Mangaluru: ಹುಲಿಗಳ ಅಬ್ಬರಕ್ಕೆ ತಾಸೆ ಪೆಟ್ಟೇ ಆಧಾರ!

ಹುಲಿಯನ್ನು ಕುಣಿಸುವ ಜತೆಗೆ ಜನರನ್ನೂ ನಲಿಸುವ ತಾಸೆಯವರು | ಹಿಂದೆ ತಂಡಕ್ಕೆ 2 ತಾಸೆ ಸಾಕಿತ್ತು, ಈಗ 8-10 ಇದ್ದರೂ ಸಾಕಾಗುವುದಿಲ್ಲ

Team Udayavani, Oct 12, 2024, 12:30 PM IST

13

ಹುಲಿಗಳನ್ನು ಕುಣಿಸುವ ತಾಸೆಯವರು.

ಮಹಾನಗರ: ದೈವಾ ರಾಧನೆಯಲ್ಲಿ ಬಳಸುವ ‘ತಾಸೆ’ಗೆ ಕರಾವಳಿಯಲ್ಲಿ ಅತ್ಯಂತ ಪವಿತ್ರ ಸ್ಥಾನ. ಬಹಳಷ್ಟು ಶ್ರದ್ಧೆ ಹಾಗೂ ಅಚ್ಚುಕಟ್ಟಾಗಿ ತಾಸೆ ಬಡಿಯುವ ಕಾರ್ಯದಲ್ಲಿ ನಿರತ ರಾದ ನೂರಾರು ಮಂದಿ ಕರಾವಳಿ ಭಾಗದಲ್ಲಿದ್ದಾರೆ. ವಿಶೇಷವೆಂದರೆ, ಇವರ ಪೈಕಿ ಹಲವಾರು ಜನರು ಹುಲಿ ವೇಷದ ತಂಡಗಳಿಗೆ ಆಧಾರ ಶಕ್ತಿ!

ಹುಲಿ ವೇಷಧಾರಿ ಅಬ್ಬರಿಸಿ ಕುಣಿದಾಡ ಬೇಕಾದರೆ ‘ತಾಸೆ’ಯ ಶಬ್ದವೇ ಆಧಾರ. ತಾಸೆಯ ಪೆಟ್ಟಿನಿಂದ ಹೊರಬರುವ ಶಬ್ದದ ಸ್ವರ ಮತ್ತು ರಾಗಬದ್ಧವಾಗಿದ್ದರಷ್ಟೇ ಹುಲಿ ವೇಷಧಾರಿಗೆ ಅಬ್ಬರದ ಕುಣಿತ ಸಾಧ್ಯವಾಗುವುದು, ಹೀಗಾಗಿ ತಾಸೆಯ ಶಬ್ದವಿಲ್ಲದಿದ್ದರೆ ಹುಲಿ ವೇಷ ಪೂರ್ಣತ್ವ ಕಂಡುಕೊಳ್ಳುವುದಿಲ್ಲ. ಹುಲಿ ವೇಷಧಾರಿಗೆ ಮಾತ್ರವಲ್ಲ, ನೋಡುಗರ ಮನದಲ್ಲೂ ರೋಮಾಂಚನ ಮೂಡಲು, ನಿಂತಲ್ಲೇ ಕಾಲು ಕುಣಿಯಲು ತಾಸೆಯೇ ಬೇಕು!

ಹಿಂದೆ ಒಂದು ಹುಲಿ ವೇಷದ ತಂಡಕ್ಕೆ ಎರಡು ತಾಸೆ, ಒಂದು ಡೋಲು ಮಾತ್ರ ಬೇಕಾಗುತ್ತಿತ್ತು. ಆದರೆ, ಈಗ ಒಂದು ತಂಡದಲ್ಲಿ 8-10 ತಾಸೆ ಬಳಕೆಯಲ್ಲಿದೆ. ಮೂರು ಡೋಲು, ವಾದ್ಯದವರು ಬೇಕಾಗುತ್ತಾರೆ. ಹುಲಿ ವೇಷದ ತಂಡದ ಡಿಮ್ಯಾಂಡ್‌ ಮೇಲೆ ಈ ಸಿದ್ಧತೆ ಆಗುತ್ತದೆ. ಸ್ಪರ್ಧೆಗೆ ಹೋಗುವ ಹುಲಿ ವೇಷದ ತಂಡಕ್ಕೆ ತಾಸೆಯವರ ಜತೆಗೆ ತರಬೇತಿ ಕೂಡ ಇರುತ್ತದೆ. ತಾಸೆ ಬಡಿಯಲು ಮೊದಲು ನಾಗರ ಬೆತ್ತದ ಕೋಲು ಬಳಕೆಯಲ್ಲಿತ್ತು. ಈಗ ಫೈಬರ್‌ ಕೋಲು.

ವಿಶೇಷವೆಂದರೆ ದ.ಕ. ವಾದ್ಯ ಕಲಾವಿದರ ಸಂಘದ ವತಿಯಿಂದ ಕಳೆದ ವರ್ಷ ನವರಾತ್ರಿಗೆ 2 ದಿನ ಪದವಿನಂಗಡಿ ಸಮೀಪ ಬಾಂದೊಟ್ಟುವಿನಲ್ಲಿ ಹುಲಿವೇಷ ಕುಣಿತ ನಡೆದಿತ್ತು.

ತಾಸೆಗೆ ಬೇರೆ ಬೇರೆ ಸ್ವರ ಇರುತ್ತದೆ
ತಾಸೆ ಬಡಿಯುವುದು ಮನೆಯಲ್ಲಿ ಅಭ್ಯಾಸ ಮಾಡಿ ಕಲಿಯುವ ಪಾಠ. ಇದಕ್ಕೆ ಕೈ ಚಳಕ ಹಾಗೂ ಯುಕ್ತಿಯೇ ಆಧಾರ. ಕಳೆದ 40 ವರ್ಷದಿಂದ ತಾಸೆ ಬಡಿಯುವ ಸೇವೆಯಲ್ಲಿರುವ ರಮೇಶ್‌ ಮಿತ್ತನಡ್ಕ ಅವರ ಪ್ರಕಾರ, ಹುಲಿ ವೇಷ ಕುಣಿತಕ್ಕೆ ತಾಸೆಯ ಸದ್ದು ಬಹುಮುಖ್ಯ. ಹುಲಿ ವೇಷದ ಸಂದರ್ಭ ಹಿಂದೆ ಬಡಿಯುವ ಕ್ರಮ ಮತ್ತು ಈಗಿನ ಕ್ರಮದಲ್ಲಿ ಬದಲಾವಣೆ ಇದೆ.

ಹುಲಿ ಕುಣಿತಕ್ಕೆ ತಾಸೆಯ ಪೆಟ್ಟು ಬೇರೆ ಬೇರೆ ರೀತಿಯದ್ದಿದೆ. ಹುಲಿ ವೇಷ ಹೊರಡುವಾಗ, ಕುಣಿಯುವಾಗ, ಮಂಡೆ ಹಾಕುವಾಗ, ತೆಗೆಯುವಾಗ, ಹೊರಡುವಾಗ ಹೀಗೆ ವಿವಿಧ ಸಂದರ್ಭಕ್ಕೆ ಅನುಗುಣವಾಗಿ ಪ್ರತ್ಯೇಕ ತಾಸೆಯ ಸ್ವರಗಳಿರುತ್ತವೆ ಎನ್ನುತ್ತಾರೆ ರಮೇಶ್‌ ಮಿತ್ತನಡ್ಕ.

ಹುಲಿ ಕುಣಿದಷ್ಟೂ ಖುಷಿ
ಹುಲಿ ವೇಷಧಾರಿ ಎಷ್ಟು ಆಸಕ್ತಿ ಹಾಗೂ ಶ್ರಮವಹಿಸಿ ಕುಣಿಯುತ್ತಾನೆಯೋ ಅಷ್ಟೇ ಆಸಕ್ತಿ ಶ್ರಮದಿಂದ ತಾಸೆಯವರು ಸಹಕಾರ ನೀಡುತ್ತಾರೆ. ಹುಲಿ ವೇಷ ಹಾಕಿದವರು ಉತ್ಸಾಹದಿಂದಿದ್ದರೆ ಆ ತಂಡವು ಹೆಚ್ಚು ಉತ್ಸಾಹದಲ್ಲಿರುತ್ತದೆ ಎನ್ನುತ್ತಾರೆ ಹುಲಿ ವೇಷದ ಐದಾರು ತಂಡಕ್ಕೆ ಕಳೆದ 10 ವರ್ಷದಿಂದ ತಾಸೆಯ ಕೆಲಸ ಮಾಡುವ ಪೃಥ್ವಿರಾಜ್‌ ಕಂಕನಾಡಿ.

ಹುಲಿಗಳಿಗೆ ಪ್ರತ್ಯೇಕ ಸ್ಟೆಪ್‌ ಇದೆ
1980ರಿಂದ ತಾಸೆ ಕೆಲಸದಲ್ಲಿರುವ ಬಾಲಕೃಷ್ಣ ಮುಲ್ಲಕಾಡು ಅವರ ಪ್ರಕಾರ, “ಹಿಂದೆ ಹುಲಿ ವೇಷದ ಕುಣಿತ ವ್ಯಾಯಾಮ ಶಾಲೆಯ ತಾಲೀಮನ್ನು ಒಳಗೊಂಡಿತ್ತು. ಹುಲಿ ವೇಷಧಾರಿಯ ಕಾಲಿನ ಚಲನವಲನ ನೋಡಿ ಅದರಂತೆ ತಾಸೆಯಲ್ಲಿ ನಾವು ಕೈಚಳಕ ಮಾಡುತ್ತಿದ್ದೆವು. ಆಗ ಅದೊಂದು ಶಿಸ್ತು. ಆದರೆ, ಈಗ ಹುಲಿ ಕುಣಿತಕ್ಕೆ ಪ್ರತ್ಯೇಕ ಸ್ಟೆಪ್‌ ಜಾರಿಗೆ ಬಂದಿದೆ. 10ಕ್ಕೂ ಅಧಿಕ ಸ್ಟೆಪ್‌ ಹಾಕುವವರು ಇದ್ದಾರೆ. ನಾವೆಲ್ಲ ಕಷ್ಟಪಟ್ಟು ತಾಸೆ ಕಲಿತವರು. ಈಗ ಅದರ ಬಗ್ಗೆ ಏನೂ ತಿಳಿಯದ ಮಂದಿ ಕಮೆಂಟ್‌ ಮಾಡುವುದು ಬೇಸರ ತರಿಸುತ್ತದೆ” ಎನ್ನುತ್ತಾರೆ ಬಾಲಕೃಷ್ಣ.

ಸಣ್ಣ ಗಾತ್ರದ ಚಿಮಿಣಿ ತಾಸೆ!
ಹಿಂದೆ ಚರ್ಮದ ತಾಸೆಯನ್ನೇ ಬಳಕೆ ಮಾಡುತ್ತಿದ್ದೆವು. ಚರ್ಮ ತಂದು ಅದನ್ನು ತಾಸೆಯ ಸ್ವರೂಪಕ್ಕೆ ತರಲು 5ರಿಂದ 8 ದಿನ ಬೇಕು. ಆದರೆ, ಈಗ ಅಷ್ಟು ಸಮಯ ಇಲ್ಲ. ಅದಕ್ಕಾಗಿ ಫೈಬರ್‌ ತಾಸೆ ಬಂದಿದೆ. ಇದನ್ನು ಸಿದ್ದಪಡಿಸಲು 2 ದಿನ ಸಾಕು. ಮೊದಲು 12 ಇಂಚಿನವರೆಗಿನ ತಾಸೆ ಇತ್ತು. ಈಗ ಸಣ್ಣ ಆಗಿ 8 ಇಂಚಿನ ‘ಚಿಮಿಣಿ ತಾಸೆ’ಯೂ ಬಂದಿದೆ. ಹಿಂದೆ ತಾಸೆಯ ಶಬ್ದ 1 ಮೈಲ್‌ ದೂರದವರೆಗೆ ಕೇಳುತ್ತಿತ್ತು. ಆದರೆ ಈಗಿನ ಶಬ್ದ ಹುಲಿ ವೇಷ ಕುಣಿಯುವ ವ್ಯಾಪ್ತಿಗೆ ಮಾತ್ರ ಕೇಳುತ್ತದೆ ಎನ್ನುತ್ತಾರೆ ರಮೇಶ್‌ ಮಿತ್ತನಡ್ಕ.

ದಿನೇಶ್‌ ಇರಾ

ಟಾಪ್ ನ್ಯೂಸ್

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

1

2025ಕ್ಕೆ ಬಾಲಿವುಡ್‌ಗೆ ಸೀಕ್ವೆಲ್‌ಗಳೇ ಜೀವಾಳ.. ಇಲ್ಲಿದೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

2

Tragic: ಕಾಮಗಾರಿ ವೇಳೆ ಗೋಡೆ ಕುಸಿತ; ಮಣ್ಣಿನಡಿ ಸಿಲುಕಿ 7 ಮಂದಿ ಕಾರ್ಮಿಕರು ಜೀವಂತ ಸಮಾಧಿ

Hubli: BK Hariprasad licked the feet of fake Gandhis: Pralhad Joshi

Hubli: ನಕಲಿ ಗಾಂಧಿಗಳ ಪಾದ ನೆಕ್ಕಿದವರು ಬಿ.ಕೆ ಹರಿಪ್ರಸಾದ್: ಪ್ರಲ್ಹಾದ ಜೋಶಿ ತಿರುಗೇಟು

Life: ಇತರರನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನವೇಕೆ?

Life: ಇತರರನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನವೇಕೆ?

12-crime

Hagaribommanahalli: ಅನೈತಿಕ ಸಂಬಂಧ: ಯುವಕನ ಬರ್ಬರ ಕೊಲೆ; ಆರೋಪಿ ಪೊಲೀಸರಿಗೆ ಶರಣು

Nature: ಸಮತೋಲಿತ ಅಭಿವೃದ್ಧಿಯೇ ಪ್ರಕೃತಿ ಉಳಿವಿಗೆ ಮುನ್ನುಡಿ

Nature: ಸಮತೋಲಿತ ಅಭಿವೃದ್ಧಿಯೇ ಪ್ರಕೃತಿ ಉಳಿವಿಗೆ ಮುನ್ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Punjalkatte; ಸರಕಾರಿ ಶಾಲೆ ಉಳಿಸಲು ನವರಾತ್ರಿ ವೇಷ!

21

Kuluru: ಹೆಚ್ಚುತ್ತಿರುವ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹ; ಸಿಸಿಟಿವಿಗೂ ಬೇಡಿಕೆ

20

Mangaluru ಜಂಕ್ಷನ್‌ ರೈಲು ನಿಲ್ದಾಣ: ಸಂಪರ್ಕ ರಸ್ತೆ ಅಭಿವೃದ್ಧಿ

9

Mangaluru: ಜರ್ಮನಿ ಪಾರ್ಲಿಮೆಂಟ್‌ ಪುಸ್ತಕದಲ್ಲಿ ಸ್ಪೀಕರ್‌ ಖಾದರ್‌ ಸಹಿ

5

Mangaluru: ಅ.15: ಬಂಟ್ವಾಳ ಬಿಜೆಪಿ ಸಮಾವೇಶಕ್ಕೆ ವಿಜಯೇಂದ್ರ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

1-aaa

Udupi;ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ ʼನಿʼ-ಶತಾಭಿವಂದನಂ

1

2025ಕ್ಕೆ ಬಾಲಿವುಡ್‌ಗೆ ಸೀಕ್ವೆಲ್‌ಗಳೇ ಜೀವಾಳ.. ಇಲ್ಲಿದೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

2

Tragic: ಕಾಮಗಾರಿ ವೇಳೆ ಗೋಡೆ ಕುಸಿತ; ಮಣ್ಣಿನಡಿ ಸಿಲುಕಿ 7 ಮಂದಿ ಕಾರ್ಮಿಕರು ಜೀವಂತ ಸಮಾಧಿ

Hubli: BK Hariprasad licked the feet of fake Gandhis: Pralhad Joshi

Hubli: ನಕಲಿ ಗಾಂಧಿಗಳ ಪಾದ ನೆಕ್ಕಿದವರು ಬಿ.ಕೆ ಹರಿಪ್ರಸಾದ್: ಪ್ರಲ್ಹಾದ ಜೋಶಿ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.