Bajpe: ಹಬ್ಬದ ದಿನಗಳಲ್ಲಿ ದರ ಹೆಚ್ಚಾಗುವ ಸಾಧ್ಯತೆ

ಮಳೆಗೆ ತರಕಾರಿ ಇಳುವರಿ ಕುಂಠಿತ: ಕೃಷಿಕರಿಗೆ ನಷ್ಟ

Team Udayavani, Aug 6, 2024, 3:35 PM IST

Screenshot (110)

ಬಜಪೆ: ಸತತ ಮಳೆಗೆ ತರಕಾರಿ ಬೆಳೆಗೆ ಭಾರಿ ಹಾನಿಯಾಗಿದ್ದು ಕೃಷಿಕರಿಗೆ ನಷ್ಟ ಸಂಭವಿಸಿದೆ. ಈ ಬಾರಿ ಮಳೆ ತಡವಾಗಿ ಬಂದ ಕಾರಣ ಕೃಷಿಕರಲ್ಲಿ ತರಕಾರಿ ಬೆಳೆಯ ಲೆಕ್ಕಾಚಾರಗಳಿಗೆ ಸ್ವಲ್ಪಮಟ್ಟಿಗೆ ತೊಂದರೆಕೊಟ್ಟಿದೆ. ಜೂನ್‌ ತಿಂಗಳ ಮೊದಲ ವಾರದಲ್ಲಿ ತರಕಾರಿ ಬೆಳೆಯ ಕಾರ್ಯ ಆರಂಭಿಸಿ, ಬೀಜ ಬಿತ್ತನೆ ಮಾಡಲಾಗಿತ್ತು. ಇನ್ನೂ ಕೆಲವರು ತಡವಾಗಿ ಬೀಜ ಬಿತ್ತನೆ ಮಾಡಿದ್ದಾರೆ.

ಬಜಪೆ ಊರಿನ ತರಕಾರಿಗೆ ಪ್ರಸಿದ್ದಿ ಪಡೆದಿದ್ದು, ಅದ ರಲ್ಲೂ ಬಜಪೆ ಬೆಂಡೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಇಲ್ಲಿನ ಪರಿಸರದಲ್ಲಿ ಎಕರೆಗಟ್ಟೆಲೆ ಬೆಂಡೆಕಾಯಿ ಬೆಳೆ ಯುವ ಕೃಷಿಕರೇ ಹೆಚ್ಚು. ಇದಕ್ಕೆ ಬೆಲೆಯೂ ಉತ್ತ ಮ ವಾಗಿ ಸಿಗುವ ಕಾರಣ ಊರಿನ ಬೆಂಡೆಯನ್ನು ಹೆಚ್ಚಿನ ಎಲ್ಲಕೃಷಿಕರು ಬೆಳೆಸುತ್ತಿದ್ದಾರೆ. ಈ ಬಾರಿಯೂ ಮಳೆ ತಡವಾಗಿ ಬಂದರೂ ಊರಿನ ಬೆಂಡೆ ಬೀಜದ ಬಿತ್ತನೆಯೂ ಜೂನ್‌ ಮೊದಲವಾರದಲ್ಲಿ ನಡೆದಿದೆ.

ಬಿತ್ತನೆ ಮಾಡಿ 60 ದಿನವಾದರೂ ಬೆಂಡೆ ಇಲ್ಲ

ಬೆಂಡೆ ಬೀಜ ಬಿತ್ತನೆ ಮಾಡಿ 45 ದಿನಗಳಲ್ಲಿ ಬೆಂಡೆ ಸಿಗುವುದು ಮಾಮೂಲು. ಆದರೆ ಈಗ 60 ದಿನಗಳಾದರೂ ಬೆಂಡೆಕಾಯಿ ಆಗಲಿಲ್ಲ. ಕೇವಲ ಹೂಗಳು ಬಿಟ್ಟಿವೆ. ಅಧಿ ಕ ಮಳೆ ಇದಕ್ಕೆ ಕಾರಣ.

ಹೆಚ್ಚಾಗಿ ನಾಗರ ಪಂಚಮಿ, ಅಷ್ಟಮಿ, ಚೌತಿ ಹಾಗೂ ತೆನೆಹಬ್ಬವನ್ನು ಗಮನದಲ್ಲಿಟ್ಟುಕೊಂಡು ಬೆಂಡೆಯನ್ನು ಜೂನ್‌ ಮೊದಲ ವಾರದಲ್ಲಿ ಬಿತ್ತನೆಮಾಡಲಾಗುತ್ತದೆ. ನಾಗರ ಪಂಚಮಿಗೆ ಮುನ್ನ ತರಕಾರಿಯನ್ನು ಮಾರುಕಟ್ಟೆಗೆ ತರಲು ಕ್ಲಪ್ತಸಮಯದಲ್ಲಿ ಸಿಗುತ್ತದೆ. ಬಳಿಕ ಅಷ್ಟಮಿಗೆ, ಚೌತಿಗೆ ಹಾಗೂ ತೆನೆ ಹಬ್ಬಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಡೆ ಸಿಗುತ್ತದೆ. ಇದ್ದರಿಂದ ಇಲ್ಲಿನ ಕೃಷಿಕರಿಗೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಕೆಲವೆಡೆ ಬೆಂಡೆ ಗಿಡಗಳಲ್ಲಿ ಹಳದಿ ರೋಗ ಕಂಡು ಬಂದಿದೆ. ಇದು ಇಳುವರಿಗೆ ದೊಡ್ಡ ಹೊಡೆತವಾಗಿದೆ.

ಗಿಡ ಬೆಳವಣಿಗೆ ಕುಂಠಿತ

ಮಳೆ ಜಾಸ್ತಿಯಾದ ಕಾರಣ ಬೆಂಡೆ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದೆ. ಬಿಟ್ಟ ಹೂಗಳು ಕೊಳೆತು ಹೋಗಿವೆ.ಇದರಿಂದ ಈ ಬಾರಿ ಈಗ ನಾಗರಪಂಚಮಿಗೆ ಹೆಚ್ಚು ಬೆಂಡೆ ಸಿಗದು, ಇನ್ನೂ ಬಿಸಿಲು ಇದ್ದರೆ ಗಿಡಗಳ ಬೆಳವಣಿಗೆ ಸಾಧ್ಯ. ಅಷ್ಟಮಿ ಹಬ್ಬಕ್ಕಾದರೂ ಬೆಂಡೆ ಸಿಗಬಹುದು ಎಂಬುವುದು ಅಡ್ಕಬಾರೆಯ ಕೃಷಿಕ ರಿಚಾರ್ಡ್‌ ಡಿ’ಸೋಜಾ ಅವರ ನಂಬಿಕೆ.

ಹರಿವೆ ಗಿಡಬೆಳವಣಿಗೆಯೂ ಕುಂಠಿತ ವಾಗಿದೆ. ಊರಿನ ಬೆಂಡೆ ಕೆ.ಜಿ.ಗೆ 200 ರೂ.ಯಲ್ಲಿ ಮಾರಾಟವಾಗುತ್ತಿದೆ. ಆದರೆ ಕೃಷಿಕರಿಗೆ 80 ರೂ.ಸಿಗುತ್ತಿದೆ. ಇತರ ಜಿಲ್ಲೆಯ ಬೆಂಡೆ ಕೆ.ಜಿಗೆ 80 ರೂ. ಯಲ್ಲಿ ಮಾರಾಟ ವಾಗುತ್ತಿದೆ. ಊರಿನ ಪೀರೆಗೆ ಕೆ.ಜಿಗೆ 80 ರೂ. ಮಾರಾಟವಾಗುತ್ತಿದ್ದರೆ. ಕೃಷಿಕರಿಗೆ 50 ರೂ. ಸಿಗುತ್ತಿದೆ. ಊರಿನ ಮುಳ್ಳು ಸೌತೆ ಕೆ.ಜಿಗೆ 120 ರೂ.ಮಾರಾಟವಾಗುತ್ತಿದೆ. ಕೃಷಿಕರಿಗೆ 60 ರೂ.ಸಿಗುತ್ತಿದೆ. ಬಜಪೆಯ ಅಡ್ಕಬಾರೆ, ಹಳೆ ವಿಮಾನ ನಿಲ್ದಾಣ, ಕರಂಬಾರು, ಪಡುಪೆರಾರ ಪಡೀಲ್‌ ಪ್ರದೇಶಗಳು ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿದೆ.

ಟಾಪ್ ನ್ಯೂಸ್

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುವ ರೈತರಿಗೆ ಪೊಲೀಸ್ ಬ್ರೆಕ್

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುತ್ತಿದ್ದ ರೈತರಿಗೆ ಪೊಲೀಸ್ ಬ್ರೇಕ್

ಕಲ್ಯಾಣ ಕರ್ನಾಟಕ ಉತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ತಳಿಗೆ ಸಿಎಂ ಮಾಲಾರ್ಪಣೆ

Kalaburagi: ಕಲ್ಯಾಣ ಕರ್ನಾಟಕ ಉತ್ಸವ… ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

3

Bantwal: ಬಿ.ಸಿ.ರೋಡು ಪ್ರಕರಣ; ಎರಡು ಪ್ರತ್ಯೇಕ ಪ್ರಕರಣ ದಾಖಲು

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEP ವಿಷಯ ಆಯ್ಕೆ ಕಾರಣ ಸ್ನಾತಕೋತ್ತರ ಪ್ರವೇಶ ಸಂಕಟ!

NEP ವಿಷಯ ಆಯ್ಕೆ ಕಾರಣ ಸ್ನಾತಕೋತ್ತರ ಪ್ರವೇಶ ಸಂಕಟ!

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

6

Crime: ಏಕಮುಖ ರಸ್ತೆಯಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಧಮ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.