![what if rain interrupts to icc t20 world cup final? What does the rule say?](https://www.udayavani.com/wp-content/uploads/2024/06/final-415x229.jpg)
ಉಳ್ಳಾಲ: ಜನರ ಉಪಯೋಗಕ್ಕೆ ಇಲ್ಲದ ಕೆಎಸ್ಸಾರ್ಟಿಸಿ ಬಸ್ ಸಂಚಾರ!
Team Udayavani, Jun 26, 2024, 2:23 PM IST
![ಉಳ್ಳಾಲ: ಜನರ ಉಪಯೋಗಕ್ಕೆ ಇಲ್ಲದ ಕೆಎಸ್ಸಾರ್ಟಿಸಿ ಬಸ್ ಸಂಚಾರ!](https://www.udayavani.com/wp-content/uploads/2024/06/KSRTC-5-620x255.jpg)
ಉಳ್ಳಾಲ: ಉಳ್ಳಾಲ ತಾಲೂಕಿನ ಒಳಪ್ರದೇಶಗಳಿಗೆ ಬಸ್ಸುಗಳೇ ವಿರಳ. ಇದರ ನಡುವೆ ಹಲವು ವರ್ಷಗಳ ಹೋರಾಟದ ಬಳಿಕ ಬಂದ ಕೆಎಸ್ಆರ್ಟಿಸಿ ಬಸ್ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿದೆ ಎನ್ನುವುದು ಇಲ್ಲಿನ ಜನರ ಅಳಲು. ಇದು ಪಜೀರು ಗ್ರಾಮದ ತಂಜರೆಯಿಂದ ನ್ಯೂಪಡ್ಪು ಮಾರ್ಗವಾಗಿ ಎಲಿಯಾರ್ ಪದವು ಸಂಪರ್ಕಿಸುವ ಸರಕಾರಿ ಬಸ್ಸಿನ ಕಥೆ. ಬೆಳಗ್ಗಿನ ಟ್ರಿಪ್ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬರುತ್ತದೆ. ಖಾಸಗಿ ಬಸ್ನ ಹಿಂದೆಯೇ ಹೋಗುತ್ತದೆ!
ತಂಜರೆಯಿಂದ -ಎಲಿಯಾರ್ – ಮದಕ ಮಾರ್ಗವಾಗಿ ಮಂಗಳೂರಿನ ಲಾಲ್ಭಾಗ್ ಕಡೆ ಸಂಚರಿಸುವ ಈ ಬಸ್ನ 8.10ಕ್ಕೆ ತಂಜರೆ ಯಿಂದ ಹೊರಡಬೇಕು. ಆದರೆ ಅದು ಬರುವುದೇ 9 ಗಂಟೆಯ ನಂತರ. ಹೀಗಾಗಿ ಇದರಲ್ಲಿ ಬರಬೇಕಾದವರೆಲ್ಲ ಒಂದೂವರೆ
ಕಿ.ಮೀ. ನಡೆದುಕೊಂಡು ಎಲಿಯಾರ್ ಪದವಿನ ಬಸ್ಗೆ ತಲುಪಿ ಬಳಿಕ ಮಂಗಳೂರಿಗೆ ಹೋಗಬೇಕು. ಈ ಬಸ್ ಸಮಯಕ್ಕೆ
ಸರಿಯಾಗಿ ಓಡಾಡುವಂತಾಗಬೇಕು ಎನ್ನುತ್ತಾರೆ ಮಿಷನ್ ಕಂಪೌಂಡು ಬಳಿ ನಿವಾಸಿ ಭರತ್ ಗಟ್ಟಿ ಕಟ್ಟಪುಣಿ.
ಬೆಳಗ್ಗೆ, ರಾತ್ರಿ ಸಂಚಾರ ಸ್ಥಗಿತ
ತೊಕ್ಕೊಟ್ಟು – ಕುತ್ತಾರು ದೇರಳಕಟ್ಟೆ ಮಾರ್ಗವಾಗಿ ಹರೇಕಳ, ಪಾವೂರು, ಕೊಣಾಜೆ, ಅಂಬ್ಲಿಮೊಗರು ಗ್ರಾಮಗಳನ್ನು ಸಂಪರ್ಕಿಸುವ ಹೆಚ್ಚಿನ ಬಸ್ಗಳಲ್ಲಿ ಬೆಳಗ್ಗಿನ ಮತ್ತು ಸಂಜೆ ಕಾಲಿಡಲು ಸಾಧ್ಯವೇ ಇಲ್ಲ. ಇಷ್ಟಾದರೂ ಒಳಪ್ರದೇಶಗಳನ್ನು ಸಂಪರ್ಕಿಸುವ ಬಸ್ಗಳು ಬೆಳಗ್ಗಿನ ಪಸ್ಟ್ ಟ್ರಿಪ್ ಮತ್ತು ರಾತ್ರಿಯ ಲಾಸ್ಟ್ ಟ್ರಿಪ್ ಕಟ್ ಮಾಡುತ್ತವೆ. ಹೀಗಾಗಿ ತಡರಾತ್ರಿ 3 ನಾಲ್ಕು ಕಿ.ಮೀ. ನಡೆದುಕೊಂಡೇ ಮನೆಗೆ ತಲುಪುವ ಸ್ಥಿತಿ ಇಲ್ಲಿನದು.
ರಸ್ತೆ ಚೆನ್ನಾಗಿದೆ ಆದರೆ, ಬಸ್ ಇಲ್ಲ!
ಕೊಣಾಜೆ ಗ್ರಾಮ ಮತ್ತು ಮಂಜನಾಡಿ ಗ್ರಾಮವನ್ನು ಸಂಪರ್ಕಿಸುವ ಅಸೈಗೋಳಿಯಿಂದ ಕೆಎಸ್ಆರ್ಪಿ ಪೊಲೀಸ್ ಕ್ವಾರ್ಟರ್ಸ್ನ ಎದುರು ಭಾಗವಾಗಿ ಪಟ್ಟೋರಿ, ನಡುಪದವು, ಪಿ.ಎ.ಕಾಲೇಜು, ಮೋಂಟುಗೋಳಿ ಮಾರ್ಗವಾಗಿ ಮಂಜನಾಡಿ ಜಂಕ್ಷನ್ ಮತ್ತು ಮುಡಿಪು ಜಂಕ್ಷನ್ ಸಂಪರ್ಕಿಸುವ ಸುಮಾರು ಐದು ಕಿ.ಮೀ ರಸ್ತೆ ನಿರ್ಮಾಣವಾಗಿದ್ದರೂ ಈ ರೂಟ್ಗೆ ಒಂದೂ ಬಸ್ ಇಲ್ಲ. ಅವರೆಲ್ಲ ನಡೆದುಕೊಂಡು ಇಲ್ಲವೇ ದುಪ್ಪಟ್ಟು ಹಣ ನೀಡಿ ಸಂಚರಿಸಬೇಕು.
*ವಸಂತ ಎನ್.ಕೊಣಾಜೆ
ಟಾಪ್ ನ್ಯೂಸ್
![what if rain interrupts to icc t20 world cup final? What does the rule say?](https://www.udayavani.com/wp-content/uploads/2024/06/final-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Panic Button ಅಳವಡಿಕೆ ಕಡ್ಡಾಯ: ಸಾರ್ವಜನಿಕ ಸಂಪರ್ಕ ವಾಹನಗಳಿಗೆ ವಿಎಲ್ಟಿಯೂ ಅಗತ್ಯ](https://www.udayavani.com/wp-content/uploads/2024/06/vehicle-panic-button-150x92.jpg)
Panic Button ಅಳವಡಿಕೆ ಕಡ್ಡಾಯ: ಸಾರ್ವಜನಿಕ ಸಂಪರ್ಕ ವಾಹನಗಳಿಗೆ ವಿಎಲ್ಟಿಯೂ ಅಗತ್ಯ
![Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್ನಲ್ಲಿ ಮಾತ್ರವೇ ಲಭ್ಯ](https://www.udayavani.com/wp-content/uploads/2024/06/TULU-2-150x55.jpg)
Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್ನಲ್ಲಿ ಮಾತ್ರವೇ ಲಭ್ಯ
![Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್’](https://www.udayavani.com/wp-content/uploads/2024/06/WARNA-NADHI-150x94.jpg)
Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್’
![BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್ ಕುಮಾರ್ ಕಟೀಲು](https://www.udayavani.com/wp-content/uploads/2024/06/bjppro-150x97.jpg)
BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್ ಕುಮಾರ್ ಕಟೀಲು
![Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ](https://www.udayavani.com/wp-content/uploads/2024/06/dc-1-150x72.jpg)
Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ
MUST WATCH
ಹೊಸ ಸೇರ್ಪಡೆ
![what if rain interrupts to icc t20 world cup final? What does the rule say?](https://www.udayavani.com/wp-content/uploads/2024/06/final-150x83.jpg)
ICC T20 World Cup; ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?
![13-tn-sitharama](https://www.udayavani.com/wp-content/uploads/2024/06/13-tn-sitharama-150x90.jpg)
T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್. ಸೀತಾರಾಮ
![Gujarat: ಭಾರೀ ಮಳೆಗೆ ರಾಜ್ ಕೋಟ್ ಏರ್ ಪೋರ್ಟ್ ಟರ್ಮಿನಲ್ ನ ಕೆನೋಪಿ ಕುಸಿತ](https://www.udayavani.com/wp-content/uploads/2024/06/Kenop-150x90.jpg)
Gujarat: ಭಾರೀ ಮಳೆಗೆ ರಾಜ್ ಕೋಟ್ ಏರ್ ಪೋರ್ಟ್ ಟರ್ಮಿನಲ್ ನ ಕೆನೋಪಿ ಕುಸಿತ
![No problem anyone comes in front of Martin…: Producer Uday Mehta](https://www.udayavani.com/wp-content/uploads/2024/06/martin-150x83.jpg)
Martin ಮುಂದೆ ಯಾರೇ ಬರಲಿ ನೋ ಪ್ರಾಬ್ಲಂ…: ನಿರ್ಮಾಪಕ ಉದಯ್ ಮೆಹ್ತಾ
![Swamijis should talk to High command about CM change: Chaluvarayaswamy](https://www.udayavani.com/wp-content/uploads/2024/06/chaluvata-150x83.jpg)
CM ಬದಲಾವಣೆ ಬಗ್ಗೆ ಸ್ವಾಮೀಜಿಗಳು ಬೇಕಾದರೆ ವರಿಷ್ಠರ ಜತೆ ಮಾತನಾಡಲಿ: ಚಲುವರಾಯಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.