

Team Udayavani, Jan 30, 2025, 2:39 PM IST
ಮಹಾನಗರ: ಸ್ಟೇಟ್ಬ್ಯಾಂಕ್ನ ಬೀದಿಬದಿ ವ್ಯಾಪಾರ ವಲಯಕ್ಕೆ ಸ್ಥಳಾಂತರಗೊಳ್ಳಲು ವ್ಯಾಪಾರಿಗಳಿಗೆ ಪಾಲಿಕೆ ಗುರುವಾರ ಕೊನೆಯ ಅವಕಾಶ ನೀಡಿದೆ. ಸ್ಥಳಾಂತರಕ್ಕೆ ನಿರಾಕರಿಸುವ ವ್ಯಾಪಾರಿಗಳ ವಿರುದ್ಧ ಅಂತಿಮ ಎಚ್ಚರಿಕೆ ನೀಡಿರುವ ಪಾಲಿಕೆ ಗುರುತಿನ ಚೀಟಿಯನ್ನು ಶಾಶ್ವತವಾಗಿ ರದ್ದುಗೊಳಿಸಲು ಮುಂದಾಗಿದೆ.
ಈಗಾಗಲೇ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಪಾಲಿಕೆ ನೋಟಿಸ್ ನೀಡಿದೆ. ಅಂತಿಮ ಗಡುವಿನ ಬಗ್ಗೆ ನೋಟಿಸ್ನಲ್ಲಿ ಉಲ್ಲೇಖೀಸಲಾಗಿದೆ. ಅದನ್ನು ಹೊರತಾಗಿಯೂ ವಲಯಕ್ಕೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕಿದರೆ ಕ್ರಮ ಅನಿವಾರ್ಯವೆಂದು ಪಾಲಿಕೆ ತಿಳಿಸಿದೆ. ಜ. 30ರೊಳಗೆ ಸ್ಥಳಾಂತರಗೊಳ್ಳದ ವ್ಯಾಪಾರಿಗಳ ಗುರುತಿನ ಚೀಟಿ ಶಾಶ್ವತವಾಗಿ ವಜಾಗೊಳ್ಳಲಿದೆ. ಆ ಮೂಲಕ ಕೆಲವು ತಿಂಗಳುಗಳಿಂದ ಇದ್ದ ಮುಸುಕಿನ ಗುದ್ದಾಟಕ್ಕೆ ಪೂರ್ಣ ವಿರಾಮ ಹಾಕಲು ಪಾಲಿಕೆ ನಿರ್ಣಯಿಸಿದೆ.
ಯಾವುದೇ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ
ವಲಯದಲ್ಲಿ 143 ಸ್ಟಾಲ್ಗಳನ್ನು ನಿರ್ಮಿ ಸಲಾಗಿದೆ. 93 ಮಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಕೆಲವೇ ಕೆಲವು ವ್ಯಾಪಾರಿಗಳು ವಲಯಕ್ಕೆ ಸ್ಥಳಾಂತರಗೊಂಡಿದ್ದಾರೆ. ಉಳಿದವರು ಪ್ರಸ್ತುತ ಎಲ್ಲೆಂದರಲ್ಲಿ ವ್ಯಾಪಾರ ನಡೆಸುತ್ತಿದ್ದು, ಅವರನ್ನು ಮನವೊಲಿಕೆ ಮಾಡಲಾಗಿದೆ. ಮುಂದೆ ಸ್ಥಳಾಂತರಕ್ಕೆ ಹಿಂದೇಟು ಹಾಕಿದ್ದಲ್ಲಿ ಗುರುತಿನ ಚೀಟಿ ರದ್ದುಗೊಳಿಸುವ ಜತೆಗೆ ಮುಂದೆ ಯಾವುದೇ ಜಾಗದಲ್ಲಿ ಅವರಿಗೆ ಅವಕಾಶವಿರುವುದಿಲ್ಲ ಎಂದು ಪಾಲಿಕೆ ತಿಳಿಸಿದೆ.
ತೆರವು ಕಾರ್ಯಾಚರಣೆ ಮುಂದುರಿಕೆ
ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗಾಗಿಯೇ ಉತ್ತಮ ಜಾಗದಲ್ಲಿ ವಲಯ ನಿರ್ಮಿಸಿದೆ. ಹೆಚ್ಚು ಜನ ಓಡಾಡುವ ಜಾಗವಾಗಿರುವ ಕಾರಣ ವ್ಯಾಪಾರಕ್ಕೆ ಸಮಸ್ಯೆಯಾಗದು. ಪಾಲಿಕೆ ಮನವೊಲಿಕೆಯೊಂದಿಗೆ ನೋಟಿಸ್ ನೀಡಿದ್ದು, ಜ.30ರೊಳಗೆ ಸ್ಥಳಾಂತರವಾಗಬೇಕು. ಇಲ್ಲವಾದಲ್ಲಿ ಶಾಶ್ವತವಾಗಿ ಗುರುತಿನ ಚೀಟಿ ರದ್ದಾಗಲಿದೆ. ಮುಂದಿನ ದಿನಗಳಲ್ಲಿ ತೆರವು ಕಾರ್ಯಾಚರಣೆ ಮುಂದುವರಿಸುತ್ತೇವೆ.
-ಮನೋಜ್ ಕುಮಾರ್, ಪಾಲಿಕೆ, ಮೇಯರ್
ವಲಯದ ಬಗ್ಗೆ ಯಾವುದೇ ಆಕ್ಷೇಪಗಳಿಲ್ಲ
ಮಹಾನಗರ ಪಾಲಿಕೆಯಿಂದ ನಿರ್ಮಿಸಲಾಗಿರುವ ವಲಯದ ಬಗ್ಗೆ ಯಾವುದೇ ಆಕ್ಷೇಪಗಳಿಲ್ಲ. ಸ್ಟೇಟ್ಬ್ಯಾಂಕ್ ಸುತ್ತ ಬೀದಿಯಲ್ಲಿರುವವರನ್ನು ಪಾಲಿಕೆ ಸ್ಥಳಾಂತರ ಮಾಡಬೇಕು. ಬಳಿಕ ನಾವು ಸ್ಥಳಾಂತರಗೊಳ್ಳಲು ಎಂದಿಗೂ ಸಿದ್ಧರಿದ್ದೇವೆ.
-ಮಹಮ್ಮದ್ ಮುಸ್ತಾಫಾ, ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ
Mangaluru ಸಿಸಿಬಿ ಪೊಲೀಸರ ಭರ್ಜರಿ ಭೇಟೆ: 119 ಕೆ.ಜಿ. ಗಾಂಜಾ ಸಾಗಾಟ; ನಾಲ್ವರ ಸೆರೆ
ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಸರಣಿ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ; ಬಂಧನ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Panambur: ಡ್ರಗ್ಸ್ ಸೇವನೆ: 6 ಮಂದಿ ಸೆರೆ
You seem to have an Ad Blocker on.
To continue reading, please turn it off or whitelist Udayavani.