ಮಂಗಳೂರು: ಎಂ.ಐ. ಒ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಸಹಸ್ರ ವೃಕ್ಷಾಭಿಯಾನ
ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ
Team Udayavani, Jul 8, 2023, 6:11 PM IST
ಮಂಗಳೂರು: ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಮಂಗಳೂರು ವಿಭಾಗ ಅರಣ್ಯ ಇಲಾಖೆಯ ಎ.ಸಿ.ಎಫ್ ಪಿ. ಶ್ರೀಧರ್ ಹೇಳಿದ್ದಾರೆ.
ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂ.ಐ. ಒ) ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಪಂಪ್ ವೆಲ್ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗದ ಸಹಯೋಗದಲ್ಲಿ ನಡೆದ ಸಹಸ್ರ ವೃಕ್ಷಾಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ. ಕ್ಯಾನ್ಸರ್ ಭಾದಿತರಿಗೆ ಮತ್ತವರ ಆರೈಕೆದಾರರಿಗೆ ವೃಕ್ಷ ನೀಡಿ ಅದರಂತೆ ಅವರ ಜೀವನವು ಹಸಿರಾಗಲಿ ಎಂದು ಆಶಿಸುವುದು ಚಿಕಿತ್ಸೆಯಷ್ಟೇ ಶ್ರೇಷ್ಠ ಕೆಲಸ ಎಂದರು.
ಬಳಿಕ ಮಾತನಾಡಿದ ಎಂ.ಐ. ಒ ನಿರ್ದೇಶಕರಾದ ಡಾ.ಸುರೇಶ್ ರಾವ್ ಪರಿಸರ ಸಂರಕ್ಷಣೆಗೆ ಮರಗಿಡಗಳ ಉಳಿವಿಗೆ ಅರಣ್ಯ ಇಲಾಖೆ ಮಾಡುತ್ತಿರುವ ಈ ಎಲ್ಲ ಕಾರ್ಯಗಳು ಬಹಳಷ್ಟು ಮಹತ್ವದ್ದಾಗಿದ್ದು ಪ್ರತ್ತಿಯೊಬ್ಬರು ಅವರವರ ಜವಾಬ್ದಾರಿಯನ್ನು ಅರಿತು ಹೆಜ್ಜೆ ಇಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎಂ.ಐ ಒ ರೇಡಿಯೇಷನ್ ಆಂಕಾಲಜಿಸ್ಟ್ ಡಾ.ವೆಂಕಟ್ರಮನ್ ಕಿಣಿ, ಅರಣ್ಯ ಇಲಾಖೆಯ ಡಿ.ಆರ್.ಎಫ್.ಒ ಸಂಜಯ್, ಬೀಟ್ ಫಾರೆಸ್ಟರ್ ಶ್ರೀಮತಿ ವೀಣಾ, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ.ರಾಜೇಶ್ ಶೆಟ್ಟಿ ಎಂ.ಐ. ಒ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ: ಬಜೆಟ್: ಹುಸಿಯಾದ ಕೊಬ್ಬರಿ ಬೆಳೆಗಾರರ ನಿರೀಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ
Mangaluru: ಗುಂಡಿ ಬಿದ್ದ ರಸ್ತೆಗಳಿಗೆ ಜಲ್ಲಿಕಲ್ಲೇ ಆಧಾರ; ಅಪಾಯದಲ್ಲಿ ಸವಾರರು
Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ
Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು
Mangaluru: ಪ್ಲಾಸ್ಟಿಕ್ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !
MUST WATCH
ಹೊಸ ಸೇರ್ಪಡೆ
ಟಿಕೆಟ್ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್
MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್
INDvsNZ: ಟೆಸ್ಟ್ ಕ್ರಿಕೆಟ್ ನಲ್ಲಿ 9000 ರನ್ ಪೂರೈಸಿದ ವಿರಾಟ್ ಕೊಹ್ಲಿ
ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್ ಗೆ ಜಾಮೀನು
ಹಾನಗಲ್ಲ: ಮನುಕುಲಕ್ಕೆ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.