ಬಗ್ಗೆ ಅಸಮಾಧಾನಗೊಂಡ ಬೌಲಿಂಗ್‌ ಕೋಚ್‌ ಮಾರ್ಕೆಲ್‌

India Market: ಚೀನ ಬೆಳ್ಳುಳ್ಳಿ ಮೇಲಿನ ನಿಷೇಧ ಕಟ್ಟುನಿಟ್ಟಾಗಿ ಕಾರ್ಯಗತಗೊಳ್ಳಲಿ

India Market: ಚೀನ ಬೆಳ್ಳುಳ್ಳಿ ಮೇಲಿನ ನಿಷೇಧ ಕಟ್ಟುನಿಟ್ಟಾಗಿ ಕಾರ್ಯಗತಗೊಳ್ಳಲಿ

Patiala: ಐತಿಹಾಸಿಕ ದೇಗುಲಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಶ್ರೀ ಕಾಳಿ ದೇವಿ ದೇಗುಲ

Patiala: ಐತಿಹಾಸಿಕ ದೇಗುಲಕ್ಕೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಶ್ರೀ ಕಾಳಿ ದೇವಿ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.