Bajpe ಪೇಟೆ ಚರಂಡಿಗೆ ಹೊಸ ಸ್ಲ್ಯಾಬ್
ಬಿರುಕು ಬಿಟ್ಟ ಸ್ಲ್ಯಾಬ್ನಲ್ಲಿ ವಾಹನಗಳ ಚಕ್ರ ಸಿಲುಕಿ ಸಂಚಾರಕ್ಕೆ ಅಡಚಣೆ
Team Udayavani, Oct 27, 2024, 4:24 PM IST
ಬಜಪೆ: ಬಜಪೆ ಪೇಟೆಯ ಚರಂಡಿಯ ಸ್ಲ್ಯಾಬ್ ಬಿರುಕು ಬಿಟ್ಟ ಕಾರಣ ಬಸ್ ನಿಲ್ದಾಣದಿಂದ ಹೊರಗೆ ಬರುವ ಬಸ್ ಹಾಗೂ ಇತರ ವಾಹನಗಳಿಗೆ ಅಪಾಯದ ಬಗ್ಗೆ ‘ಉದಯವಾಣಿ’ ಸುದಿನ ವರದಿಗೆ ಲೋಕೋಪಯೋಗಿ ಇಲಾಖೆ ಸ್ಪಂದಿಸಿದ್ದು, ಬಿರುಕುಬಿಟ್ಟ ಸ್ಲ್ಯಾಬ್ನ್ನು ಸರಿಪಡಿಸಿದೆ.
ಬಜಪೆ ಪೇಟೆಯ ಚರಂಡಿಯಲ್ಲಿ ಸ್ಲ್ಯಾಬ್ ಬಿರುಕು ದಿನದಿಂದ ದಿನಕ್ಕೆ ದೊಡ್ಡದಾಗಿ ವಾಹನಗಳ ಚಕ್ರಗಳು ಸಿಲುಕುವ ಕಾರಣ ಅಪಾಯಕ್ಕೆ ಕಾರಣವಾಗುತ್ತಿರುವ ಬಗ್ಗೆ ಸೆ. 14ರಂದು ವರದಿ ಮಾಡಿತ್ತು. ಈ ಪ್ರದೇಶದಲ್ಲಿ ಬಸ್ಗಳು ಹಾಗೂ ಇತರ ವಾಹನಗಳು ಹೆಚ್ಚು ಸಂಚಾರಿಸುತ್ತಿವೆ. ಲಘು ವಾಹನಗಳ ಚಕ್ರವೂ ಹಲವು ಬಾರಿ ಸಿಲುಕಿಕೊಂಡಿ ರುವುದು ಕಂಡು ಬಂದಿತ್ತು. ಲೋಕೋಪಯೋಗಿ ಇಲಾಖೆ ಸ್ಲ್ಯಾಬ್ ಬಿರುಕು ಬಿಟ್ಟ ಜಾಗದಲ್ಲಿ ಹೊಸ ಸ್ಲ್ಯಾಬ್ನ್ನು ಹಾಕಿದೆ. ಇದರಿಂದ ವಾಹನ ಸಂಚಾರ ಸುಮಗವಾಗಿದೆ. ಇಲ್ಲದ್ದಿದ್ದಲ್ಲಿ ಬಿರುಕು ಬಿಟ್ಟ ಸ್ಲ್ಯಾಬ್ನ ಬಿಟ್ಟು ಇತ್ತ ಒಂದೇ ಬದಿ ವಾಹನ ಸಂಚಾರ ಮಾಡಬೇಕಾಗಿತ್ತು.
ಬಜಪೆ ಪೇಟೆ ರಸ್ತೆ ಕಾಂಕ್ರೀಟ್, ವಿಸ್ತರಣೆ ಕಾಮಗಾರಿ ಮುಗಿದಿಲ್ಲ
ಬಜಪೆ ಪೇಟೆಯಲ್ಲಿ ಬಸ್ ನಿಲ್ದಾಣದ ಸಮೀಪದ ಚರಂಡಿ ಇರುವ ಪ್ರದೇಶದಲ್ಲಿ ಕಾಮಗಾರಿ ಬಾಕಿ ಇದೆ. ಲೋಕೋಪಯೋಗಿ ಇಲಾಖೆಯು ಬಜಪೆ ಪಟ್ಟಣ ಪಂಚಾಯತ್ಗೆ ಅದ್ಯಪಾಡಿ ಬಸ್ ತಂಗುದಾಣ ಹಾಗೂ ಮಂಗಳೂರು ಕಡೆ ಸಾಗುವ ರಸ್ತೆಯ ಬದಿಯ ಬಸ್ ತಂಗುದಾಣವನ್ನು ತೆಗೆದು ಜಾಗವನ್ನು ಸಮತಟ್ಟು ಮಾಡಿ ಕೊಡಬೇಕೆಂದು ಮನವಿ ಮಾಡಿಕೊಂಡಿದೆ. ಇದರಿಂದ ರಸ್ತೆ ವಿಸ್ತರಣೆ ಕಾಮಗಾರಿ ಬಳಿಕ ನಡೆಯುವ ಬಗ್ಗೆ ಮುನ್ಸೂಚನೆ ದೊರೆತಿದೆ. ಬಸ್ ನಿಲ್ದಾಣ ತೆರವಿನ ಅನಂತರವೇ ಈ ಕಾಮಗಾರಿ ಆರಂಭವಾಗಲಿದೆ. ಇದರಿಂದ ರಸ್ತೆ ವಿಸ್ತರಣೆ ಜತೆ ಪಾರ್ಕಿಂಗ್ಗೂ ಹೆಚ್ಚು ಜಾಗ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ
BBK11: ಶಾಕಿಂಗ್.! ಫಿನಾಲೆವರೆಗೂ ಬರ್ತಾರೆ ಅನ್ಕೊಂಡಿದ್ದ ಆ ಸ್ಪರ್ಧಿ ಇವತ್ತೇ ಮನೆಯಿಂದ ಔಟ್?
Waqf; ವಿಜಯಪುರದಲ್ಲಿ ಗೆಜೆಟ್ ದೋಷದಿಂದ ರೈತರ ಜಮೀನಿನಲ್ಲಿ ಗೊಂದಲ: ಎಂ.ಬಿ.ಪಾಟೀಲ
Dandeli: ಕುಡಿದ ನಶೆಯಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆ; ಓರ್ವನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.