ಕಿನ್ನಿಗೋಳಿ: ಪರಿಹಾರವಾಗದ ಪಾರ್ಕಿಂಗ್‌, ಟ್ರಾಫಿಕ್‌ ಸಮಸ್ಯೆ


Team Udayavani, Nov 11, 2022, 12:24 PM IST

10

ಕಿನ್ನಿಗೋಳಿ: ಕಿನ್ನಿಗೋಳಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಇಲ್ಲಿ 15 ಕ್ಕೂ ಮಿಕ್ಕಿ ರಾಷ್ಟ್ರೀಕೃತ ಬ್ಯಾಂಕ್‌ ಗಳು ತಮ್ಮ ಶಾಖೆಗಳನ್ನು ಹೊಂದಿದ್ದು, ದೊಡ್ಡ ಮಟ್ಟದ ಮಾಲ್‌ಗ‌ಳು, ಅಂಗಡಿ ಮುಂಗಟ್ಟುಗಳು ನಿರ್ಮಾಣಗೊಂಡಿವೆ. ಅನೇಕ ದೊಡ್ಡ ಮನೆಗಳ ಪ್ಲಾಟ್‌, ಸಂಕೀìಣ ನಿರ್ಮಾಣಗೊಂಡಿದ್ದು, ಹಲವಾರು ಶಿಕ್ಷಣ ಸಂಸ್ಥೆಗಳು ಇದೆ ಆದರೇ ಬಸ್‌ ನಿಲ್ದಾಣದ ಪರಿಸರದಲ್ಲಿ, ಮಾರ್ಕೆಟ್‌ಬಳಿ ಪಾರ್ಕಿಂಗ್‌ ಹಾಗೂ ಟ್ರಾಫಿಕ್‌ ನಿಯಂತ್ರಣದ ದೊಡ್ಡ ಸಮಸ್ಯೆ ಎದುರಾಗಿದೆ.

ಕಿನ್ನಿಗೋಳಿ ಪೇಟೆಯಲ್ಲಿ 20 ವರ್ಷಗಳ ಹಿಂದೆ ಇದ್ದ ರಸ್ತೆ ಇಂದು ಅದೇ ಸ್ಥಿತಿಯಲ್ಲಿದೆ. ಆದರೇ ವಾಹನಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಿದೆ. ಅದರ ನಡುವೆ ಮಾರುಕಟ್ಟೆಗೆ, ಕಚೇರಿಗೆ ಮತ್ತಿತರ ದಿನನಿತ್ಯದ ಕೆಲಸಗಳಿಗೆ ಬರುವರ ವಾಹನಗಳು ರಸ್ತೆ ಬದಿಯಲ್ಲಿ ನಿಲುಗಡೆ, ಅಂಗಡಿಗಳಿಗೆ ಬರುವ ಸರಕು ಸಾಗಾಟಗಳ ಲಾರಿಗಳು ನಿಂತರೆ, ಮುಖ್ಯ ರಸ್ತೆಯಲ್ಲಿ ಎರಡು ವಾಹನ ಸಂಚಾರಕ್ಕೆ ಜಾಗವಿಲ್ಲ, ರವಿವಾರ ಹಾಗೂ ಸೀಸನ್‌ ಸಮಯದಲ್ಲಿ ಮುಖ್ಯ ರಸ್ತೆಯ ಚರ್ಚ್‌ ಕಟ್ಟಡದಿಂದ ಬಸ್‌ ನಿಲ್ದಾಣ, ಗಣೇಶ ಕಟ್ಟೆಯ ತನಕ ರಸ್ತೆಯ ಬದಿಯಲ್ಲಿ ಪಾರ್ಕಿಂಗ್‌ ಇರುತ್ತದೆ. ಇದರಿಂದ ಪದೇ ಪದೇ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗುತ್ತಿದೆ.

ಬಸ್‌ ನಿಲ್ದಾಣದಲ್ಲಿ ಪಾರ್ಕಿಂಗ್‌ ದೊಡ್ಡ ತಲೆನೋವಾಗಿದೆ

ಬಸ್‌ ನಿಲ್ದಾಣದಲ್ಲಿ ಪ್ರತಿನಿತ್ಯ 200 ಕ್ಕೂ ಮಿಕ್ಕಿ ಸರ್ವಿಸ್‌ ಬಸ್‌ಗಳು ಬಂದು ಹೋಗುತ್ತಿವೆ. ಬಸ್‌ ನಿಲ್ದಾಣದ ಪಕ್ಕದಿಂದ ಗೋಳಿಜೋರ ಹಾಗೂ ಗುತ್ತಕಾಡು ಶಿಮಂತೂರು ಹಾದು ಹೋಗುವ ಸರ್ವಿಸ್‌ ರಸ್ತೆ ಇರುವುದರಿಂದ ಒಂದು ಬದಿಯಲ್ಲಿ ಬಸ್‌ ನಿಲ್ಲುವುದು ಮತ್ತೂಂದು ಬದಿಯಲ್ಲಿ ಸರ್ವಿಸ್‌ ರಸ್ತೆ. ಈ ಮಧ್ಯದಲ್ಲಿ ದ್ವಿಚಕ್ರ, ಕಾರು ಮುಂತಾದ ವಾಹನಗಳ ಪಾರ್ಕಿಂಗ್‌. ಇದರಿಂದ ದಿನ ನಿತ್ಯ ಟ್ರಾಫಿಕ್‌ ಜಾಮ್‌ ಸಮಸ್ಯೆಯಾಗಿದೆ. ಈ ಹಿಂದೆ ಬಸ್‌ ನಿಲ್ದಾಣದ ಪಾರ್ಕಿಂಗ್‌ ಗೆ ಸ್ಥಳ ನಿಗದಿಪಡಿಸಲಾಗಿತ್ತು. ಕೆಲವು ಸಮಯ ಸರಿಯಾಗಿ ಪಾಲಿಸಲಾಯಿತು. ಬೆಳಗ್ಗೆ, ಸಂಜೆಯ ಸಮಯದಲ್ಲಿ ಶಾಲೆ, ಕಾಲೇಜುಗಳ ಮಕ್ಕಳು ಬಸ್‌ ನಿಲ್ದಾಣದ ತಂಗುದಾಣದಲ್ಲಿ ನಿಲ್ಲಲು ಜಾಗವಿಲ್ಲದೇ ಅಂಗಡಿಗಳಿಲ್ಲಿ ಸಾಲು ಗಟ್ಟಿ ನಿಲ್ಲುತ್ತಾರೆ. ಬಸ್‌ ನಿಲ್ದಾಣದಲ್ಲಿ ಈ ಹಿಂದೆ ಪೋಲಿಸ್‌ ಹೋರಠಾಣೆಯ ಕೋಣೆ ಇತ್ತು, ಈಗಿನ ಹೊಸ ಬಸ್‌ ನಿಲ್ದಾಣದಲ್ಲಿ ಅವಕಾಶ ಇಲ್ಲವಾಗಿದೆ. ಇಂತಹ ಜಟಿಲ ಸಮಸ್ಯೆಗೆ ಪರಿಹಾರ ಅಗತ್ಯವಾಗಿ ಕಂಡುಕೊಳ್ಳಬೇಕಾಗಿದೆ.

ಏನೂ ಮಾಡಬಹುದು

  • -ಮುಖ್ಯರಸ್ತೆಯಲ್ಲಿನ ರಿಕ್ಷಾ ಪಾರ್ಕ್‌ ಸ್ಥಳಾಂತರಿಸಿದರೇ ಉತ್ತಮ, ಅಥವಾ ಕನಿಷ್ಟ ಐದು ರಿಕ್ಷಾಗಳಿಗೆ ಅವಕಾಶ
  • -ಮುಖ್ಯ ರಸ್ತೆಯ ಇಕ್ಕಲೆಗಳಲ್ಲಿ ಫ‌ುಟ್‌ಪಾತ್‌ ನಿರ್ಮಾಣ .
  • -ಮುಖ್ಯರಸ್ತೆಯಲ್ಲಿ ಬಸ್‌ ನಿಲ್ದಾಣಬಳಿ ಹಾಗೂ ಮಾರ್ಕೆಟ್‌ ಹತ್ತಿರ ವಾಹನ ದಟ್ಟಣೆಯನ್ನು ಟ್ರಾಫಿಕ್‌ ಪೊಲೀಸ್‌ ನಿಯುಕ್ತಿಗೊಳಿಸಬೇಕು.
  • -ಗ್ರಾಹಕರಿಗೆ ಪೇಟೆಗ ಬರುವ ಗ್ರಾಹಕರ ವಾಹನಗಳಿಗೆ ಸೂಕ್ತ ಪಾರ್ಕಿಂಗ್‌ ನಿಲ್ದಾಣ ಅಗತ್ಯವಿದೆ.
  • -ಪಾದಚಾರಿಗಳಿಗೆ ರಸ್ತೆ ದಾಟಲು ನಿಗದಿತ ಝೀಬ್ರಾ ಕ್ರಾಸಿಂಗ್‌ ಅಗತ್ಯವಿದೆ.
  • -ಅನುಗ್ರಹ ಸಭಾಭವನದ ಮುಂದುಗಡೆ ಮಂಗಳೂರು ಹಾಗೂ ಮೂಲ್ಕಿ ಹೋಗುವ ಬಸ್‌ಗಳು ನಿಲುಗಡೆಗೆ ಅವಕಾಶ ಕೊಟ್ಟರು ಸಮಯದ ಮಿತಿಯಲ್ಲಿ ಇರಬೇಕು.
  • -ಪಟ್ಟಣ ಪಂಚಾಯತ್‌ ಆಗಿ ಪರಿವರ್ತನೆ ಗೊಂಡ ಬಳಿಕ ಸಂಚಾರ ಠಾಣೆಯ ಅಧಿಕಾರಿಗಳು ಗ್ರಾಮಸ್ಥರ ಸೇರುವಿಕೆಯಲ್ಲಿ ಸಭೆ ನಡೆದು ವ್ಯವಸ್ಥೆಯ ಬಗ್ಗೆ ಪೇಟೆಯಲ್ಲಿ ಪರಿಶೀಲನೆ ಮಾಡಲಾಯಿತು. ಆದರೇ ಕಾರ್ಯಗತವಾಗಿಲ್ಲ.

ಶಾಸಕರ ಜತೆ ಸಭೆ ನಡೆಸಿ ತಿರ್ಮಾನ: ಕೆಲವೊಂದು ಫಲಕ ಹಾಕಲು ಹಾಗೂ ನೋ ಪಾರ್ಕಿಂಗ್‌ ಮಾಡಲು ಜಿಲ್ಲಾಧಿಕಾರಿಗಳ ಅನುಮತಿ ಹಾಗೂ ತಾಂತ್ರಿಕ ಸಮಸ್ಯೆ ಇದ್ದು ಸದ್ರಿ ಕಿನ್ನಿಗೋಳಿ ಮುಖ್ಯರಸ್ತೆಯಲ್ಲಿ ರಿಕ್ಷಾ ಪಾರ್ಕ್‌ ಮಾರುಕಟ್ಟೆಯ ಬಳಿ ಸ್ಥಳಾಂತರ ಮಾಡಲಾಗಿದ್ದು ಗುರುತು ಮಾಡಿ ಕೊಡಲಾಗಿದೆ. ಇನ್ನು ಅನುಗ್ರಹ ಸಭಾಗೃಹದದ ಮುಂದೆ ರಿಕ್ಷಾ ಪಾರ್ಕ್‌ ಮಾಡುವಲ್ಲಿ ಹಾಗೂ ಇನ್ನಿತರ ಟ್ರಾಫಿಕ್‌ ಸಮಸ್ಯೆಗಳ ಬಗ್ಗೆ ಶಾಸಕರ ಮೂಲಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗಿದೆ. – ಸಾಯೀಶ್‌ ಚೌಟ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್‌, ಕಿನ್ನಿಗೋಳಿ

-ರಘುನಾಥ ಕಾಮತ್‌ ಕೆಂಚನಕೆರೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.