![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 26, 2022, 10:38 AM IST
ಪಡೀಲ್: ಮಳೆನೀರು ಹರಿಯಲು ಹೊಸ ಚರಂಡಿ ನಿರ್ಮಾಣದ ಸಂದರ್ಭ ಕುಡಿ ಯುವ ನೀರಿನ ಪೈಪ್ಲೈನ್ ಮಧ್ಯ ಭಾಗದಲ್ಲಿಯೇ ಇಟ್ಟು ಕಾಮಗಾರಿ ನಡೆಸುತ್ತಿರುವ ಪಡೀಲ್ ಭಾಗಕ್ಕೆ ಮಂಗಳೂರು ಸ್ಮಾರ್ಟ್ಸಿಟಿ ಹಾಗೂ ಪಾಲಿಕೆಯ ಉನ್ನತ ಅಧಿಕಾರಿಗಳ ತಂಡ ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊಸ ಚರಂಡಿ ನಿರ್ಮಿಸುವಾಗ ಮಳೆ ನೀರು ಹರಿಯಲು ಯಾವುದೇ ಸಮಸ್ಯೆ ಆಗದಂತೆ ಪೂರಕ ಕ್ರಮಗಳನ್ನು ಈ ಭಾಗದಲ್ಲಿ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ನೀರಿನ ಪೈಪ್ಲೈನ್ ಮಧ್ಯದ ಲ್ಲಿಯೇ ಬಿಟ್ಟು ಚರಂಡಿ ಕಾಮಗಾರಿ ಎಂಬ ಶೀರ್ಷಿಕೆಯಲ್ಲಿ ‘ಉದಯವಾಣಿ ಸುದಿನ’ ವಿಶೇಷ ವರದಿಯನ್ನು ಎ. 24ರಂದು ಪ್ರಕಟಿಸಿತ್ತು.
ಚರಂಡಿ ಮಧ್ಯೆ ನೀರಿನ ಪೈಪ್ ಲೈನ್ ಇದ್ದರೆ ಮಳೆಗಾಲ ದಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇದೆ ಎಂಬ ಬಗ್ಗೆ ವರದಿಯ ಮುಖೇನ ತಿಳಿಸಲಾಗಿತ್ತು.
ವರದಿ ಗಮನಿಸಿದ ಸ್ಮಾರ್ಟ್ಸಿಟಿ ಹಾಗೂ ಮಂಗಳೂರು ಪಾಲಿಕೆಯ ಉನ್ನತ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಗತ್ಯ ಕ್ರಮಕ್ಕೆ ಸೂಚನೆ
ಸ್ಮಾರ್ಟ್ಸಿಟಿಯ ಜನರಲ್ ಮ್ಯಾನೇಜರ್ ಅರುಣ್ ಪ್ರಭ ಅವರು ‘ಸುದಿನ’ ಜತೆಗೆ ಮಾತನಾಡಿ, ಪಡೀಲ್ ಭಾಗದಲ್ಲಿ ನೀರಿನ ಪೈಪ್ಲೈನ್ ಸಹಿತ ವಿವಿಧ ಪೈಪ್ಲೈನ್ ಬೇರೆ ಬೇರೆ ಕಡೆ ಇರುವುದರಿಂದ ಚರಂಡಿ ವ್ಯವಸ್ಥೆ ಇಲ್ಲಿ ನಡೆಸುವುದು ಬಹು ಸವಾಲಿನ ಕೆಲಸ. ಆದರೆ, ಒಂದು ಭಾಗದಲ್ಲಿ ಹೊಸ ಚರಂಡಿಯ ಮಧ್ಯೆಯೇ ನೀರಿನ ಪೈಪ್ಲೈನ್ ಇರುವ ಹಿನ್ನೆಲೆಯಲ್ಲಿ ಇಲ್ಲಿ ಹೆಚ್ಚು ಒತ್ತು ನೀಡಲು ಸೂಚಿಸಲಾಗಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಚರಂಡಿ ಅಗಲಗೊಳಿಸುವುದು ಅಥವಾ ನೀರು ಸರಾಗವಾಗಿ ಹರಿಯಲು ಅಧಿಕ ಹೊಂಡ ಮಾಡುವ ಬಗ್ಗೆಯೂ ಅವಲೋಕಿಸಲಾಗಿದೆ. ಈ ಬಗ್ಗೆ ಗುತ್ತಿಗೆದಾರರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.