![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Jan 15, 2021, 6:00 PM IST
ಬಂಟ್ವಾಳ: ಪ್ರಧಾನ ಮಂತ್ರಿ ಆಶಯದಂತೆ 2023ಕ್ಕೆ ಸೂರು ಇಲ್ಲದವರಾರು ಇರಬಾರದು ಎಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ 10 ಲಕ್ಷ ಮನೆ ನಿರ್ಮಾಣ ಮಾಡಲು ಉದ್ದೇಶ ಹೊಂದಿದ್ದೇವೆ ಎಂದು ಸಚಿವ ಸೋಮಣ್ಣ ಹೇಳಿದರು.
ನರಿಕೊಂಬು ವೀರಭದ್ರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ. 10 ಲಕ್ಷ ಮನೆ ನಿರ್ಮಾಣದ ಕಾರ್ಯದ ಜೊತೆ ಪ್ರತಿ ಹಂತದ ಪರಿಶೀಲನೆ ನಡೆಸಲಾಗುವುದು ಮತ್ತು ಅರ್ಹರಿಗೆ ಸಿಗುವ ರೀತಿಯಲ್ಲಿ ಬೇಕಾದ ಎಲ್ಲಾ ವ್ಯವಸ್ಥೆ ಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ವಸತಿ ಸೌಕರ್ಯ ಒದಗಿಸುವ ಯೋಜನೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. 3560 ಎಕರೆಯಲ್ಲಿ ಎಲ್ಲಾ ಬಡವರಿಗೂ ಸೈಟು ಕೊಡಲು ಸರಕಾರ ಜಾಗ ಖರೀದಿ ಮಾಡಿದೆ. 224 ಕ್ಷೇತ್ರದಲ್ಲಿಯೂ ಈ ಉದ್ದೇಶ ಹೊಂದಿದ್ದು 800 ಸಾವಿರ ಕೋಟಿ ರೂ. ಅವಶ್ಯಕತೆ ಇದ್ದು ಅದನ್ನು ಮುಂದಿನ ಬಜೆಟ್ ನಲ್ಲಿ ಸೇರಿಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ರಾಮಮಂದಿರ ನಿರ್ಮಾಣ ದೇಶ ಒಗ್ಗೂಡಿಸುವ ಕಾರ್ಯ: ಸಚಿವ ಡಾ.ಕೆ.ಸುಧಾಕರ್
ಮನೆ ನಿರ್ಮಾಣದ ಕಾರ್ಯ ವಿವಿಧ ಹಂತದಲ್ಲಿದ್ದು ಮುಂದಿನ ಜೂನ್ ವೇಳೆಗೆ 97 ಸಾವಿರ ಸೈಟ್ ಗಳನ್ನು ನೀಡಲು ಯೋಜನೆ ತಯಾರು ಮಾಡಲಾಗಿದೆ. ಐತಿಹಾಸಿಕ ರೀತಿಯಲ್ಲಿ ತೀರ್ಮಾನ ಒಂದನ್ನು ಕೈಕೊಂಡಿದ್ದು ರಾಜ್ಯದ 2400 ಕೊಳಚೆ ಪ್ರದೇಶಗಳಲ್ಲಿ 8500 ಎಕರೆಗೂ ಮೇಲ್ಪಟ್ಟು ಜಾಗದಲ್ಲಿ ಘೋಷಿತ ಸ್ಲಮ್ ಗಳಿದ್ದು, ಈವರೆಗೆ ಅವರನ್ನು ಓಟ್ ಬ್ಯಾಂಕ್ ಆಗಿ ಉಪಯೋಗಮಾಡುತ್ತಿದ್ದೇವು. ಮುಂದಿನ ದಿನಗಳಲ್ಲಿ ಅ ಓಟ್ ಬ್ಯಾಂಕ್ ನ್ನು ಶಾಶ್ವತವಾಗಿ ಯೋಜನೆ ಮಾಡುವ ಉದ್ದೇಶದಿಂದ ಅವರಿಗೆ ಪ್ರಾಪರ್ಟಿ ರೈಟ್ಸ್ ನೀಡುವ ಯೋಚನೆ ವಸತಿ ಇಲಾಖೆ ಮೂಲಕ ತೀರ್ಮಾನ ಮಾಡಿದ್ದೇವೆ.
ಇದನ್ನೂ ಓದಿ: ಕತ್ತಲೆ ಕವಿದ ಬದುಕಿನಲ್ಲಿ ಬೆಳಕು ಮೂಡಿಸಿದ ಸ್ವ ಉದ್ಯೋಗ | Udayavani
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕ್ರಿಯಾಶೀಲತೆ ಹಾಗೂ ಬಡವರ ಬಗೆಗಿನ ಕಾಳಜಿಯ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾ.ಪಂ.ಗೂ 50ರಂತೆ ಮನೆ ನೀಡುವ ಭರವಸೆ ನೀಡಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ ಭೇಟಿಗೆ ಸಚಿವ ಸೋಮಣ್ಣ ಅವರು ಮುಂದಾಗಿದ್ದರು. ಆದರೆ ಪೂಜಾರಿ ಅವರು ಬಂಟ್ವಾಳದ ಮನೆಯಲ್ಲಿರದ ಕಾರಣ ಭೇಟಿ ಕಾರ್ಯ ಕೊನೆಗಳಿಗೆಯಲ್ಲಿ ರದ್ದಾಯಿತು. ಪೂಜಾರಿ ಅವರ ಜೊತೆಗಿನ ಹಳೆಯ ಒಡನಾಟವನ್ನು ನೆನಪು ಮಾಡಿದ ಅವರು ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರು ನನಗೆ 40 ವರ್ಷಗಳಿಂದ ಗುರುಗಳು ಎಂಬ ಶಬ್ದವನ್ನು ಉಲ್ಲೇಖ ಮಾಡಿದರು.
ಇದನ್ನೂ ಓದಿ: ಸಲಾರ್ ಚಿತ್ರಕ್ಕೆ ಮುಹೂರ್ತ; ಹೈದರಾಬಾದ್ನಲ್ಲಿ ಕನ್ನಡ-ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.