Pilikula: 10 ವರ್ಷಗಳ ಬಳಿಕ ನಡೆಯಲಿದೆ ಕಂಬಳ!

ನ. 17, 18ರಂದು ಕೋಣಗಳ ಓಟದ ಸ್ಪರ್ಧೆ; ಜಿಲ್ಲಾಡಳಿತದಿಂದ ಈ ಬಾರಿ 7 ದಿನ ತುಳುನಾಡೋತ್ಸವ

Team Udayavani, Oct 22, 2024, 3:20 PM IST

4

ಪಿಲಿಕುಳ: 10 ವರ್ಷದ ಹಿಂದೆ ನಿಂತುಹೋಗಿದ್ದ ಸರಕಾರಿ ಪ್ರಾಯೋಜಿತ ಪಿಲಿಕುಳ ಕಂಬಳ ನ.17, 18ರಂದು ನಡೆಯಲಿದ್ದು, ಕರೆಗಳನ್ನು ಮರುಸಜ್ಜುಗೊಳಿಸುವ ಕಾರ್ಯ ಭರದಿಂದ ನಡೆದಿದೆ.

ಕಂಬಳ ನಡೆಸದೆ ಇರುವುದರಿಂದ ಕರೆಗಳಲ್ಲಿ ಹೂಳು ತುಂಬಿ, ಗಿಡ- ಗಂಟಿ ಬೆಳೆದಿತ್ತು. ಕರೆ ಸಂಪೂರ್ಣವಾಗಿ ಪಾಳುಬಿದ್ದ ಸ್ವರೂಪದಲ್ಲಿತ್ತು. ಇದೀಗ ಕಂಬಳ ಕರೆಯ ಮರುನಿರ್ಮಾಣ, ನೀರು ಹಾಗೂ ಇತರ ಸೌಲಭ್ಯಗಳನ್ನು ವ್ಯವಸ್ಥೆ ಮುಂತಾದ ಕೆಲಸಗಳು ನಡೆಸಲಾಗುತ್ತಿದೆ.

ಸೆ.4ರಂದು ನೂತನ ಕರೆಗೆ ಮುಹೂರ್ತ ನಡೆದಿತ್ತು. ಪಿಲಿಕುಳ ಜೋಡುಕರೆ ಕಂಬಳದ ಕರೆ 133 ಮೀ. (180 ಕೋಲು) ಉದ್ದವಿದೆ. ಸುಮಾರು 11 ಸಾವಿರ ಕೆಂಪುಕಲ್ಲು 60 ಲೋಡ್‌ ಮರಳು ಹಾಗೂ ಜಲ್ಲಿ ಹುಡಿ ಬಳಸಿ ಕಂಬಳ ಗದ್ದೆ ಸಿದ್ದಪಡಿಸಲಾಗಿದೆ. ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳದ ಸ್ಥಾಪಕಾಧ್ಯಕ್ಷ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು ಅವರು ಕರೆ ನಿರ್ಮಾಣದ ಉಸ್ತುವಾರಿ ನೋಡಿಕೊಂಡಿದ್ದಾರೆ.

2014ರಲ್ಲಿ ಕೊನೆಯ ಕಂಬಳ
ಪಿಲಿಕುಳದಲ್ಲಿ 2014ರಲ್ಲಿ ಕೊನೆಯ ಕಂಬಳ ನಡೆದಿತ್ತು. ಗುತ್ತಿನ ಮನೆಯ ಮುಂಭಾಗದಲ್ಲಿರುವ “ನೇತ್ರಾವತಿ- ಫಲ್ಗುಣಿ’ ಜೋಡುಕರೆಯಲ್ಲಿ ಕಂಬಳ ವಿಜೃಂಭಣೆಯಿಂದ ನಡೆದಿದ್ದು 85 ಜತೆ ಕೋಣಗಳು ಪಾಲ್ಗೊಂಡಿದ್ದವು. ಆದರೆ ಆ ಬಳಿಕ ಕಂಬಳದ ವಿರುದ್ಧ ಪೆಟಾ ಸಂಸೆœ ನ್ಯಾಯಾಲಯದಲ್ಲಿ ಕಾನೂನು ಸಮರ ಆರಂಭಿಸಿದ ಪರಿಣಾಮ ಜಿಲ್ಲಾಡಳಿತ ಪಿಲಿಕುಳದಲ್ಲಿ ಕಂಬಳವನ್ನು ಸ್ಥಗಿತಗೊಳಿಸಿತ್ತು. ಇದೀಗ ಕಾನೂನಿಗೆ ತಿದ್ದುಪಡಿ ತಂದು ಕಾನೂನಾತ್ಮಕ ಸಮಸ್ಯೆಗಳನ್ನು ನಿವಾರಿಸಲಾಗಿದೆ. 2018ರ ಕಂಬಳ ಋತುವಿನಲ್ಲೂ ಜಿಲ್ಲಾಡಳಿತ ಕಂಬಳ ನಡೆಸಲು ನಿರ್ಧರಿಸಿದ್ದರೂ ಅನುದಾನ ದೊರೆಯದ ಹಿನ್ನಲೆಯಲ್ಲಿ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು.

ಪಿಲಿಕುಳ ಕಂಬಳ ಯಶಸ್ವಿಯಾಗಿ ನಡೆಸುವ ಪೂರ್ವಭಾವಿಯಾಗಿ ಕಂಬಳದ ಶಾಶ್ವತ ಕರೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಆಳ್ವಾಸ್‌ ಸಂಸ್ಥೆಯ ಡಾ|ಎಂ.ಮೋಹನ್‌ ಆಳ್ವ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮಂಜುನಾಥ ಭಂಡಾರಿ ಸಹಿತ ಹಲವು ಪ್ರಮುಖರ ಮಾರ್ಗದರ್ಶನ, ಸಹಕಾರದಲ್ಲಿ ಸಿದ್ದತೆಗಳನ್ನು ನಡೆಸಲಾಗುತ್ತಿದೆ.
-ನವೀನ್‌ಚಂದ್ರ ಆಳ್ವ, ಉಪಾಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ

ನ.14ರಿಂದ 7 ದಿನದ ಉತ್ಸವ
ಜಿಲ್ಲಾಧಿಕಾರಿ  ಮುಲ್ಲೈ ಮುಗಿಲನ್‌ ನಿರ್ದೇಶನದಂತೆ ಪಿಲಿಕುಳ ಕಂಬಳ ಹಾಗೂ 7 ದಿನಗಳ ತುಳುನಾಡೋತ್ಸವ ನ.14ರಿಂದ 21ರವರೆಗೆ ನಡೆಯಲಿದೆ. ಮಕ್ಕಳ ಹಬ್ಬ, ವಿಜ್ಞಾನ ಮೇಳ, ಕೃಷಿ ಮೇಳ, ಆಹಾರ ಉತ್ಸವ, ಸಾಂಸ್ಕೃತಿಕ ಮೇಳ, ಕೆಸರ್‌ಡೊಂಜಿ ದಿನ, ದೋಣಿಯಲ್ಲಿ ಸಾಹಸ ಕ್ರೀಡೆ ನಡೆಸುವ ಸಂಬಂಧ ಮಾತುಕತೆ ನಡೆಯುತ್ತಿದೆ.

ನವೆಂಬರ್‌ 9ರ ಬದಲು ನ. 17
‘ವಿಧಾನಪರಿಷತ್‌ ಚುನಾವಣೆಗಾಗಿ ನೀತಿ ಸಂಹಿತೆ ಇದ್ದ ಕಾರಣದಿಂದ ಕಂಬಳ ಸಮಿತಿ ಈಗಾಗಲೇ ನಿಗದಿ ಮಾಡಿದ್ದ ಪಿಲಿಕುಳ ಕಂಬಳದ ದಿನಾಂಕವನ್ನು ನ.9ರ ಬದಲಿಗೆ ನ.17, ನ.18ಕ್ಕೆ ಮರುನಿಗದಿಮಾಡಲಾಗಿದೆ. ಕರೆ ನಿರ್ಮಾಣ ಬಹುತೇಕ ಪೂರ್ಣವಾಗಿದೆ’ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ|ದೇವಿಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Prithvi Shaw out of the Ranji team too; Is Mumbai player’s cricket life over

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?

JPC ವಕ್ಫ್ ಸಭೆಯಲ್ಲಿ ಅಶಿಸ್ತಿನ ವರ್ತನೆ: ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಅಮಾನತು

JPC ವಕ್ಫ್ ಸಭೆಯಲ್ಲಿ ಅಶಿಸ್ತಿನ ವರ್ತನೆ… ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅಮಾನತು

ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?

Udupi: ಜಿಲ್ಲಾ ಪತ್ರಕರ್ತರ ರಜತ ಕ್ರೀಡಾ ಸಂಭ್ರಮ: ನಿರ್ಭೀತ ಪತ್ರಿಕೋದ್ಯಮ ಇಂದಿನ ಅಗತ್ಯ: ಡಿಸಿ

Udupi: ಜಿಲ್ಲಾ ಪತ್ರಕರ್ತರ ರಜತ ಕ್ರೀಡಾ ಸಂಭ್ರಮ: ನಿರ್ಭೀತ ಪತ್ರಿಕೋದ್ಯಮ ಇಂದಿನ ಅಗತ್ಯ: DC

ಹೆಜ್ಬುಲ್ಲಾ ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು, ಅಪಾರ ಚಿನ್ನ ಪತ್ತೆ! ಇಸ್ರೇಲ್

Hezbollah ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು,ಚಿನ್ನ ಪತ್ತೆ! ಇಸ್ರೇಲ್

BBK11: “ಮಾನಸಗೆ ಪ್ರಬುದ್ಧತೆ ಇಲ್ಲ..” ನಾಮಿನೇಷನ್‌ ಕಾರಣ ಕೇಳಿ ಗರಂ ಆದ ತುಕಾಲಿ ಪತ್ನಿ

BBK11: “ಮಾನಸಗೆ ಪ್ರಬುದ್ಧತೆ ಇಲ್ಲ..” ನಾಮಿನೇಷನ್‌ ಕಾರಣ ಕೇಳಿ ಗರಂ ಆದ ತುಕಾಲಿ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6(2)

Pandeshwar ರೈಲು ಹಳಿ ದುರಸ್ತಿ; ವಾಹನ ಸವಾರರಿಗೆ ಸಂಕಷ್ಟ

5

Surathkal: ಬೀದಿದೀಪಗಳಿಗೇ ಇನ್ನೂ ಸಿಕ್ಕಿಲ್ಲ ವಿದ್ಯುತ್‌ ಸಂಪರ್ಕ

3

Mangaluru: ಮೂಕ ಪ್ರಾಣಿಗಳ ಪ್ರಾಣ ಹಿಂಡುವ ಪ್ಲಾಸ್ಟಿಕ್‌!

3

Mangaluru: ಬಸ್‌ ಸಿಬಂದಿ ನಡುವೆ ಜಗಳ; ಕನ್ನಡಿಗೆ ಹಾನಿ; 4 ಸಾವಿರ ರೂ. ನಷ್ಟ

2

Mangaluru: ಹೂಡಿಕೆ ಆಮಿಷ; ಲಕ್ಷಾಂತರ ರೂ. ವರ್ಗಾಯಿಸಿಕೊಂಡು ವಂಚನೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

11(1)

Thekkatte: ಸಂಪೂರ್ಣ ಹದಗೆಟ್ಟ ಬಿದ್ಕಲ್‌ಕಟ್ಟೆ-ಕಂಬಿಕಲ್ಲು ರಸ್ತೆ

Prithvi Shaw out of the Ranji team too; Is Mumbai player’s cricket life over

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?

10

Kolluru: ವಂಡ್ಸೆ-ಹಾಲ್ಕಲ್‌ ರಸ್ತೆ ಹೊಂಡಕ್ಕೆ ಮುಕ್ತಿ ಎಂದು?

8-hunasagi

Hunasagi: ಕೃಷ್ಣಾನದಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು

9

Karkala: ಆಗಾಗ ಸುರಿಯುತ್ತಿರುವ ಮಳೆ; ರಸ್ತೆ ದುರಸ್ತಿಗೆ ಅಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.