![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 24, 2024, 8:10 PM IST
ಸುರತ್ಕಲ್: ಇಲ್ಲಿನ ಮುಕ್ಕ ರೆಡ್ರಾಕ್ ಕಡಲ ಕಿನಾರೆಯಲ್ಲಿ ಮಂಗಳವಾರ ಈಜಾಡುತ್ತಿದ್ದಾಗ ನೀರುಪಾಲಾಗಿದ್ದ ಪ್ರಜ್ವಲ್ ಅವರ ಮೃತದೇಹ ಸಸಿಹಿತ್ಲು ಬಳಿಯ ಆಳ ಸಮುದ್ರದಲ್ಲಿ ಗುರುವಾರ ಪತ್ತೆಯಾಗಿದೆ.
ಮೀನುಗಾರಿಕೆಗೆ ತೆರಳಿದ್ದವರು ಮುಂಜಾನೆ 10 ಗಂಟೆಗೆ ಮೃತದೇಹ ತೇಲುತ್ತಿರುವುದನ್ನು ಕಂಡು ಕರಾವಳಿ ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ ರಕ್ಷಣ ದೋಣಿಯಲ್ಲಿ ಧಾವಿಸಿ ಮೃತದೇಹವನ್ನು ಆಳಸಮುದ್ರದಿಂದ ಕಡಲ ಕಿನಾರೆಯವರೆಗೆ ಸಾಗಿಸಿ ಬಳಿಕ ಸ್ಥಳೀಯ ಮೀನುಗಾರರ ನೆರವಿನಿಂದ ದೋಣಿಯಲ್ಲಿ ದಡಕ್ಕೆ ತರುವಲ್ಲಿ ಶ್ರಮ ವಹಿಸಿದರು.
ಸಮುದ್ರದಲ್ಲಿ ಎದ್ದಿರುವ ಚಂಡಮಾರುತ, ಆಗಾಗ ಸುರಿಯುತ್ತಿದ್ದ ಮಳೆಯಿಂದ ಸಮುದ್ರ ಉಗ್ರ ರೂಪ ಪಡೆದುಕೊಂಡಿದ್ದರಿಂದ ಮುಕ್ಕ ಬಳಿಯಿಂದ ಆಳಸಮುದ್ರಕ್ಕೆ ಎಳೆದುಕೊಂಡು ಹೋಗಿದೆ ಎನ್ನಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.