Mulki:  ಜಾಗ ಮೀಸಲು ಇಟ್ಟಿದ್ದರೂ ಸ್ಥಾಪನೆಯಾಗದ ಅಗ್ನಿ ಶಾಮಕ ಠಾಣೆ

ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೂ ವಿಳಂಬ ನೀತಿಗೆ ಜನರ ಬೇಸರ

Team Udayavani, Sep 27, 2024, 6:58 PM IST

3

ಮೂಲ್ಕಿ: ಬಹಳಷ್ಟು ತಡವಾಗಿ ಮೂಲ್ಕಿ ತಾಲೂಕು ಕೇಂದ್ರವಾಗಿ ಗುರುತಿಸಿಕೊಂಡಿದ್ದರೂ ಅದಕ್ಕೆ ಬೇಕಾದ ಮೂಲ ವ್ಯವಸ್ಥೆಗಳನ್ನು ಮಾಡಲಾಗಿಲ್ಲ. ಅದರಲ್ಲೂ ಮುಖ್ಯವಾಗಿ ಬೆಂಕಿ ಮತ್ತು ಇತರ ಪ್ರಾಕೃತಿಕ ದುರಂತಗಳು ಸಂಭವಿಸಿದಾಗ ತುರ್ತು ನೆರವಿಗೆ ಬರಬೇಕಾಗಿರುವ ಅಗ್ನಿ ಶಾಮಕ ವ್ಯವಸ್ಥೆ ಮೂಲ್ಕಿಯಲ್ಲಿ ಇನ್ನೂ ಆರಂಭಗೊಂಡಿಲ್ಲ. ಅಚ್ಚರಿ ಎಂದರೆ, ಅಗ್ನಿಶಾಮಕ ಠಾಣೆಗಾಗಿ ಒಂದು ಎಕರೆ ಜಾಗವನ್ನು ಮೀಸಲು ಇಟ್ಟಿದ್ದರೂ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದ್ದರೂ ಸ್ಥಾಪನೆಯನ್ನು ವಿಳಂಬಿಸಲಾಗುತ್ತಿದೆ.

ಹೀಗಾಗಿ ಅಗ್ನಿ ದುರಂತವೇನಾದರೂ ಸಂಭವಿಸಿದರೆ ಮಂಗಳೂರಿನಿಂದ ಅಗ್ನಿ ಶಾಮಕ ವಾಹನ ಬರಬೇಕಾಗಿದೆ. ಅಷ್ಟು ದೂರದಿಂದ ಬರುವಾಗ ಇಲ್ಲಿ ಆಗುವ ಅನಾಹುತಗಳೆಲ್ಲ ನಡೆದುಹೋಗಿರುತ್ತವೆ. ಹೆಚ್ಚಿನ ಸಂದರ್ಭದಲ್ಲಿ ಸ್ಥಳೀಯರೇ ತಮಗೆ ಸಾಧ್ಯವಾದಷ್ಟು ಅಗ್ನಿ ಶಮನ ಕಾರ್ಯ ನಡೆಸಿದ ಬಳಿಕವೇ ಮಂಗಳೂರಿನ ವಾಹನಗಳು ಬರುತ್ತಿವೆ.

ಜಾಗ ಸಿದ್ಧವಾಗಿದೆ ಆದರೆ….
ಇಲ್ಲಿಯ ಕಾರ್ನಾಡು ಕೈಗಾರಿಕಾ ಪ್ರದೇಶದಲ್ಲಿ ಸುಮಾರು ಒಂದು ಎಕ್ರೆ ಮಿಕ್ಕಿದ ಜಾಗವನ್ನು ಅಗ್ನಿಶಾಮಕ ದಳದ ಇಲಾಖೆ ಮೀಸಲಾಗಿರಿಸಿಕೊಂಡಿದೆ. ಆದರೆ ಕೇಂದ್ರ ಸ್ಥಾಪನೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಇನ್ನೊಂದು ಮಾಹಿತಿ ಪ್ರಕಾರ, ಇನ್ನಷ್ಟು ಜಾಗದ ಬೇಡಿಕೆಯನ್ನು ಇಡಲಾಗುತ್ತಿದೆ. ಅಷ್ಟು ಜಾಗ ಈಗಿನ ಕಾಲದಲ್ಲಿ ಕೊಡಲು ಸಾಧ್ಯವೇ ಎಂಬುದರ ಜತೆಗೆ ಅಷ್ಟೊಂದು ಜಾಗ ಯಾಕೆ ಎಂಬುದೂ ಪ್ರಶ್ನೆಯಾಗಿದೆ.

ಮೂಲ್ಕಿ ಪರಿಸರದಲ್ಲಿ ಎಕರೆಗಟ್ಟಲೆ ಜಮೀನು ಸಿಗುವುದು ಕಷ್ಟವೇ ಸರಿ. ಹಾಗಿರುವಾಗ 32 ಗ್ರಾಮ ವ್ಯಾಪ್ತಿಯ ಮೂಲ್ಕಿ ತಾಲೂಕಿನ ಅಗತ್ಯಕ್ಕೆ ತಕ್ಕುದಾದ ಸಣ್ಣ ಪ್ರಮಾಣದ ಅಗ್ನಿಶಾಮಕ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎನ್ನುವುದು ಜನರ ಆಗ್ರಹ.

ಮೂಲ್ಕಿಗೆ ಯಾಕೆ ಠಾಣೆ ಅಗತ್ಯ?
ಮೂಲ್ಕಿಯಲ್ಲಿ ಬೃಹತ್‌ ಕೈಗಾರಿಕಾ ವಲಯವಿದೆ. ಇಲ್ಲಿ ಗ್ಯಾಸ್‌ ಸಂಗ್ರಹಣ ಕೇಂದ್ರ, ಸಾಕಷ್ಟು ಹಳೆ ಪ್ಲಾಸ್ಟಿಕ್‌ಗಳ ಗುಜರಿ ಸಂಗ್ರಹವೂ ಇದ್ದು ಯಾವಾಗಲೂ ಭಯ ಹುಟ್ಟಿಸುತ್ತದೆ. ಕೆಳವು ಸಮಯಗಳ ಹಿಂದೆ ಗುಜರಿ ಸಂಗ್ರಹ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡು ಬಹಳಷ್ಟು ನಷ್ಟ ಉಂಟಾಗಿದೆ. ನೂರಾರು ಮನೆಗಳು, ವಿವಿಧ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು ಬೆಂಕಿಯ ಅವಘಡ ಸಂಭವಿಸಿದರೆ ಹೆಚ್ಚು ನಾಶ ನಷ್ಟ ಉಂಟಾಗುತ್ತದೆ.

ಮೂಲ್ಕಿ ಭಾಗದಲ್ಲಿ ಯಾವುದೇ ಅವಘಡ ಸಂಭವಿಸಿದರೆ ಮಂಗಳೂರಿನಿಂದಲೇ ವಾಹನ ಬರಬೇಕು. ಆಗ ಸಾಕಷ್ಟು ಅನಾಹುತ ನಡೆದುಹೋಗುತ್ತದೆ.

-ಸರ್ವೋತ್ತಮ ಅಂಚನ್‌

ಟಾಪ್ ನ್ಯೂಸ್

1-male

India vs Bangladesh 2 ನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆ ಅಡ್ಡಿ

Gadinadu-Award

Award: 2023-24, 2024-25ನೇ ಸಾಲಿನ “ಗಡಿನಾಡ ಚೇತನ” ಪ್ರಶಸ್ತಿ ಪ್ರಕಟ

Bheemanna-Naik

Sirsi: ಪಾಶ್ಚಾತ್ಯ ಅಡಿಕೆ ಆಮದು ನಿರ್ಬಂಧಕ್ಕೆ ಸಂಸದರು ಧ್ವನಿ ಎತ್ತಲಿ: ಶಾಸಕ ಭೀಮಣ್ಣ‌

1-jagga

Laddus row; ತಿರುಮಲ ದೇವಸ್ಥಾನ ದರ್ಶನ ರದ್ದು ಮಾಡಿದ ಜಗನ್ ರೆಡ್ಡಿ

BBK-11: ದಶಕದ ಹಿಂದೆಯೇ ಹಿಂದಿ ಬಿಗ್‌ ಬಾಸ್‌ನಲ್ಲಿತ್ತು ʼಸ್ವರ್ಗ ನರಕʼದ ಕಾನ್ಸೆಪ್ಟ್

BBK-11: ದಶಕದ ಹಿಂದೆಯೇ ಹಿಂದಿ ಬಿಗ್‌ ಬಾಸ್‌ನಲ್ಲಿತ್ತು ʼಸ್ವರ್ಗ ನರಕʼದ ಕಾನ್ಸೆಪ್ಟ್

1-mang-1

Mangaluru; ನಗರದ 9 ಅಂತಸ್ತಿನ ಹೊಟೇಲ್ ಕಟ್ಟಡದಲ್ಲಿ ಅಗ್ನಿ ಅವಘಡ

Udayavani.com ‘Nammane Krishna-2024’ Reels Contest Winners Awarded

Udayavani.com ‘ನಮ್ಮನೆ ಕೃಷ್ಣ -2024’ ರೀಲ್ಸ್‌ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mang-1

Mangaluru; ನಗರದ 9 ಅಂತಸ್ತಿನ ಹೊಟೇಲ್ ಕಟ್ಟಡದಲ್ಲಿ ಅಗ್ನಿ ಅವಘಡ

Kulasekhara: ಬೈಕ್ ಗಳ ನಡುವೆ ಅಪಘಾತ… ಸವಾರ ಮೃತ್ಯು

Kulasekhara: ಬೈಕ್ ಗಳ ನಡುವೆ ಅಪಘಾತ… ಸವಾರ ಮೃತ್ಯು

manjunath bhandari

CM ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ:ಮಂಜುನಾಥ ಭಂಡಾರಿ

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

Mangaluru: ಅಮೆರಿಕದಲ್ಲಿ ಯಕ್ಷಗಾನಕ್ಕೆ ಸಿಕ್ಕ ಗೌರವ ಅವಿಸ್ಮರಣೀಯ: ಪಟ್ಲ ಸತೀಶ್‌ ಶೆಟ್ಟಿ

Mangaluru: ಅಮೆರಿಕದಲ್ಲಿ ಯಕ್ಷಗಾನಕ್ಕೆ ಸಿಕ್ಕ ಗೌರವ ಅವಿಸ್ಮರಣೀಯ: ಪಟ್ಲ ಸತೀಶ್‌ ಶೆಟ್ಟಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-male

India vs Bangladesh 2 ನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆ ಅಡ್ಡಿ

Sagara: ಮಂಗಗಳ ಹಾವಳಿ; ಹಳ್ಳಿ ಮಹಿಳೆಯರ ಪ್ರತಿಭಟನೆ

Sagara: ಮಂಗಗಳ ಹಾವಳಿ; ಹಳ್ಳಿ ಮಹಿಳೆಯರ ಪ್ರತಿಭಟನೆ

POlice

Belthangady: ಅಕ್ರಮ ಕಸಾಯಿಖಾನೆಗೆ ದಾಳಿ: ಆರೋಪಿಗಳು ಪರಾರಿ

fraudd

Gangolli: ದೋಣಿಯ ಸೊತ್ತು ಮಾರಾಟ ಮಾಡಿ 22 ಲಕ್ಷ ರೂ. ವಂಚನೆ

Gadinadu-Award

Award: 2023-24, 2024-25ನೇ ಸಾಲಿನ “ಗಡಿನಾಡ ಚೇತನ” ಪ್ರಶಸ್ತಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.