ರೈತರ ಗೋಳು; ಬೆಳೆ ಭಕ್ಷಕ ಆಫ್ರಿಕನ್‌ ಬಸವನ ಹುಳುಗಳ ಕಾಟ

ಉರುವಾಲು ಗ್ರಾಮದಲ್ಲಿ ವ್ಯಾಪಕ 100 ಎಕ್ರೆಗೆ ಆವರಿಸಿದ ಬಾಧೆ

Team Udayavani, Aug 13, 2020, 6:17 AM IST

ರೈತರ ಗೋಳು; ಬೆಳೆ ಭಕ್ಷಕ ಆಫ್ರಿಕನ್‌ ಬಸವನ ಹುಳುಗಳ ಕಾಟ

ಬೆಳ್ತಂಗಡಿ: ಅಡಿಕೆ ಧಾರಣೆ ಏರಿಕೆಯಿಂದ ಕೃಷಿಕರ ಮೊಗದಲ್ಲಿ ನಸುನಗು ಮೂಡುತ್ತಿರುವ ಹೊತ್ತಿಗೆ ಕೆಲವು ಕಡೆಗಳಲ್ಲಿ ಆಫ್ರಿಕನ್‌ ಬಸವನ ಹುಳು (African giant snail) ಇನ್ನಿಲ್ಲದಂತೆ ಕೃಷಿಕರನ್ನು ಹೈರಾಣಾಗಿಸುತ್ತಿದೆ.  ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ 100 ಎಕ್ರೆ ಪ್ರದೇಶದಲ್ಲಿ ಆಫ್ರಿಕನ್‌ ಬಸವನ ಹುಳುವಿನ ಕಾಟ ವಿಪರೀತವಾಗಿದೆ. ಐದಾರು ವರ್ಷಗಳ ಹಿಂದೆ ಕಾಸರಗೋಡು ಸೇರಿದಂತೆ ಆಲಂಕಾರು, ಸವಣೂರು, ಕೊçಲ ಗ್ರಾಮಗಳ ಕೃಷಿಕರಿಗೆ ಮಗ್ಗಲು ಮುಳ್ಳಾಗಿದ್ದ ಆಫ್ರಿಕನ್‌ ಬಸವನ ಹುಳು ಪ್ರಸಕ್ತ ಉರುವಾಲು ಗ್ರಾಮದಲ್ಲಿ ವ್ಯಾಪಕವಾಗಿದೆ.

ವಿಷಕ್ಕೂ ಜಗ್ಗುತ್ತಿಲ್ಲ
ನಿಶಾಚರಿಯಾಗಿರುವ ಇವು ಅಡಿಕೆಯ ಹಿಂಗಾರ, ತರ ಕಾರಿ ಬೆಳೆಗಳನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ತಿಂದುಬಿಡುತ್ತಿವೆ. ಅನೇಕ ಕೀಟನಾಶಕಗಳನ್ನು ಪ್ರಯೋಗಿಸಿದರೂ ಪ್ರಯೋಜನ ಶೂನ್ಯ ಎನ್ನುತ್ತಾರೆ ರೈತರು. ತೋಟಗಾರಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಗಣನೆಗೆ ತೆಗೆದುಕೊಂಡಂತಿಲ್ಲ ಎಂಬುದು ಕೃಷಿಕರ ಅಳಲು.

ಗೊಬ್ಬರದೊಂದಿಗೆ ಬಂತೇ?
ಉರುವಾಲು ಗ್ರಾಮದ ಕೃಷಿಕರು ಕೋಳಿ, ಕುರಿ ಗೊಬ್ಬರವನ್ನು ಹೊರ ಜಿಲ್ಲೆಗಳಿಂದ ತರಿಸಿದ್ದು, ಅದರೊಂದಿಗೆ ಇವು ಬಂದಿರಬಹುದೇ ಎಂಬ ಶಂಕೆ ಕೃಷಿಕರದು.

ವೈರಿಗಳಿಗೂ ಬೇಡ!
ಆಫ್ರಿಕನ್‌ ಹುಳುಗಳು ತರಕಾರಿ, ಬಸಳೆ, ಸುವರ್ಣಗೆಡ್ಡೆ, ಕೆಸುಗಳನ್ನು ಕೂಡ ನಾಶ ಮಾಡುತ್ತಿವೆ. ಗದ್ದೆಯಲ್ಲಿ ಪೈರು ತಿಂದು ಮುಗಿದ ಬಳಿಕ ಮಣ್ಣನ್ನು ತಿನ್ನಲು ಆರಂಭಿಸುತ್ತವೆ. ಇವು ಸತ್ತರೆ ಪರಿಸರವಿಡೀ ದುರ್ನಾತ. ಚಿಪ್ಪು ತುಂಬಾ ಗಟ್ಟಿ ಜತೆಗೆ ವಿಷಕಾರಿ. ಮನುಷ್ಯನ ಕಾಲಿಗೆ ಚುಚ್ಚಿದಲ್ಲಿ ಕೊಳೆಯಲಾರಂಭಿಸುತ್ತದೆ. ಇತರ ಕೀಟಗಳ ವೈರಿಗಳು ಎನಿಸಿಕೊಂಡಿರುವ ಸಣ್ಣಪುಟ್ಟ ಪ್ರಾಣಿ-ಪಕ್ಷಿಗಳಿಗೂ ಈ ಹುಳು ವಜ್ಯì. ಆದ್ದರಿಂದ ಸಂತಾನ ವೃದ್ಧಿಯಾಗುತ್ತಿದೆ.

ವರ್ಷಕ್ಕೆ 10 ಸಾವಿರ ಮೊಟ್ಟೆ
ಒಂದು ಹುಳು ವರ್ಷಕ್ಕೆ 10,000ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಮಳೆ ಆರಂಭದೊಂದಿಗೆ ಕಾಣಿಸುವ ಇವು ಬಿಸಿಲು ಬಂದಾಕ್ಷಣ ನೆರಳಿಗಾಗಿ ಪಂಪ್‌ ಶೆಡ್‌, ಮರ, ಮನೆಗಳ ಗೋಡೆಗಳನ್ನು ಆಶ್ರಯಿಸುತ್ತವೆ. ಕನಿಷ್ಠ 150ರಿಂದ 200 ಗ್ರಾಂ ತೂಕ ಹೊಂದಿರುತ್ತವೆ.

ಸೂಕ್ತ ಔಷಧ ಸಿಂಪಡಿಸಿದಲ್ಲಿ ಆಫ್ರಿಕನ್‌ ಬಸವನ ಹುಳು ಬಾಧೆ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ. Metaldehyde ಔಷಧ ಸಿಂಪಡಿಸಬೇಕು. ಯಾವ ಪ್ರಮಾಣ ಎಂಬುದನ್ನು ತಿಳಿಯ ಪಡಿಸಲು ತೋಟಗಾರಿಕೆ ಇಲಾಖೆ ಅಧಿ ಕಾರಿ ಗಳನ್ನು ಸ್ಥಳಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು.
– ಎಚ್‌.ಆರ್‌. ನಾಯಕ್‌, ಉಪ ನಿರ್ದೇಶಕರು

ಟಾಪ್ ನ್ಯೂಸ್

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ

Achraya-das

Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24

Belthangady: ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Belthangady: ಇಸ್ಪೀಟು ಅಡ್ಡೆಗೆ ದಾಳಿ; 23 ಮಂದಿಯ ಸೆರೆ

Belthangady: ಇಸ್ಪೀಟು ಅಡ್ಡೆಗೆ ದಾಳಿ; 23 ಮಂದಿಯ ಸೆರೆ

Puttur: ಸ್ಕೂಟಿ-ಕಾರು ಢಿಕ್ಕಿ; ಸವಾರ ಗಂಭೀರ

Puttur: ಸ್ಕೂಟಿ-ಕಾರು ಢಿಕ್ಕಿ; ಸವಾರ ಗಂಭೀರ

Bantwal: ನೇಣು ಬಿಗಿದು ಆತ್ಮಹತ್ಯೆ

Bantwal: ನೇಣು ಬಿಗಿದು ಆತ್ಮಹತ್ಯೆ

8

Bantwal: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

29

Gujjadi: ನಾಪತ್ತೆಯಾಗಿದ್ದ ವ್ಯಕ್ತಿ ಶವ ಹೊಳೆಯಲ್ಲಿ ಪತ್ತೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.