Electricity: 4.68 ಲಕ್ಷ ವಿದ್ಯುತ್‌ ಮೀಟರ್‌ ಬದಲಾವಣೆ

ನಷ್ಟದ ಹೊರೆ ತಪ್ಪಿಸಲು ಮೆಸ್ಕಾಂ ಉಪಕ್ರಮ

Team Udayavani, Sep 22, 2023, 9:12 AM IST

2-electrict-meter

ಬೆಳ್ತಂಗಡಿ: ಹತ್ತಾರು ವರ್ಷಗಳ ಹಿಂದಿನ ವಿದ್ಯುತ್‌ ಮೀಟರ್‌ಗಳ ಕಾರ್ಯಕ್ಷಮತೆ ಕೊರತೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ 4.68 ಲಕ್ಷದಷ್ಟು ಹೊಸ ಮೀಟರ್‌ ಗಳನ್ನು ಅಳವಡಿಸಲು ಮೆಸ್ಕಾಂ ಮುಂದಾಗಿದೆ.

2 ವರ್ಷ ಹಿಂದೆಯೇ ಹಳೆಯ ಮೀಟರ್‌ಗಳ ಸಮಸ್ಯೆಯ ಅರಿವಿದ್ದರೂ ಏಕಕಾಲದಲ್ಲಿ ಹೊಸ ಮೀಟರ್‌ಗಳು ಸರಬರಾಜು ಆಗದಿರುವುದರಿಂದ ಬದಲಾವಣೆ ಸಾಧ್ಯವಾಗಿರಲಿಲ್ಲ. ಆ ಕಾರಣಕ್ಕೆ ಗ್ರಾಹಕರಿಗೆ ಸರಾಸರಿ ಬಿಲ್‌ ನೀಡಲಾಗುತ್ತಿತ್ತು. ಇದು ಕೆಲವು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದರೆ, ಮಿತಿಮೀರಿ ವಿದ್ಯುತ್‌ ಬಳಸುವ ಕೆಲವು ಗ್ರಾಹಕರಿಂದಾಗಿ ಮೆಸ್ಕಾಂಗೂ ನಷ್ಟವಾಗುತ್ತಿತ್ತು.

ಸ್ಟಾಟಿಕ್‌ ಮೀಟರ್‌

ಈ ಹಿಂದಿನ ಮೆಕ್ಯಾನಿಕಲ್‌ (ಚಕ್ರದಂತೆ ಸುತ್ತುವ) ಮೀಟರ್‌ ಗಳು ಬಹುತೇಕ ಕೆಟ್ಟುಹೋಗಿದ್ದವು. ಗ್ರಾಹಕ 100 ಯುನಿಟ್‌ ಬಳಸಿದರೆ ಸರಾಸರಿ 95 ಯುನಿಟ್‌ ಮಾತ್ರ ಅದರಲ್ಲಿ ದಾಖಲಾಗುತ್ತಿತ್ತು. ಇದರಿಂದ ಮೆಸ್ಕಾಂಗೆ ಯುನಿಟ್‌ ಲೆಕ್ಕಾಚಾರದಲ್ಲಿ ಕೊಂಚ ನಷ್ಟವಾಗುತ್ತಿತ್ತು. ಈ ಕಾರಣದಿಂದ ಮೆಕ್ಯಾನಿಕಲ್‌ ಮೀಟರ್‌ಗಳನ್ನು ತೆರವುಗೊಳಿಸಿ ಸ್ಟಾಟಿಕ್‌ ಮೀಟರ್‌ ಅಳವಡಿಸಲಾಗುತ್ತಿದೆ. ಇದು ಬಳಕೆಯಾದ ವಿದ್ಯುತ್ತನ್ನು ನಿಖರವಾಗಿ ಯುನಿಟ್‌ ದಾಖಲಿಸುತ್ತದೆ.

ಗೃಹಜ್ಯೋತಿಗೆ ಪೂರಕ

ರಾಜ್ಯ ಸರಕಾರವು ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆ ಜಾರಿಗೊಳಿಸಿದ್ದು, ಹೆಚ್ಚಿನ ಗ್ರಾಹಕರು ಆಗಸ್ಟ್‌ನಿಂದ ಫ‌ಲಾನುಭವಿಗಳಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಬಿಲ್‌ ಪಾವತಿಸಿದ ಹಾಗೂ ನಿಗದಿತ ಮಿತಿಯೊಳಗೆ ವಿದ್ಯುತ್‌ ಬಳಸಿದ ಗ್ರಾಹಕರಿಗೆ ಶೂನ್ಯ ಬಿಲ್‌ ನೀಡಲಾಗುತ್ತಿದೆ. ಹೊಸ ಸ್ಟಾಟಿಕ್‌ ಮೀಟರ್‌ಗಳಲ್ಲಿ ಸರಿಯಾದ ಯೂನಿಟ್‌ಗಳ ಲೆಕ್ಕಾಚಾರ ಸಿಗುವ ಕಾರಣ ಇದರಿಂದ ಗೃಹಜ್ಯೋತಿಗೆ ಅನುಕೂಲವಾಗಲಿದೆ.

ಹೊಸ ಮೀಟರ್‌ ಅಳವಡಿಕೆ

ಮಂಗಳೂರು ವಿಭಾಗ-7,441 ಕಾವೂರು ಉಪವಿಭಾಗ-6,589 ಬಂಟ್ವಾಳ ಉಪವಿಭಾಗ-4,584 ಪುತ್ತೂರು ಉಪವಿಭಾಗ-2,945 ದ.ಕ.ದಲ್ಲಿ ಒಟ್ಟು 21,559 ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಕಾರ್ಕಳ, ಕಾಪು, ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ, ಶಂಕರನಾರಾಯಣ, ಕೊಲ್ಲೂರು, ಕೋಟ, ನಿಟ್ಟೆ ಉಪವಿಭಾಗಗಳಲ್ಲಿ ಒಟ್ಟು 70 ಸಾವಿರ ಸ್ಟಾಟಿಕ್‌ ಮೀಟರ್‌ಗಳಿಗೆ ಬೇಡಿಕೆ ಇದ್ದು, 26,000 ಮೀಟರ್‌ ಅಳವಡಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಸೌರಶಕ್ತಿ ಉತ್ಪಾದಕರಿಗೆ ಸಿಗದ ರಿಯಾಯಿತಿ

ಮನೆಗಳಲ್ಲಿ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸಿ ಮಿಕ್ಕಿದ್ದನ್ನು ಮೆಸ್ಕಾಂಗೆ ಕೊಡುತ್ತಿರುವ ಗ್ರಾಹಕರು ಗೃಹಜ್ಯೋತಿಯಿಂದ ವಂಚಿತರಾಗಿದ್ದಾರೆ. ವಿದ್ಯುತ್‌ ಕೊರತೆ ನೀಗಿಸುವಲ್ಲಿ ಇವರದು ಬಹುದೊಡ್ಡ ಪಾತ್ರವಾಗಿದ್ದರೂ ಸರಕಾರ ಅವರನ್ನು ಗೃಹಜ್ಯೋತಿಯಿಂದ ಹೊರಗಿಟ್ಟಿದೆ. ಜತೆಗೆ ಈವರೆಗೆ ಬಿಲ್‌ನಲ್ಲಿ ನೀಡಲಾಗುತ್ತಿದ್ದ 50 ರೂ. ರಿಯಾಯಿತಿಯನ್ನು ಹೊಸ ಟ್ಯಾರಿಫ್‌ನಲ್ಲಿ ಕೈಬಿಡಲಾಗಿದೆ. ಮೆಸ್ಕಾಂ ಜತೆ 25 ವರ್ಷಗಳ ಕರಾರು ಮಾಡಿಕೊಂಡಿರುವುದರಿಂದ ಸಂಪರ್ಕ ಕಡಿತಗೊಳಿಸಲೂ ಆಗದ ಪರಿಸ್ಥಿತಿ ಗ್ರಾಹಕರದಾಗಿದೆ. ಈ ಕುರಿತು ಸರಕಾರ ಗಮನಹರಿಸಬೇಕು ಎಂದು ಬೆಳ್ತಂಗಡಿ ತಾಲೂಕಿನ ವೇಣೂರಿನ ಗ್ರಾಹಕ ಗಣೇಶ್‌ ಪೂಜಾರಿ ಆಗ್ರಹಿಸಿದ್ದಾರೆ.

ಈ ಹಿಂದೆ 2018ರಿಂದ 2020ರ ಅವಧಿಯಲ್ಲಿ ಕೇಂದ್ರ ಸರಕಾರದ INTEGRATED POWER DEVELOPMENT SCHEME (ಐಪಿಡಿಎಸ್‌) ಯೋಜನೆಯಡಿ ದ.ಕ. ಜಿಲ್ಲೆಯ ಸುಮಾರು 1.50 ಲಕ್ಷ, ಉಡುಪಿ ಜಿಲ್ಲೆಯ 1 ಲಕ್ಷಕ್ಕೂ ಅಧಿಕ ಮೀಟರ್‌ಗಳ ಬದಲಾವಣೆ ಮಾಡಲಾಗಿತ್ತು.

ಜಿಲ್ಲೆಗೆ ಅಗತ್ಯವಿರುವಷ್ಟು ಸಂಖ್ಯೆಯ ವಿದ್ಯುತ್‌ ಮೀಟರ್‌ ಗಳು ಲಭ್ಯವಿವೆ. ಮೆಸ್ಕಾಂಗೆ ಸಂಬಂಧಿಸಿದ 4 ಜಿಲ್ಲೆಗಳಲ್ಲಿ 4.68 ಲಕ್ಷ ಮೀಟರ್‌ಗಳ ಬೇಡಿಕೆಯಿದೆ. ಸದ್ಯ ಬೇಡಿಕೆ ಆಧಾರದಲ್ಲಿ ಮೀಟರ್‌ ಪೂರೈಸಲಾಗುತ್ತಿದೆ. – ಪದ್ಮಾವತಿ, ಎಂಡಿ, ಮೆಸ್ಕಾಂ ಮಂಗಳೂರು ­

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

3

Puttur: ಅಪರಿಚಿತರಿಂದ ಬಾಲಕನಿಗೆ ಹಲ್ಲೆ

16

Belthangady: ಸಾರಿಗೆ ಬಸ್‌ ಢಿಕ್ಕಿ: ಪಾದಚಾರಿ ಗಂಭೀರ

17

Belthangady: ಕಾಶಿಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

5

Maninalkur: ಶಿಥಿಲಾವಸ್ಥೆಯಲ್ಲಿ ಹಳೆ ಶಾಲಾ ಕಟ್ಟಡ; ಕ್ರಮಕ್ಕೆ ಆಗ್ರಹ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.