Mangaluru: ಪಾರಂಪರಿಕ ಕಟ್ಟಡ ಫಲಕಗಳಿಗೆ ಒದಗಲಿ ಶುಭಗಳಿಗೆ!

ಮಾಹಿತಿ ಫ‌ಲಕಗಳಲ್ಲಿ ವಿವರಗಳು ಮಾಯ; ಕೆಲವೆಡೆ 10ವರ್ಷಗಳ ಹಿಂದೆ ಹಾಕಿದ ಫ‌ಲಕಗಳೇ ಮುರಿದುಬಿದ್ದಿವೆ!

Team Udayavani, Oct 16, 2024, 4:34 PM IST

11(1)

ಹಳೇ ಡಿಸಿ ಕಚೇರಿ

ಮಹಾನಗರ: ನಗರದ 40ರಷ್ಟು ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ, ಪ್ರವಾಸಿಗರು, ಸ್ಥಳೀಯರೆಲ್ಲರಿಗೂ ಅನುಕೂಲವಾಗುವಂತೆ ಹಾಕಲಾಗಿದ್ದ ಮಾಹಿತಿ ಫಲಕಗಳು ಈಗ ಮಸುಕಾಗಿವೆ, ಹಲವು ಫಲಕಗಳು ತುಂಡಾಗಿ ಧರಾಶಾಯಿಯಾಗಿವೆ.

2015ರಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನ ಪ್ರದೇಶದ ವ್ಯಾಪ್ತಿಯಲ್ಲಿರುವ 100 ವರ್ಷಕ್ಕೂ ಹಿಂದಿನ ಹಳೆಯ ಹಾಗೂ ಸಾಂಸ್ಕೃತಿಕ, ಸಾಮಾಜಿಕ, ಐತಿಹಾಸಿಕ ಮಹತ್ವ ಹೊಂದಿರುವ ಕಟ್ಟಡಗಳನ್ನು ಗುರುತಿಸುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಅಂತಹ ಪ್ರಮುಖ ಸ್ಥಳಗಳಲ್ಲಿ ಮಾಹಿತಿ ಫಲಕಗಳನ್ನು ಅನಾವರಣಗೊಳಿಸಲಾಗಿತ್ತು.

ವಿ.ವಿ. ಕಾಲೇಜ್‌ ಬಳಿಯ ಫಲಕ ಹೀಗಿತ್ತು

ವಿ.ವಿ. ಕಾಲೇಜ್‌ ಫಲಕ ಈಗ ಹೀಗಿದೆ

ಕಟ್ಟಡದ ಹೆಸರು, ಅದರ ಹಿನ್ನೆಲೆ, ಐತಿಹ್ಯ, ಮಹತ್ವ, ಅದಕ್ಕೆ ಸಂಬಂಧಿಸಿದವರ ವಿವರಗಳೆಲ್ಲವನ್ನೂ ಈ ಪುಟ್ಟ ಕಾಂಕ್ರೀಟ್‌ ಫಲಕದಲ್ಲಿ ಮುದ್ರಿಸಲಾಗಿತ್ತು. ಆದರೆ 10 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಅವುಗಳೆಲ್ಲವೂ ಮಸುಕಾಗಿ, ಯಾವುದೇ ವಿವರಗಳೂ ಓದುವುದಕ್ಕೆ ಅಸಾಧ್ಯ ಎಂಬಂತಹ ಸ್ಥಿತಿ ತಲಪಿವೆ.

ಬಾಸೆಲ್‌ ಮಿಷನ್‌ ಶಾಲೆ

ಮಂಗಳೂರು ವಿಶ್ವವಿದ್ಯಾನಿಯ ಕಾಲೇಜು, ಹಳೆ ಜಿಲ್ಲಾಧಿಕಾರಿ ಕಚೇರಿ, ವೆನ್ಲಾಕ್‌ ಆಸ್ಪತ್ರೆ, ಲೇಡಿಗೋಷನ್‌ ಆಸ್ಪತ್ರೆ, ಸುಲ್ತಾನ್‌ ಬತ್ತೇರಿ, ಜಿಲ್ಲಾ ಕಲೆಕ್ಟರ್‌ ನಿವಾಸ, ಸೀಮಂತಿ ಬಾಯಿ ಸ್ಮಾರಕ ವಸ್ತು ಸಂಗ್ರಹಾಲಯ, ಬಿಇಎಂ ಶಾಲೆ, ಸುಲ್ತಾನ್‌ಬತ್ತೇರಿ, ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನ, ಈದ್ಗಾ ಮಸೀದಿ, ಸಂತ ಅಲೋಶಿಯಸ್‌ ಚಾಪೆಲ್‌, ರೊಸಾರಿಯೊ ಚರ್ಚ್‌ ಮುಂತಾದ ಇತಿಹಾಸ ಪ್ರಸಿದ್ಧ ಹಲವು ಕಟ್ಟಡಗಳ ಮುಂಭಾಗ ಅಳವಡಿಸಲಾಗಿತ್ತು.

ಸೈಂಟ್‌ ಪಾಲ್‌ ಚರ್ಚ್‌

40 ಪಾರಂಪರಿಕ ಕಟ್ಟಡ
1865ರಲ್ಲಿ ಪ್ರಾರಂಭ ಗೊಂಡ ಅತಿ ಹಳೆಯ ಕಾಲೇಜುಗಳಲ್ಲೊಂದಾದ ಮಂಗಳೂರು ವಿ.ವಿ. ಕಾಲೇಜು ಪಾರಂಪರಿಕ ಕಟ್ಟಡ. ಅದರ ಮುಂಭಾಗವೇ ಆವರಣಗೋಡೆಗೆ ತಾಗಿದಂತೆ ಹೋಗುವವರಿಗೆ, ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಫಲಕವನ್ನು ಅನಾವರಣಗೊಳಿಸುವ ಮೂಲಕ 2015ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಈ ಪಾರಂಪರಿಕ ಕಟ್ಟಡಗಳಿಗೆ ಫಲಕ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಸುಮಾರು 40 ಪಾರಂಪರಿಕ ಕಟ್ಟಡ/ಸ್ಥಳ/ಸ್ಮಾರಕಗಳನ್ನು ಗುರುತಿಸಲಾಗಿತ್ತು.

ಹಿಂದೆ ಗಣಪತಿ ಹೈಸ್ಕೂಲ್‌ನ ಫಲಕ ಹೀಗಿತ್ತು

ಗಣಪತಿ ಹೈಸ್ಕೂಲ್‌ ಫಲಕ ಈಗ ಹೀಗಿದೆ

ನಶಿಸಿರುವ ಫಲಕ
ಸದ್ಯ 9 ವರ್ಷಗಳೇ ಆಗಿರುವುದರಿಂದ ಈ ಫಲಕಗಳೆಲ್ಲವೂ ಪ್ರಯೋಜನರಹಿತವಾಗಿ ನಿಂತುಕೊಂಡಿವೆ. ಮಂಗಳೂರು ವಿ.ವಿ. ಕಾಲೇಜು, ಹಳೆ ಜಿಲ್ಲಾಧಿಕಾರಿ ಕಚೇರಿ, ರಥಬೀದಿಯ ಬಾಸೆಲ್‌ ಮಿಶನ್‌ ಶಾಲೆ, ಕದ್ರಿ ದೇವಸ್ಥಾನ ಸಹಿತ ಹಲವೆಡೆಗಳಲ್ಲಿ ಫಲಕದಲ್ಲಿ ಮುದ್ರಿಸಲಾಗಿದ್ದ ವಿವರಗಳೆಲ್ಲವೂ ಅಳಿಸಿ ಹೋಗಿ ಫಲಕ ಮಾತ್ರ ಇದೆ. ಇನ್ನು ಗಣಪತಿ ಹೈಸ್ಕೂಲ್‌ ಬಳಿಯ ಫಲಕ ಸ್ತಂಭಗಳಿಂದ ಕಿತ್ತು ಬಂದು ಬದಿಯಲ್ಲಿ ಬಿದ್ದುಕೊಂಡಿದೆ. 1842ರಲ್ಲಿ ನಿರ್ಮಾಣಗೊಂಡಿರುವ ಹ್ಯಾಮಿಲ್ಟನ್‌ ವೃತ್ತದ ಬಳಿಯ ಐತಿಹಾಸಿಕ ಕ್ಲಾಕ್‌ ಟವರ್‌ ಇದ್ದಂತಹ ಸೈಂಟ್‌ ಪಾಲ್‌ ಚರ್ಚಿನ ಮಾಹಿತಿ ಫಲಕ ಬಹುತೇಕ ಕಿತ್ತು ಹೋಗಿದೆ!

-ವೇಣು ವಿನೋದ್‌ ಕೆ.ಎಸ್‌.

ಚಿತ್ರ: ಸತೀಶ್‌ ಇರಾ

ಟಾಪ್ ನ್ಯೂಸ್

14

BBK11: ಗಲಾಟೆ ಭರದಲ್ಲಿ ಮಂಜುಗೆ ಕಿಸ್‌ ಮಾಡಿದ್ರಾ ಜಗದೀಶ್?‌ ಏನಿದು ವೈರಲ್‌ ವಿಡಿಯೋ?

Cavery-Water

Drinking Water: ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್‌ ಸಿದ್ಧ: ಡಿಸಿಎಂ ಶಿವಕುಮಾರ್‌

13

Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?

Extortion Case: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಶರ್ಮಾ ಬಂಧನ

Extortion Case: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಶರ್ಮಾ ಬಂಧನ

10-udupi

Udupi: ಅಕ್ರಮ ಪಟಾಕಿ ದಾಸ್ತಾನು; ಪೊಲೀಸ್‌ ವಶಕ್ಕೆ

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Nigeria: ತೈಲ ಟ್ಯಾಂಕರ್‌ ಸ್ಫೋಟ-ನೂರು ಮಂದಿ ಸಜೀವ ದಹನ, 50 ಜನರಿಗೆ ಗಾಯ

Nigeria: ತೈಲ ಟ್ಯಾಂಕರ್‌ ಸ್ಫೋಟ-ನೂರು ಮಂದಿ ಸಜೀವ ದಹನ, 50 ಜನರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Mangaluru: ಬೀದಿ ಬದಿ ವ್ಯಾಪಾರಿ ವಲಯ: ಶುರುವಾಗದ ವ್ಯಾಪಾರ!

8

Hampankatta: ಕೆ.ಎಸ್‌.ರಾವ್‌ ರಸ್ತೆ; ಅಪಾಯಕಾರಿ ಕೇಬಲ್‌ ಛೇಂಬರ್‌

7

KSRTC ದಸರಾ ಪ್ಯಾಕೇಜ್‌ ಯಶಸ್ವಿ; 6,010 ಪ್ರವಾಸಿಗರು ಭಾಗಿ, ಕೊಲ್ಲೂರಿಗೆ ಭರ್ಜರಿ ಬೇಡಿಕೆ

6

Kaikamba: ಉಳಾಯಿಬೆಟ್ಟು ಸೇತುವೆಯಲ್ಲಿ ಬಸ್‌ ನಿಷೇಧ; ಟಿಪ್ಪರ್‌ಗಿಲ್ಲ ತಡೆ!

5

Mangaluru: ಮಹಾಕಾಳಿಪಡ್ಪು ರೈಲ್ವೇ ಕೆಳಸೇತುವೆ ಕಾಮಗಾರಿಗೆ ಗ್ರಹಣ!

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

14

BBK11: ಗಲಾಟೆ ಭರದಲ್ಲಿ ಮಂಜುಗೆ ಕಿಸ್‌ ಮಾಡಿದ್ರಾ ಜಗದೀಶ್?‌ ಏನಿದು ವೈರಲ್‌ ವಿಡಿಯೋ?

Cavery-Water

Drinking Water: ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್‌ ಸಿದ್ಧ: ಡಿಸಿಎಂ ಶಿವಕುಮಾರ್‌

13

Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?

Extortion Case: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಶರ್ಮಾ ಬಂಧನ

Extortion Case: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಶರ್ಮಾ ಬಂಧನ

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.