![Beer](https://www.udayavani.com/wp-content/uploads/2025/02/Beer-415x232.jpg)
![Beer](https://www.udayavani.com/wp-content/uploads/2025/02/Beer-415x232.jpg)
Team Udayavani, Jul 3, 2023, 4:53 PM IST
ಮಂಗಳೂರು: ಪ್ರಾಣಿಗಳನ್ನು ರಕ್ಷಿಸಿ ಆರೈಕೆ ಮಾಡುತ್ತಿರುವ ಮಂಗಳೂರು ಬಲ್ಲಾಳ್ಭಾಗ್ನ ರಜನಿ ಶೆಟ್ಟಿ ಅವರಿಗೆ ನೆರೆಮನೆಯ ಮಹಿಳೆ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಸೋಮವಾರ ಬೆಳಗ್ಗೆ ರಜನಿ ಶೆಟ್ಟಿ ಅವರು ಬಟ್ಟೆ ಒಣಗಲು ಹಾಕುತ್ತಿದ್ದಾಾಗ ಪಕ್ಕದ ಮನೆಯ ಮಹಿಳೆ ಕಲ್ಲುಗಳನ್ನು ಎಸೆದಿದ್ದಾರೆ. ಇದರಿಂದಾಗಿ ರಜನಿ ಶೆಟ್ಟಿಯವರ ಕೈಗೆ ಗಾಯವಾಗಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆರಮನೆಯ ಮಹಿಳೆ ಈ ಹಿಂದೆಯೂ ಹಲವು ಬಾರಿ ಹಲ್ಲೆಗೆ ಯತ್ನಿಸಿದ್ದರೆಂದು ರಜನಿ ಶೆಟ್ಟಿ ಆರೋಪಿಸಿದ್ದಾರೆ. ಘಟನೆಯ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಪ್ರಾಣಿ ಪ್ರೇಮಿಯಾಗಿರುವ ರಜನಿ ಶೆಟ್ಟಿ ಅವರು ಪ್ರಾಣಿಗಳನ್ನು ರಕ್ಷಿಸುವ ಮತ್ತು ಪೋಷಿಸುವ ನಿಸ್ವಾರ್ಥ ಪ್ರಯತ್ನಕ್ಕಾಗಿ ವ್ಯಾಪಕ ಮನ್ನಣೆ ಗಳಿಸಿದ್ದಾರೆ. ಅವರು ಪ್ರತಿದಿನ ಸುಮಾರು 400 ರಿಂದ 500 ನಾಯಿಗಳಿಗೆ ಶ್ರದ್ಧೆಯಿಂದ ಆಹಾರವನ್ನು ನೀಡುತ್ತಾರೆ ಮತ್ತು ತನ್ನ ನಿವಾಸದಲ್ಲಿ ಹಲವಾರು ಬೆಕ್ಕುಗಳು ಮತ್ತು ಪಕ್ಷಿಗಳಿಗೆ ಆಶ್ರಯ ತಾಣವಾಗಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.