ಮುಂಗಾರು ಕಣ್ಣಾಮುಚ್ಚಾಲೆ: ಇವರು ಮಳೆಗಾಗಿ ಕೊಡೆ ಹಿಡಿದು ಕಾಯುತ್ತಿದ್ದಾರೆ !
Team Udayavani, Jun 14, 2024, 3:47 PM IST
ಮಹಾನಗರ: ರಾಜ್ಯ ಕರಾವಳಿಗೆ ಮುಂಗಾರು ಆಗಮನವಾದರೂ ನಗರದಲ್ಲಿ ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಒಂದು ದಿನ ಭಾರೀ ಮಳೆ ಯಾದರೆ ಮರುದಿನ ಕಡಿಮೆಯಾಗುತ್ತಿದೆ. ನಿರಂತರ ಮಳೆ ಇರದ ಕಾರಣ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ಯಾಕೆಂದರೆ, ರೈನ್ ಕೋಟ್, ಕೊಡೆ ಸಹಿತ ವಿವಿಧ ವಸ್ತುಗಳ ಮಾರಾಟ ಇನ್ನೂ ಸರಿಯಾಗಿ ಕುದುರಿಲ್ಲ.
ಕೊಡೆ, ರೈನ್ ಕೋಟ್ ಮತ್ತಿತರ ಸಾಮಗ್ರಿಗಳನ್ನು ವ್ಯಾಪಾರಿಗಳು ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ತರಿಸಿ ಸಂಗ್ರಹ ಇಟ್ಟಿರುತ್ತಾರೆ. ಮೇ ಅಂತ್ಯದಲ್ಲಿ ಶಾಲೆ – ಕಾಲೇಜು ಆರಂಭಕ್ಕೆ ಮುನ್ನ ಸ್ವಲ್ಪ ವ್ಯಾಪಾರ ಇರುತ್ತದೆ. ಆದರೆ ನಿಜ ವಾದ ವ್ಯಾಪಾರ ಆರಂಭವಾಗುವುದು ಮಳೆ ಜೋರಾಗಿ ಬಿದ್ದಾಗ. ಹೀಗಾಗಿಯೇ ಜೂನ್ ಮೊದಲ ವಾರದಲ್ಲಿ ನಗರದ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ರೈನ್ ಕೋಟ್, ಕೊಡೆ ಮಾರಾಟ ಕಾಣಸಿಗುತ್ತದೆ. ಆದರೆ ಈ ಬಾರಿ ಒಂದೆರಡು ಕಡೆ ಮಾತ್ರ ಮಾರಾಟಕ್ಕೆ ಇಡಲಾಗಿದೆ.ಅವರಿಗೂ ವ್ಯಾಪಾರ ಇಲ್ಲ!
ಮುಂಬಯಿ, ಗುಜರಾತ್ನಿಂದ ಪೂರೈಕೆ
ನಗರದ ಶಾಪ್ ಗಳಿಗೆ ರೈನ್ಕೋಟ್, ಕೊಡೆಗಳು ಗುಜರಾತ್, ಮುಂಬಯಿಯಿಂದ ಪೂರೈಕೆಯಾಗುತ್ತವೆ. ಈಗಾಗಲೇ ಎಲ್ಲ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಆರ್ಡರ್ ಕೊಟ್ಟು ತರಿಸಿಕೊಂಡಿದ್ದಾರೆ. ಆದರೆ ಮಳೆ ವಿಳಂಬವಾಗಿರುವುದರಿಂದ ವ್ಯಾಪಾರ ಆರಂಭವಾಗಿಲ್ಲ. ಹಾಗಂತ ಇದೇನೂ ಹಾಳಾಗುವ ವಸ್ತುವಲ್ಲ ಎಂಬ ಕಾರಣಕ್ಕೆ ಹೆಚ್ಚು ತಲೆ ಬಿಸಿ ಇಲ್ಲ.
28 ರೂ.ಗೆ ಒಂದು ರೈನ್ ಕೋಟ್!
ಈ ಬಾರಿ ಮಾರುಕಟ್ಟೆಯಲ್ಲಿ ಮಳೆಗಾಲಕ್ಕೆ ಸಂಬಂಧಿತ ವಸ್ತುಗಳ ಉತ್ತಮ ಸಂಗ್ರಹವಿದೆ. ಮಕ್ಕಳ ವಿಭಾಗ ದಲ್ಲಿ 300 ರೂ.ನಿಂದ 650 ರೂ. ಮತ್ತು ವಯಸ್ಕರಲ್ಲಿ ಸುಮಾರು 500 ರೂ. ನಿಂದ 2,000 ರೂ.ವರೆಗೂ ದರ ವೈವಿಧ್ಯವಿದೆ. ಈ ಬಾರಿಯ ವಿಶೇಷ ಎಂಬಂತೆ ಕೇವಲ 28 ರೂ.ಗೆ ಒಂದು ಬಾರಿ ಉಪಯೋಗಿಸಬಹುದಾದ ರೈನ್ ಕೋಟ್ ಕೂಡ ಇದೆ.
ನಿರಂತರ ಮಳೆ ಸುರಿಯದ ಹಿನ್ನೆಲೆಯಲ್ಲಿ ವ್ಯಾಪಾರ ಕುದುರಿಲ್ಲ
ಪೂರ್ಣ ಪ್ರಮಾಣದಲ್ಲಿ ಮಳೆಗಾಲ ಆರಂಭವಾಗದ ಹಿನ್ನೆಲೆಯಲ್ಲಿ ರೈನ್ ಕೋಟ್, ಕೊಡೆ ವ್ಯಾಪಾರ ಕುದುರಿಲ್ಲ. ಶಾಲಾ – ಕಾಲೇಜು ಆರಂಭದ ವೇಳೆ ಮಾರಾಟಕ್ಕೆ ತುಸು ಬೇಡಿಕೆ ಇತ್ತು. ನಿರಂತರ ಮಳೆ ಸುರಿಯಲಾರಂಭಿಸಿದ ಬಳಿಕ ವ್ಯಾಪಾರ ಚುರುಕುಗೊಳ್ಳಬಹುದು.
*ಸಂತೋಷ್ ಕುಮಾರ್, ಉದ್ಯಮಿ-ಉರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮುಕ್ತಿ ಕಾಣದ “ಬ್ಲ್ಯಾಕ್ಸ್ಪಾಟ್’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು
Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ
Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್ ನಜೀರ್
Gulf Medical University: ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ
MG Motor: ನೂತನ ಇವಿ ಕಾರು ಸಿಯುವಿ ಝಿಎಸ್ ವಿಂಡ್ಸರ್ ಮಾರುಕಟ್ಟೆಗೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ
ಭಾರತದಲ್ಲಿ ಪಾಕ್ ಸಿನಿಮಾ ದ ಲೆಜೆಂಡ್ ಆಫ್ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ
Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ
Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ
Bengaluru: ಸಾಲ ತೀರಿಸಲು ಸರ ಕದಿಯುತ್ತಿದ್ದ ಇಬ್ಬರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.